ಆ್ಯಪ್ನಗರ

ಸಂಘ ನಿಷ್ಠ ಆಡ್ವಾಣಿ ನೀಲಿಗಣ್ಣಿನ ಹುಡುಗ !

​ಬಿಜೆಪಿಯ ವರಿಷ್ಠ ನಾಯಕ ಎಲ್‌.ಕೆ. ಆಡ್ವಾಣಿಯವರ ರಥಯಾತ್ರೆಗಳ ಯಶಸ್ಸಿನ ಹಿಂದೆ ಅನಂತಕುಮಾರ್‌ ಪಾತ್ರವೂ ಇತ್ತು. ಆಡ್ವಾಣಿ ನೇತೃತ್ವದಲ್ಲಿ ನಡೆದ ರಥಯಾತ್ರೆಗಳ ಸಂದರ್ಭದಲ್ಲಿ ಅನಂತಕುಮಾರ್‌ ಸದಾ ಜತೆಗಿರುತ್ತಿದ್ದರು.

Vijaya Karnataka 13 Nov 2018, 9:19 am
1998ರಲ್ಲಿ ಮೊದಲ ಬಾರಿ ಕೇಂದ್ರ ಸಚಿವರಾದಾಗ ಅನಂತಕುಮಾರ್‌ ಅವರಿಗೆ 39 ವರ್ಷ. ವಾಜಪೇಯಿ ಸಂಪುಟ ಸೇರಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಯೂ ಅವರದಾಗಿತ್ತು. ಅಂದು ವಾಜಪೇಯಿ, ಆಡ್ವಾಣಿ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ 3ನೇಯವರಾಗಿ ಅನಂತಕುಮಾರ್‌ ಸಂಪುಟ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆಡ್ವಾಣಿಯವರ ನೀಲಿಗಣ್ಣಿನ ಹುಡುಗ ಎಂದೇ ಅನಂತಕುಮಾರ್‌ ಅವರನ್ನು ಗುರುತಿಸಲಾಗುತ್ತಿತ್ತು. ಈ ಕಾರಣದಿಂದಲೇ ವಾಜಪೇಯಿ ಸಂಪುಟದಲ್ಲಿ ಅವರು ಅಷ್ಟೊಂದು ಪ್ರಭಾವಿಯಾಗಿದ್ದರು.
Vijaya Karnataka Web Advani- Anant


ಬಿಜೆಪಿಯ ವರಿಷ್ಠ ನಾಯಕ ಎಲ್‌.ಕೆ. ಆಡ್ವಾಣಿಯವರ ರಥಯಾತ್ರೆಗಳ ಯಶಸ್ಸಿನ ಹಿಂದೆ ಅನಂತಕುಮಾರ್‌ ಪಾತ್ರವೂ ಇತ್ತು. ಆಡ್ವಾಣಿ ನೇತೃತ್ವದಲ್ಲಿ ನಡೆದ ರಥಯಾತ್ರೆಗಳ ಸಂದರ್ಭದಲ್ಲಿ ಅನಂತಕುಮಾರ್‌ ಸದಾ ಜತೆಗಿರುತ್ತಿದ್ದರು.

ಚುಟುಕು ಬರೆಯುತ್ತಿದ್ದ ಹೋತಾನಂದ


ರಾಜಕೀಯ ವಿರೋಧಿಗಳನ್ನು ಟೀಕಿಸುವುದಕ್ಕೆ ಸಿನಿಮಾ ಹಾಡುಗಳನ್ನು ಸಂದರ್ಭೋಚಿತವಾಗಿ ಬಳಸಿಕೊಳ್ಳುತ್ತಿದ್ದ ಅನಂತ ಕುಮಾರ್‌ಗೆ ಚುಟುಕುಗಳನ್ನು ಬರೆಯುವ ಹವ್ಯಾಸವಿತ್ತು. 'ಹೋತಾನಂದ' ಎಂಬ ಗುಪ್ತನಾಮದಲ್ಲಿ ಅವರು ಚುಟುಕುಗಳನ್ನು ಬರೆಯುತ್ತಿದ್ದರು. ಸಮಕಾಲೀನ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡು ಪಂಚ್‌ ನೀಡುವ ಚುಟುಕುಗಳನ್ನು ಬರೆಯುತ್ತಿದ್ದರು ಎಂದು ಅವರ ಸ್ನೇಹಿತರು ಸ್ಮರಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ