ಆ್ಯಪ್ನಗರ

ಪೊಲೀಸ್‌ ಕಮೀಷನರ್‌ ಭೇಟಿಯಾದ ಅರ್ಜುನ್‌ ಸರ್ಜಾ

ಮೀ ಟೂ ಆರೋಪ ಎದುರಿಸುತ್ತಿರುವ ನಟ ಅರ್ಜುನ್‌ ಸರ್ಜಾ ಸೋಮವಾರ ಮಧ್ಯಾಹ್ನ ನಗರ ಪೊಲೀಸ್‌ ಕಮಿಷನರ್‌ ಟಿ.ಸುನಿಲ್‌ಕುಮಾರ್‌ ಅವರನ್ನು ಭೇಟಿ ಮಾಡಿ ಅರ್ಧ ಗಂಟೆ ಕಾಲ ಚರ್ಚೆ ನಡೆಸಿದರು.

Vijaya Karnataka 22 Jan 2019, 5:00 am
ಬೆಂಗಳೂರು : ಮೀ ಟೂ ಆರೋಪ ಎದುರಿಸುತ್ತಿರುವ ನಟ ಅರ್ಜುನ್‌ ಸರ್ಜಾ ಸೋಮವಾರ ಮಧ್ಯಾಹ್ನ ನಗರ ಪೊಲೀಸ್‌ ಕಮಿಷನರ್‌ ಟಿ.ಸುನಿಲ್‌ಕುಮಾರ್‌ ಅವರನ್ನು ಭೇಟಿ ಮಾಡಿ ಅರ್ಧ ಗಂಟೆ ಕಾಲ ಚರ್ಚೆ ನಡೆಸಿದರು.
Vijaya Karnataka Web actor arjun sarja met police commissioner
ಪೊಲೀಸ್‌ ಕಮೀಷನರ್‌ ಭೇಟಿಯಾದ ಅರ್ಜುನ್‌ ಸರ್ಜಾ


ನಟಿ ಶ್ರುತಿ ಹರಿಹರನ್‌ ಅವರು ಸರ್ಜಾ ವಿರುದ್ಧ ಸೈಬರ್‌ ಠಾಣೆ ಮತ್ತು ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಎರಡೂ ದೂರುಗಳ ತನಿಖೆ ಪ್ರಗತಿಯಲ್ಲಿದೆ. ಈ ಕೇಸುಗಳ ಬಗ್ಗೆ ಚರ್ಚಿಸುವುದಕ್ಕಾಗಿಯೇ ಸರ್ಜಾ ಕಮಿಷನರ್‌ ಅವರನ್ನು ಭೇಟಿ ಆಗಿದ್ದರು ಎಂದು ತಿಳಿದು ಬಂದಿದೆ.

ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿರುವ ಕಮಿಷನರ್‌ ಕಚೇರಿಗೆ ಬಂದ ಸರ್ಜಾ ಜತೆ ಅವರ ಮ್ಯಾನೇಜರ್‌ ಕೂಡ ಇದ್ದರು.ಈ ಸಂದರ್ಭ ಎದುರಾದ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಗು ನಗುತ್ತಲೇ 'ನೋ ಕಾಮೆಂಟ್‌' ಅಂತಷ್ಟೇ ಹೇಳಿ ನಿರ್ಗಮಿಸಿದರು. ಸರ್ಜಾ ಭೇಟಿ ಕುರಿತ ಹೆಚ್ಚಿನ ಮಾಹಿತಿ ನೀಡಲು ಕಮಿಷನರ್‌ ಸುನಿಲ್‌ಕುಮಾರ್‌ ಕೂಡ ನಿರಾಕರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ