ಆ್ಯಪ್ನಗರ

ಅಪಘಾತದಲ್ಲಿ ಬಾಲಕ ಸಾವು: ಸ್ಥಳೀಯರಿಂದ ಲಾರಿ ಚಾಲಕನ ಹತ್ಯೆ

ಆನೇಕಲ್‌: ಆರು ವರ್ಷದ ಬಾಲಕನ ಸಾವಿಗೆ ಕಾರಣನಾದ ಲಾರಿ ಚಾಲಕನನ್ನು ಸ್ಥಳೀಯರೇ ಹಿಡಿದು ಥಳಿಸಿ ಕೊಂದು ಹಾಕಿದ ಘಟನೆ ಬೆಂಗಳೂರಿನ ಆನೇಕಲ್‌ ತಾಲೂಕಿನ ಹೆಬ್ಬಗೋಡಿಯಲ್ಲಿ ಭಾನುವಾರ ಸಂಜೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 12 Mar 2019, 5:00 am
-ಆಯತಪ್ಪಿ ಬಿದ್ದ ಬಾಲಕನ ಮೇಲೆ ಹರಿದಿದ್ದ ಕಾಂಕ್ರೀಟ್‌ ಲಾರಿ-
Vijaya Karnataka Web accidentdriver killed
ಅಪಘಾತದಲ್ಲಿ ಬಾಲಕ ಸಾವು: ಸ್ಥಳೀಯರಿಂದ ಲಾರಿ ಚಾಲಕನ ಹತ್ಯೆ


-ಚಾಲಕನ ಮೇಲೆ ಗಂಭೀರ ಹಲ್ಲೆ ನಡೆಸಿದ ಸ್ಥಳೀಯರು-'

-ಆಸ್ಪತ್ರೆಯಲ್ಲಿ ಚಾಲಕ ಸಾವು-

ಆನೇಕಲ್‌: ಆರು ವರ್ಷದ ಬಾಲಕನ ಸಾವಿಗೆ ಕಾರಣನಾದ ಲಾರಿ ಚಾಲಕನನ್ನು ಸ್ಥಳೀಯರೇ ಹಿಡಿದು ಥಳಿಸಿ ಕೊಂದು ಹಾಕಿದ ಘಟನೆ ಬೆಂಗಳೂರಿನ ಆನೇಕಲ್‌ ತಾಲೂಕಿನ ಹೆಬ್ಬಗೋಡಿಯಲ್ಲಿ ಭಾನುವಾರ ಸಂಜೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ಮೂಲದ ಬಾಲಕ ಮಹಮದ್‌ ಅರ್ಫಾನ್‌ ಮೃತಪಟ್ಟಿದ್ದು, ಥಳಿತಕ್ಕೊಳಗಾದ ಉತ್ತರಪ್ರದೇಶ ಮೂಲದ ಚಾಲಕ ರಾಜೇಶ್‌ ಶ್ಯಾಮ್‌(34) ಸೋಮವಾರ ಮೃತಪಟ್ಟಿದ್ದಾನೆ.

ಘಟನೆ ವಿವರ: ಅರ್ಫಾನ್‌ ತನ್ನ ತಾಯಿ ಜತೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವೇಳೆ ಆಯುತಪ್ಪಿ ರಸ್ತೆಗೆ ಬಿದ್ದಿದ್ದ. ಇದೇ ಮಾರ್ಗದಲ್ಲಿ ಬಂದ ಸಿಮೆಂಟ್‌ ಕಾಂಕ್ರೀಟ್‌ ಮಿಕ್ಸರ್‌ ತುಂಬಿದ್ದ ಲಾರಿ ಬಾಲಕನ ತಲೆ ಮೇಲೆ ಹರಿದಿದ್ದು, ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಮಗ ಲಾರಿಯಡಿಗೆ ಬಿದ್ದಿದ್ದನ್ನು ಕಣ್ಣಾರೆ ಕಂಡ ಆತನ ತಾಯಿ ಜೋರಾಗಿ ಕಿರುಚಿಕೊಂಡಿದ್ದು, ವಿಷಯ ತಿಳಿದ ಸ್ಥಳೀಯರು ಹಾಗೂ ಬಂಧುಗಳು ಸ್ಥಳದಲ್ಲಿ ಜಮಾಯಿಸಿದ್ದರು. ಉದ್ರಿಕ್ತಗೊಂಡ ಗುಂಪು ಚಾಲಕ ರಾಜೇಶ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಲು ಆರಂಭಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಚಾಲಕನನ್ನು ಗುಂಪಿನಿಂದ ಪಾರುಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಂಭೀರ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ