ಆ್ಯಪ್ನಗರ

ಸಂತೋಷ್‌ ಭೇಟಿ ಆಕಸ್ಮಿಕ : ಹಿರೇಮಠ

ಸರಕಾರ ಬಳ್ಳಾರಿಯಲ್ಲಿ ಜಿಂದಾಲ್‌ ಕಂಪನಿಗೆ 3667 ಎಕರೆ ಭೂಮಿ ಮಾರಾಟ ಮಾಡಲು ಹೊರಟಿರುವ ಸರಕಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ಕೋರಿ ಪತ್ರ ನೀಡಲು ಬಿಜೆಪಿ ಕಚೇರಿಗೆ ತೆರಳಿದ್ದಾಗಿ ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್‌.ಹಿರೇಮಠ ಸ್ಪಷ್ಟಪಡಿಸಿದ್ದಾರೆ.

Vijaya Karnataka 20 Jun 2019, 5:00 am
ಬೆಂಗಳೂರು : ಸರಕಾರ ಬಳ್ಳಾರಿಯಲ್ಲಿ ಜಿಂದಾಲ್‌ ಕಂಪನಿಗೆ 3667 ಎಕರೆ ಭೂಮಿ ಮಾರಾಟ ಮಾಡಲು ಹೊರಟಿರುವ ಸರಕಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ಕೋರಿ ಪತ್ರ ನೀಡಲು ಬಿಜೆಪಿ ಕಚೇರಿಗೆ ತೆರಳಿದ್ದಾಗಿ ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್‌.ಹಿರೇಮಠ ಸ್ಪಷ್ಟಪಡಿಸಿದ್ದಾರೆ.
Vijaya Karnataka Web accidental meeting between b l santhosh says s r hiremutt
ಸಂತೋಷ್‌ ಭೇಟಿ ಆಕಸ್ಮಿಕ : ಹಿರೇಮಠ


''ಆರ್‌ಎಸ್‌ಎಸ್‌ ಮುಖಂಡ ಬಿ.ಎಲ್‌.ಸಂತೋಷ್‌ ಭೇಟಿ ಪೂರ್ವನಿಯೋಜಿತವಲ್ಲ. ಎಚ್‌.ಕೆ.ಪಾಟೀಲ್‌, ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾದಂತೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಭೇಟಿಗಾಗಿ ವಿಧಾನಸೌಧಕ್ಕೆ ತೆರಳಿದ್ದೆ. ಆದರೆ ಅವರ ಕಚೇರಿಯಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ. ಪತ್ರವನ್ನು ಕೊಡಲು ಬಿಜೆಪಿ ಕಚೇರಿಗೆ ಹೋಗಿದ್ದೆವು. ಅಲ್ಲಿ ನಮ್ಮ ಸಹಾಯಕ ಪತ್ರ ನೀಡಿದ್ದಕ್ಕೆ ಬಿಜೆಪಿ ಕಚೇರಿ ಸಿಬ್ಬಂದಿ ಯಾವುದೇ ಸ್ವೀಕೃತಿ ಪತ್ರ ನೀಡುವುದಿಲ್ಲವೆಂದು ಹೇಳಿದರು. ಆಗ ನಮಗೆ ಸ್ವೀಕೃತಿ ಬೇಕೇ ಬೇಕು ಎಂದು ಕೇಳಲು ನಾನೇ ಸ್ವತಃ ಸ್ವಾಗತಕಾರರ ಬಳಿ ಹೋದೆ. ಆಗ ಅಲ್ಲಿದ್ದವರು ನನ್ನನ್ನು ಗುರುತಿಸಿ ಸಂತೋಷ್‌ ಎಂಬುವವರು ಇದ್ದಾರೆಂದು ಕರೆದುಕೊಂಡು ಹೋದರು. ಅವರಿಗೂ ನಮ್ಮ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಟ್ಟು ಪತ್ರ ಕೊಟ್ಟು ಬಂದಿದ್ದೇವೆ. ಅಲ್ಲಿ ತನಕ ಸಂತೋಷ್‌ ಅವರನ್ನು ನೋಡಿಯೂ ಇರಲಿಲ್ಲ, ಅವರ ಹೆಸರು ಗೊತ್ತಿರಲೂ ಇಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ತಪ್ಪು ವರದಿಗಳು ಬರುತ್ತಿವೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಜಿಂದಾಲ್‌ ಕಂಪನಿಯ ಈ ಭೂ ಹಗರಣ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಆಂದೋಲನವಾಗಿ ಪರಿವರ್ತನೆಗೊಳ್ಳಲಿದೆ. ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ರಾಜಕೀಯ ಪಕ್ಷಗಳು, ಮುಖಂಡರು ಹಾಗೂ ವಿವಿಧ ಸಂಘಸಂಸ್ಥೆಗಳನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುತ್ತಿದೆ. ಇದರ ಭಾಗವಾಗಿ ಯಡಿಯೂರಪ್ಪಗೆ ಪತ್ರ ಕೊಡಲು ಹೋಗಿದ್ದೇವೆ ವಿನಃ ಇನ್ಯಾವುದೇ ಉದ್ದೇಶವಿಲ್ಲ,''ಎಂದು ಅವರನ್ನು ಸಂಪರ್ಕಿಸಿದ 'ವಿಕ' ಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ