ಆ್ಯಪ್ನಗರ

New Train Routs: ನೂತನ ರೈಲು ಮಾರ್ಗಗಳ 984 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಸಂಪುಟ ಒಪ್ಪಿಗೆ

New Train Routs: ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ವೇಗ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆ ಚಿಕ್ಕಮಗಳೂರು-ಬೇಳೂರು, ತುಮಕೂರು ರಾಯದುರ್ಗ ಸೇರಿದಂತೆ ರಾಯಚೂರು ಬಾಗಲಕೋಟೆಯ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ಅಂದಾಜು 984 ಕೋಟಿ ರೂ ಮೀಸಲಿಡಲಾಗಿದೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 9 Mar 2023, 8:12 am

ಹೈಲೈಟ್ಸ್‌:

  • ಹೊಸ ರೈಲು ಮಾರ್ಗಗಳ ನಿರ್ಮಾಣ ಯೋಜನೆಗಳಿಗೆ ವೇಗ ಸಿಗುವಂತಾಗಲು 984 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
  • ಚಿಕ್ಕಮಗಳೂರು -ಬೇಲೂರು, ತುಮಕೂರು -ರಾಯದುರ್ಗ, ಗಿಣಿಗೇರಾ -ರಾಯಚೂರು ಹಾಗೂ ಬಾಗಲಕೋಟೆ -ಕುಡಜಿ ಈ ನಾಲ್ಕು ಹೊಸ ರೈಲು ಮಾರ್ಗಗಳನ್ನು ಸಮಾನ ಪಾಲು ಭರಿಸುವ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ.
  • * ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯಿಂದ ನೀರೆತ್ತಿ, ತಾಲೂಕಿನ 14 ಗ್ರಾಮಗಳ 8,390 ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಒಟ್ಟು 567 ಕೋಟಿ ರೂ. ಮೊತ್ತದ ಕರಗಾಂವ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Train
ರೈಲು ಸಾಂದರ್ಭಿಕ ಚಿತ್ರ
ಬೆಂಗಳೂರು: ಹೊಸ ರೈಲು ಮಾರ್ಗಗಳ ನಿರ್ಮಾಣ ಯೋಜನೆಗಳಿಗೆ ವೇಗ ಸಿಗುವಂತಾಗಲು 984 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಚಿಕ್ಕಮಗಳೂರು -ಬೇಲೂರು, ತುಮಕೂರು -ರಾಯದುರ್ಗ, ಗಿಣಿಗೇರಾ -ರಾಯಚೂರು ಹಾಗೂ ಬಾಗಲಕೋಟೆ -ಕುಡಜಿ ಈ ನಾಲ್ಕು ಹೊಸ ರೈಲು ಮಾರ್ಗಗಳನ್ನು ಸಮಾನ ಪಾಲು ಭರಿಸುವ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳ ಪರಿಷ್ಕೃತ ಅಂದಾಜು ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯದ ಹೆಚ್ಚುವರಿ ಪಾಲು 984.41 ಕೋಟಿ ರೂ.ಗಳನ್ನು ಭರಿಸಲು ನಿರ್ಧರಿಸಲಾಯಿತು.

Special Express Trains: ನೈರುತ್ಯ ರೈಲ್ವೆ ವಲಯದ 10 ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ, ಎಲ್ಲಿಂದ ಎಲ್ಲಿಗೆ ಸಂಚಾರ?

ಬಿಎಸ್‌ಎನ್‌ಎಲ್‌ಗೆ ಜಾಗ:

ಗ್ರಾಮೀಣ ಭಾಗದಲ್ಲಿಇಂಟರ್‌ನೆಟ್‌ ಸಂಪರ್ಕ ವ್ಯವಸ್ಥೆ (4ಜಿ) ಬಲಪಡಿಸಲು ಟವರ್‌ಗಳ ಸ್ಥಾಪನೆಗಾಗಿ ಪ್ರತಿ ಗ್ರಾಮದಲ್ಲಿ 2,000 ಚದರ ಅಡಿ ಜಮೀನನ್ನು ಬಿಎಸ್‌ಎನ್‌ಎಲ್‌ ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ಮಂಜೂರು.

ಸಾರಿಗೆ ನಿಗಮಗಳಿಗೆ ರಿಲೀಫ್‌:

ಬಿಎಂಟಿಸಿ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳು ಸರಕಾರಕ್ಕೆ ಪಾವತಿಸಬೇಕಿದ್ದ 166.99 ಕೋಟಿ ರೂ. ಮೋಟಾರು ವಾಹನ ತೆರಿಗೆಯಿಂದ ವಿನಾಯಿತಿ.

ಸರಕಾರಿ ನೌಕರರಿಗೆ ಪರಿಹಾರ:
ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ನಿರೀಕ್ಷಿಸಿ ಮಂಜೂರು ಮಾಡಿರುವ ಮಧ್ಯಂತರ ಪರಿಹಾರಕ್ಕೆ ಸಂಪುಟ ಘಟನೋತ್ತರ ಅನುಮೋದನೆ ನೀಡಿತು. ಈ ಉದ್ದೇಶಕ್ಕೆ 7,246.85 ಕೋಟಿ ರೂ. ವೆಚ್ಚ ಭರಿಸಲು ಸಂಪುಟ ಒಪ್ಪಿತು.

ಜಿಎಂ ಸಿದ್ದೇಶ್ವರ್‌ ಸಕ್ಕರೆ ಕಾರ್ಖಾನೆ:
ಹೊಸಪೇಟೆ ತಾಲ್ಲೂಕಿನ ಜಂಬುನಾಥನಹಳ್ಳಿಯಲ್ಲಿ ಜಿಎಂ ಸಿದ್ದೇಶ್ವರ್‌ ಗ್ರೂಪ್‌ನ 'ಹಂಪಿ ಶುಗರ್ಸ್‌ ಪ್ರೈ.ಲಿ.' ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲು ಸಂಪುಟ ಒಪ್ಪಿಗೆ ನೀಡಿದ್ದು, ಈ ಉದ್ದೇಶಕ್ಕೆ 87 ಎಕರೆ ಭೂಮಿ ಮಂಜೂರು ಮಾಡಲು ಸಮ್ಮತಿಸಿತು. 454 ಕೋಟಿ ರೂ. ವೆಚ್ಚದಲ್ಲಿಈ ಕಾರ್ಖಾನೆ ಆರಂಭವಾಗಲಿದ್ದು, ಸ್ಥಳೀಯವಾಗಿ 2,000 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.

Railway: ಕರ್ನಾಟಕದ 5 ಮಾರ್ಗಗಳಲ್ಲಿ 130 ಕಿ.ಮೀ. ವೇಗದಲ್ಲಿ ಓಡಲಿವೆ ಎಕ್ಸ್‌ಪ್ರೆಸ್ ರೈಲುಗಳು!
ಸಂಪುಟದ ಪ್ರಮುಖ ತೀರ್ಮಾನಗಳು:
* ರಾಯಚೂರು ವಿಮಾನ ನಿಲ್ಧಾಣ ನಿರ್ಮಾಣ ಯೋಜನೆ ಸಂಬಂಧ 218 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.
* ಮಂಗಳೂರಿನ ಕುಳಾಯಿಯಲ್ಲಿರುವ ಕರ್ನಾಟಕ ಮೀನುಗಾರಿಕೆ ನಿಗಮದ ಮೀನು ಸಂಸ್ಕರಣಾ ಸ್ಥಾವರವನ್ನು ಕೇಂದ್ರದ ಜಂಟಿ ಸಹಭಾಗಿತ್ವದಲ್ಲಿ ಒಟ್ಟು 25 ಕೋಟಿ ರೂ. ವೆಚ್ಚದಲ್ಲಿ'ಮೆರೈನ್‌ ಎಕ್ಸ್‌ಪೋರ್ಟ್‌ ಯೂನಿಟ್‌' ಆಗಿ ಉನ್ನತೀಕರಣ.
* ಕಲಬುರಗಿ ವಿಶ್ವವಿದ್ಯಾಲಯದಲ್ಲಿ 13.69 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಕ್ಲಾಸ್‌ರೂಂ, ಹೈಬ್ರಿಡ್‌ ಕಲಿಕೆ ಸೌಲಭ್ಯ, ವಿಡಿಯೊ ಕಾನ್ಫರೆನ್ಸಿಂಗ್‌ ಮತ್ತಿತರ ಕೆಲಸಗಳಿಗೆ ಅನುಮೋದನೆ.
* ಸಾಗರ ತಾಲೂಕು ಆಡಳಿತ ಸೌಧ ಕಟ್ಟಡದ ಹೆಚ್ಚುವರಿ ಕಾಮಗಾರಿಗೆ 13.65 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ.
* ಬೆಂಗಳೂರು ಜಲಮಂಡಳಿಯ ಶಿವ ಅಣೆಕಟ್ಟೆಯಿಂದ ಎಸ್‌ಬಿಆರ್‌ ವರೆಗಿನ 2.5 ಕಿ.ಮೀ. ಉದ್ದದ ಕೊಳವೆ ಜೋಡಿಸುವ ಕಾಮಗಾರಿ ಸಂಬಂಧ 93.05 ಕೋಟಿ ರೂ.ಗಳ ಅಂದಾಜಿಗೆ ಅನುಮೋದನೆ.
* ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯಿಂದ ನೀರೆತ್ತಿ, ತಾಲೂಕಿನ 14 ಗ್ರಾಮಗಳ 8,390 ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಒಟ್ಟು 567 ಕೋಟಿ ರೂ. ಮೊತ್ತದ ಕರಗಾಂವ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
* ಬಿ.ಆರ್‌.ಪ್ರಾಜೆಕ್ಟ್, ಗಾಜನೂರು ಡ್ಯಾಮ್‌ ಹಾಗೂ ಆಲಮಟ್ಟಿಯಲ್ಲಿಮೀನು ಮರಿ ಉತ್ಪಾದನಾ ಕೇಂದ್ರಗಳಿಗೆ 39 ಕೋಟಿ ರೂ.
* ಬೆಂಗಳೂರಿನ ಜಾಲ ಹೋಬಳಿಯಲ್ಲಿ7 ಎಕರೆ ಜಮೀನನ್ನು ಕೊಡವ ಸಮಾಜಕ್ಕೆ ಮಾರಾಟ.
* ದೇವಗಿರಿಯಲ್ಲಿ ರಾಷ್ಟ್ರೋತ್ತನ ಪರಿಷತ್‌ಗೆ 10 ಎಕರೆ ಜಮೀನು.
* ಗೋಕಾಕ್‌ ಜಲಪಾತದ ಬಳಿ ಜನವಸತಿ ಪ್ರದೇಶಕ್ಕೆ ನೆರೆ ನೀರು ನುಗ್ಗದಂತೆ 685 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ.

ಮಾಹಿತಿ ಕೊರತೆ ಹಿನ್ನೆಲೆ: ಬಡ್ತಿ ಪ್ರಧಿಸ್ತಾಧಿವ ಮುಂದೂಡಿಕೆ
ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸದೇ ನೇರವಾಗಿ 6 ರಿಂದ 8ನೇ ತರಗತಿ ಶಿಕ್ಷಕರನ್ನಾಗಿ ನಿಯುಕ್ತಿಗೊಳಿಸುವ ಪ್ರಸ್ತಾವನೆ ಸಂಬಂಧ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಬುಧವಾರ ನಧಿಡೆದ ಸಚಿವ ಸಂಪುಟ ಸಭೆಯಲ್ಲಿಈ ಬಗ್ಗೆ ಚರ್ಚೆ ನಡೆದರೂ ಅನುಮೋದನೆ ಸಿಗಲಿಲ್ಲ. ಸೇವಾನಿರತ ಪದವೀಧರರಲ್ಲಿ ಶೇ.40 ರಷ್ಟು ಮಂದಿಯನ್ನು ಪರೀಕ್ಷೆ ನಡೆಸದೇ 6ರಿಂದ 8ನೇ ತರಗತಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ