ಆ್ಯಪ್ನಗರ

ಬಿಎಸ್‌ವೈ ಆಡಿಯೋ ವೈರಲ್‌: ಭೇಟಿಗೆ ಬಂದವರಿಗೆ ಮೊಬೈಲ್‌ ನಿಷೇಧಿಸಿದ್ರು ಸಿಎಂ!

ಬಿಎಸ್‌ವೈ ಆಡಿಯೊ ಬಾಂಬ್‌ ಭಾರಿ ಸಂಚಲನ ಸೃಷ್ಟಿ ಮಾಡಿದ್ದು, ಒಂದು ಕಡೆ ಬಿಜೆಪಿ ಹೈಕಮಾಂಡ್‌ ಗರಂ ಆಗಿದ್ದರೆ, ಮತ್ತೊಂದೆಡೆ ಸಿಎಂ ಬಿಎಸ್‌ ಯಡಿಯೂರಪ್ಪ ತಮ್ಮನ್ನು ಭೇಟಿ ಮಾಡಲು ಬಂದವರಿಗೆ ಮೊಬೈಲ್‌ ನಿಷೇಧ ಹೇರಿದ್ದಾರೆ.

Vijaya Karnataka Web 5 Nov 2019, 12:38 pm
ಬೆಂಗಳೂರು: ಅಕ್ಟೋಬರ್‌ 26ರಂದು ಹುಬ್ಬಳ್ಳಿಯ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಆಪರೇಶನ್‌ ಕಮಲದ ಗುಟ್ಟನ್ನು ರಟ್ಟಾಗಿಸಿದ ಆಡಿಯೋ/ವಿಡಿಯೋ ವೈರಲ್ ಹಿನ್ನೆಲೆ ತಮ್ಮ ಭೇಟಿಗೆ ಬಂದವರಿಗೆ ಮೊಬೈಲ್ ನಿಷೇಧ ಮಾಡಿದ್ದಾರೆ. ಕಾರ್ಯಕರ್ತರು, ಮುಖಂಡರು ಬಂದಾಗ ಮೊಬೈಲ್ ತರದಂತೆ ಸೂಚನೆ ನೀಡಿದ್ದಾರೆ.
Vijaya Karnataka Web BS Yediyurappa


ತಮ್ಮನ್ನು ಭೇಟಿ ನೀಡಲು ಬಂದವರಿಗೆ ಮೊಬೈಲ್‌ ನಿಷೇಧಿಸುವಂತೆ ಸಿಎಂ ಯಡಿಯೂರಪ್ಪ ಅವರು ಪೊಲೀಸರಿಗೆ ಸೂಚನೆ ಕೊಟ್ಟಿದ್ದು, ಪೊಲೀಸರು ಮೊಬೈಲ್ ನಿಷೇಧದ ಬೋರ್ಡ್ ಹಾಕಿದ್ದಾರೆ. ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಮುಖ್ಯಮಂತ್ರಿಗಳ ಭೇಟಿಗೆ ಬಂದವರಿಗೆ ಮೊಬೈಲ್ ಪ್ರವೇಶ ಇಲ್ಲ ಎಂದು ಬೋರ್ಡ್ ಅಳವಡಿಸಲಾಗಿದೆ.

ಭೇಟಿ ವೇಳೆ ತಾನು ಏನಾದರೂ ಮಾತಾಡಿದರೆ ಅದನ್ನು ರೆಕಾರ್ಡ್ ಅಥವಾ ಚಿತ್ರೀಕರಣ ಮಾಡಿ ವೈರಲ್ ‌ಮಾಡುತ್ತಾರೆ ಎಂಬ ಕಾರಣಕ್ಕೆ ಮೊಬೈಲ್ ಗೆ ಕಡಿವಾಣ ಹಾಕಲಾಗಿದೆ ಎನ್ನಲಾಗಿದೆ.

ಅನರ್ಹ ಶಾಸಕರ ಅರ್ಜಿ ವಿಚಾರಣೆ: ಬಿಎಸ್‌ವೈ ಆಡಿಯೊ ಸ್ವೀಕರಿಸಿದ್ದೇವೆಂದ ಸುಪ್ರೀಂ

ವೈರಲ್‌ ಆಗಿರುವ ಬಿಎಸ್‌ ಯಡಿಯೂರಪ್ಪ ಅವರ ಆಡಿಯೋ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಅನರ್ಹ ಶಾಸಕರ ಅರ್ಜಿ ವಿಚಾರಣೆ ವೇಳೆ ತ್ರಿಸದಸ್ಯ ಪೀಠ ಸಿಡಿ ಸ್ವೀಕರಿಸಿದೆ. ಶಾಸಕರು ರಾಜೀನಾಮೆ ನೀಡಲು ಯಾರು ಕಾರಣ ಎಂಬುದನ್ನು ಸ್ಪಷ್ಟವಾಗಿ ಬಿಎಸ್‌ವೈ ವಿವರಿಸಿದ್ದಾರೆ. ಅನರ್ಹ ಶಾಸಕರ ಪ್ರಕರಣದ ತೀರ್ಪಿನ ವೇಳೆ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್‌ ಪರ ವಕೀಲರು ವಾದಿಸಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದ್ದು, ಆಡಿಯೋ ಪ್ರಕರಣ ಅನರ್ಹ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ