ಆ್ಯಪ್ನಗರ

ಸಾಲ ಮನ್ನಾ ಫಲಾನುಭವಿಗಳ ಖಾತೆಗೆ ಆಧಾರ್‌, ಪಾನ್‌ ಲಿಂಕ್‌

ಕೃಷಿ ಸಾಲ ಮನ್ನಾ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಮತ್ತು ಪಾನ್‌ ಸಂಖ್ಯೆಗಳನ್ನು ಲಿಂಕ್‌ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

TIMESOFINDIA.COM 31 May 2018, 3:13 pm
ಬೆಂಗಳೂರು: ಕೃಷಿ ಸಾಲ ಮನ್ನಾ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಮತ್ತು ಪಾನ್‌ ಸಂಖ್ಯೆಗಳನ್ನು ಲಿಂಕ್‌ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.
Vijaya Karnataka Web ADHAR


ರಾಜ್ಯ ಸರಕಾರದ ಈ ಕ್ರಮದಿಂದ ನಿಜವಾಗಿಯೂ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರು, ಬೆಳೆ ಬೆಳೆಯುವುದಕ್ಕಾಗಿಯೇ ಸಾಲ ಪಡೆಯುವ ರೈತರು ಯಾರು ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಲಿದೆ. ಹಣವು ನೇರವಾಗಿ ಫಲಾನುಭವಿಗೆ ತಲುಪಲಿದೆ. ಹೀಗಾಗಿ ಪಹಣಿಯಂತೆಯೇ ಆಧಾರ್‌ ಮತ್ತು ಪಾನ್‌ ಲಿಂಕ್‌ ಮಾಡಲು ಸರಕಾರ ಚಿಂತನೆ ನಡೆಸಿದೆ. ಇದರಿಂದ ಸರಕಾರದ ಮೇಲೆ ಬೀಳುವ ಸಾಲದ ಹೊರೆ ಕೂಡ ಕಡಿಮೆಯಾಗಲಿದೆ

ಸಾಲ ಮನ್ನಾ ಫಲಾನುಭವಿಗಳ ಖಾತೆಗೆ ಆಧಾರ್‌ ಮತ್ತು ಪಾನ್‌ ಜೋಡಣೆ ಮಾಡುವುದರಿಂದ ರೈತರ ಆರ್ಥಿಕ ಸ್ಥಿತಿಗತಿಯ ಬಗ್ಗೆ ಪೂರ್ಣ ಮಾಹಿತಿ ದೊರೆಯುವ ಜತೆಗೆ ಅವರು ಸಾಲ ಮನ್ನಾ ಫಲಾನುಭವಿಗಳಾಗಲು ಅರ್ಹರೇ ಅಲ್ಲವೇ ಎಂಬುದೂ ತಿಳಿಯಲಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಈಗಾಗಲೇ ಆಧಾರ್‌ ಜೋಡಣೆಯಾಗಿದೆ. ರೈತರಿಗೆ ಅವರ ಜಮೀನು ಪತ್ರಗಳ ಆಧಾರದಲ್ಲಿ ಸಾಲ ನೀಡಲಾಗುತ್ತಿತ್ತು. ಕೆಲವು ರೈತರು ಕೃಷಿ ಹೊರತು ಪಡಿಸಿ ವ್ಯಾಪಾರ ಮತ್ತಿತರ ಉದ್ದೇಶಗಳಿಗೆ ಸಾಲವನ್ನು ಬಳಸಿಕೊಳ್ಳುತ್ತಾರೆ. ಪಹಣಿಯನ್ನು ಪರಿಶೀಲಿಸಿದಾಗ ಸಾಲ ಪಡೆದ ಅವಧಿಯಲ್ಲಿ ಬೆಳೆ ಬೆಳೆಯದಿರುವುದು ಗಮನಕ್ಕೆ ಬಂದರೆ ಅಂಥ ರೈತರು ಸಾಲದ ಫಲಾನುಭವಿಗಳಾಗುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ