ಆ್ಯಪ್ನಗರ

‘ರೋಡ್ ಚನ್ನಾಗಿದ್ರೇ ಆಕ್ಸಿಡೆಂಟ್ ಆಗೋದು’!: ಡಿಸಿಎಂ ಕಾರಜೋಳ ವಿಚಿತ್ರ ವಿಶ್ಲೇಷಣೆ

ಅಪಘಾತಗಳು ಸಂಭವಿಸೋದು ಏಕೆ ಎಂಬ ಪ್ರಶ್ನೆಗೆ ಲೋಕೋಪಯೋಗಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿಚಿತ್ರ ವಿಶ್ಲೇಷಣೆಯೊಂದನ್ನು ಕೊಟ್ಟಿದ್ದಾರೆ. ಅವರ ಪ್ರಕಾರ ರಸ್ತೆ ಕೆಟ್ಟದಾಗಿದ್ರೆ ಅಪಘಾತ ಪ್ರಮಾಣ ಕಡಿಮೆ ಇರುತ್ತಂತೆ!

Vijaya Karnataka Web 12 Sep 2019, 12:18 pm
ಬೆಂಗಳೂರು: ಕೆಟ್ಟ ರಸ್ತೆ ಇದ್ರೆ ಆಕ್ಸಿಡೆಂಟ್ ಜಾಸ್ತಿ ಆಗುತ್ತೆ ಅಂತಾ ಯಾರು ಹೇಳಿದ್ದು? ರೋಡ್ ಚನ್ನಾಗಿದ್ರೇ ಆಕ್ಸಿಡೆಂಟ್ ಜಾಸ್ತಿ ಆಗೋದು! ಹೀಗಂತಾ ಹೇಳಿರೋದು ರಾಜ್ಯದ ನಂಬರ್ 1 ಡಿಸಿಎಂ ಗೋವಿಂದ ಕಾರಜೋಳ. ಲೋಕೋಪಯೋಗಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ, ಒಳ್ಳೆ ರಸ್ತೆ ಇದ್ರೆ ಅಪಘಾತ ಜಾಸ್ತಿ ಅನ್ನೋ ವಿಶ್ಲೇಷಣೆ ಮಾಡಿದ್ದಾರೆ.
Vijaya Karnataka Web govinda karajola


ಈ ಗಗನಯಾತ್ರಿ ನಡೆದಾಡಿದ್ದು ಎಲ್ಲಿ? ನೋಡಿ ವೈರಲ್‌ ವೀಡಿಯೋ

‘ಪ್ರತಿ ವರ್ಷ ರಾಜ್ಯದಲ್ಲಿ 10,000 ಅಪಘಾತಗಳು ಆಗುತ್ತವೆ, ಮಾಧ್ಯಮಗಳು ರಸ್ತೆ ಸರಿ ಇಲ್ಲ ಎಂದು ಸರ್ಕಾರವನ್ನು ದೂಷಿಸುತ್ತವೆ. ಆದರೆ, ಒಳ್ಳೆಯ ರಸ್ತೆಗಳಿಂದಲೇ ಅಪಘಾತ ಸಂಭವಿಸುತ್ತೆ ಅನ್ನೋದು ನನ್ನ ನಂಬಿಕೆ’ ಅಂತಾರೆ ಕಾರಜೋಳ. ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸುವ ಕೇಂದ್ರ ಸರ್ಕಾರದ ಕಾನೂನಿನ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾರಜೋಳ, ಮಾನವೀಯತೆ ದೃಷ್ಟಿಯಿಂದ ದುಬಾರಿ ದಂಡವನ್ನು ಕಡಿಮೆ ಮಾಡ್ತಿದ್ದೇವೆ ಎಂದಿದ್ದಾರೆ. ಮಹಾರಾಷ್ಟ್ರ, ಗೋವಾ, ಗುಜರಾತ್ ಕೂಡಾ ಇದೇ ಹಾದಿ ಹಿಡಿದಿವೆ ಎಂದು ಕಾರಜೋಳ ಹೇಳಿದ್ದಾರೆ.

‘ದುಬಾರಿ ದಂಡ ವಿಧಿಸೋದಕ್ಕೆ ತಮ್ಮ ವಿರೋಧವಿದೆ ಎಂದಿರುವ ಡಿಸಿಎಂ ಕಾರಜೋಳ, ಅತಿ ಹೆಚ್ಚು ಅಪಘಾತಗಳು ಸಂಭವಿಸೋದು ಹೆದ್ದಾರಿಯಲ್ಲಿ ಎಂದಿದ್ದಾರೆ. ದುಬಾರಿ ದಂಡವನ್ನು ಪರಿಷ್ಕರಿಸಲು ಕೂಡಲೇ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾರಜೋಳ ಹೇಳಿದ್ದಾರೆ.

ಸತಾರಾ: ಭೀಕರ ಅಪಘಾತದಲ್ಲಿ ಬಸ್ ಚಾಲಕ ಸೇರಿ 6 ಜನರ ದುರ್ಮರಣ, 10ಕ್ಕೂ ಹೆಚ್ಚು ಜನರಿಗೆ ಗಾಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ