ಆ್ಯಪ್ನಗರ

ಏಳು ಮಂದಿ ನಿರ್ದೇಶಕರ ಬಂಧನ

ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥೆಯ ಏಳು ಮಂದಿ ನಿರ್ದೇಶಕರುಗಳನ್ನು ಪೂರ್ವ ಡಿಸಿಪಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

Vijaya Karnataka 13 Jun 2019, 5:00 am
ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥೆಯ ಏಳು ಮಂದಿ ನಿರ್ದೇಶಕರುಗಳನ್ನು ಪೂರ್ವ ಡಿಸಿಪಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web 7 ima directors arrest
ಏಳು ಮಂದಿ ನಿರ್ದೇಶಕರ ಬಂಧನ


ದಾದಾಪೀರ್‌, ಅನ್ಸರ್‌ ಪಾಷಾ, ನಿಜಾಮುದ್ದೀನ್‌, ನಾಸಿರ್‌ ಹುಸೇನ್‌, ನವೀದ್‌ ಅಹಮದ್‌, ಅರ್ಷದ್‌ ಖಾನ್‌, ವಾಸಿಂ ಬಂಧಿತರು. ಒಂದು ಕಡೆ ಹೂಡಿಕೆದಾರರ ಭಯ ಮತ್ತೊಂದು ಕಡೆ ಪೊಲೀಸರ ಭಯದಲ್ಲಿ ತಲೆಮರೆಸಿಕೊಂಡಿದ್ದ ನಿರ್ದೇಶಕರುಗಳು ಬುಧವಾರ ಬೆಳಗ್ಗೆ ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್‌ ತಂಡದ ಅಧಿಕಾರಿಗಳ ಎದುರಿಗೆ ಬಂದು ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

4 ದಿನ ಮೊದಲು ಕರೆಸಿದ್ದ

''ಮನ್ಸೂರ್‌ ನಾಪತ್ತೆಯಲ್ಲಿ ನಮ್ಮದೇನೂ ಪಾತ್ರವಿಲ್ಲ. ನಮ್ಮನ್ನೂ ಬಹಳವಾಗಿ ನಂಬಿಸಿ ಕತ್ತಲೆಯಲ್ಲಿ ಇಟ್ಟಿದ್ದ. ದೇಶ ಬಿಡುವುದಕ್ಕೆ 4 ದಿನ ಮೊದಲು ನಮ್ಮನ್ನೆಲ್ಲಾ ಕರೆಸಿ ಸಭೆ ಮಾಡಿದ್ದ. ಸಮಸ್ಯೆಗಳೆಲ್ಲಾ ಬಗೆ ಹರಿದಿವೆ ಎಂದು ನಂಬಿಸಿ ಹೊಸ ಹೂಡಿಕೆದಾರರನ್ನು ಕರೆತರಲು ಹುರಿದುಂಬಿಸಿದ್ದ. ಮತ್ತೆ ಸೋಮವಾರ ಸಭೆ ಸೇರೋಣ ಎಂದು ಆತನೇ ತಿಳಿಸಿದ್ದ. ನಾವೆಲ್ಲಾ ಸೋಮವಾರ ಸಭೆ ಇದೆ ಎಂದುಕೊಂಡೇ ಸಿದ್ಧರಾಗಿದ್ದೆವು. ಆದರೆ ಆ ದಿನ ಬೆಳಗಾಗುವುದರೊಳಗೆ ಆತ ಪರಾರಿ ಆಗಿರುವ ಸುದ್ದಿ ಮಾಧ್ಯಮಗಳ ಮೂಲಕ ನಮಗೆ ತಿಳಿಯಿತು. ಹೀಗಾಗಿ ಆತ ಕಾಣೆಯಾಗಿರುವ ಹಿಂದೆ ನಮ್ಮ ಪಾತ್ರವಿಲ್ಲ. ಎಲ್ಲಾ ರೀತಿಯ ತನಿಖೆಗೆ ಸಹಕರಿಸಲು ನಾವು ಸಿದ್ಧರಾಗಿದ್ದೇವೆ,'' ಎಂದು ಡಿಸಿಪಿ ಮುಂದೆ ಹೇಳಿಕೆ ನೀಡಿದ್ದಾರೆ.

17 ಸಾವಿರ ದಾಟಿದ ಅಹವಾಲು

ಐಎಂಎ ಕಚೇರಿ ಮುಂದೆ ಬುಧವಾರವೂ ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ಹೊರ ರಾಜ್ಯದಿಂದ ಹೂಡಿಕೆದಾರರು ಸಾಗರೋಪಾದಿಯಲ್ಲಿ ಧಾವಿಸಿ ಬಂದಿದ್ದರು. ಎಲ್ಲರಿಗೂ ಅಹವಾಲು ಪತ್ರವನ್ನು ಪೊಲೀಸ್‌ ಸಿಬ್ಬಂದಿ ವಿತರಣೆ ಮಾಡಿದರು. ಬುಧವಾರ ಮಧ್ಯಾಹ್ನದ ವೇಳೆಗೆ ಅಹವಾಲು 14 ಸಾವಿರ ದಾಟಿತ್ತು. ರಾತ್ರಿ 17 ಸಾವಿರ ತಲುಪಿದ್ದು ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ