- ಆರ್.ತುಳಸಿಕುಮಾರ್ ಬೆಂಗಳೂರು
ಕೊರೊನಾಘಾತಕ್ಕೆ ಸಿಲುಕಿರುವ ಅನ್ನದಾತರು ಎದುರಿಸುವ ನಾನಾ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಕೃಷಿ ಆಯುಕ್ತಾಲಯದಲ್ಲಿ ಅಗ್ರಿವಾರ್ರೂಮ್ ಕಾರ್ಯಾಚರಿಸುತ್ತಿದೆ. ನಾನಾ ಜಿಲ್ಲೆಗಳಿಂದ ಕರೆ ಮಾಡುತ್ತಿರುವ ರೈತರು ಬೆಳೆ ಸಾಗಿಸಲು ವಾಹನ ಸೌಲಭ್ಯ, ಮಾರುಕಟ್ಟೆ ವ್ಯವಸ್ಥೆ, ಗ್ರೀನ್ ಪಾಸ್ ವಿತರಣೆ, ಟೋಲ್ ಪಾವತಿ ಕೇಂದ್ರದಲ್ಲಿನ ಕಿರಿಕಿರಿ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡುತ್ತಾರೆ. ಅವರ ಸಮಸ್ಯೆಗಳಿಗೆ ಈ ಕೃಷಿ ಸಹಾಯವಾಣಿ ಪರಿಹಾರ ದೊರಕಿಸಿಕೊಡುವಲ್ಲಿ ಸಫಲವಾಗಿದೆ. 7900 ಕರೆಗಳ ಸ್ವೀಕಾರ: ಏ.1ರಿಂದ ಅಗ್ರಿವಾರ್ ರೂಮ್ ಆರಂಭಿಸಲಾಗಿದ್ದು, ಈವರೆಗೆ 7900 ಕರೆಗಳನ್ನು ಸ್ವೀಕರಿಸಿ ಸ್ಪಂದಿಸಲಾಗಿದೆ. ಆರಂಭದಲ್ಲಿ ನಿತ್ಯ 500ಕ್ಕೂ ಹೆಚ್ಚು ಕರೆಗಳ ಒತ್ತಡ ಇತ್ತು. ಬಹುತೇಕರು ಬೆಳೆಗೆ ಬೆಲೆ ಒದಗಿಸುವುದು ಹಾಗೂ ಮಾರುಕಟ್ಟೆಗೆ ಏನು ಪರಿಹಾರವಿದೆ ಎಂಬ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳುತ್ತಿದ್ದರು. ಜತೆಗೆ ಗ್ರೀನ್ ಪಾಸ್ ದೊರೆಯದ ಕುರಿತು ಆಕ್ಷೇಪಿಸುತ್ತಿದ್ದರು.
ರೈತರ ಇಂತಹ ಹತ್ತು ಹಲವು ದುಃಖ-ದುಮ್ಮಾನಗಳಿಗೆ ಕೃಷಿ ಇಲಾಖೆ ಸಿಬ್ಬಂದಿಗೆ ಕಿವಿಯಾದರು. ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ರೈತರಿಗೆ ಆಪದ್ಬಾಂಧವರಾಗಿದ್ದಾರೆ. ಸರಕಾರ ಹಲವು ಸೌಲಭ್ಯ ಕಲ್ಪಿಸಿದ ಬಳಿಕ ಕರೆಗಳ ಸಂಖ್ಯೆ ಅರ್ಧದಷ್ಟು ಇಳಿಕೆಯಾಗಿದೆ. ಕೃಷಿಕರು ಈಗ ಬಿತ್ತನೆ ಬೀಜ-ರಸಗೊಬ್ಬರ, ಪಿಎಂ ಕಿಸಾನ್ ವಿಮೆ, ಬೆಳೆಗಳ ತಾಂತ್ರಿಕ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಮುಂಗಾರಿನಲ್ಲಿ ರೈತರಿಗೆ ವಂಚಿಸಲು ಸಂಚು ಹೂಡಿರುವ ಆಂಧ್ರದ ನಕಲಿ ಬಿತ್ತನೆ ಬೀಜ ಜಾಲ!
ನಿರಂತರ ಮುಂದುವರಿಕೆಗೆ ಮನವಿ: ಅಗ್ರಿವಾರ್ರೂಮ್ ನಿತ್ಯ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಹನ್ನೆರಡು ತಾಸು ಕಾರ್ಯನಿರ್ವಹಿಸುತ್ತಿದೆ. ಈಗ ಎರಡು ಲೈನ್ಗಳಷ್ಟೇ ಇದ್ದು, ಇದನ್ನು ಹೆಚ್ಚಿಸಿದಲ್ಲಿ ಹೆಚ್ಚಿನವರಿಗೆ ಅನುಕೂಲವಾಗುತ್ತದೆ. ಸಮರ್ಪಕವಾಗಿ ಮಾಹಿತಿ ಸಿಗುತ್ತಿರುವ ಕಾರಣ ವರ್ಷಪೂರ್ತಿ ನಿರಂತರವಾಗಿ ಮುಂದುವರಿಸಲು ರೈತರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಜಿಕೆವಿಕೆ ಕೇಂದ್ರಕ್ಕೂ ಕರೆಗಳ ಸುರಿಮಳೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲೂ ವಿವಿ ವತಿಯಿಂದ ಪ್ರತ್ಯೇಕ ಅಗ್ರಿ ವಾರ್ ರೂಮ್ ಸ್ಥಾಪಿಸಲಾಗಿದೆ. ಕೇಂದ್ರ ಸ್ಥಾಪನೆಯಾದ ಹತ್ತೇ ದಿನದಲ್ಲಿ 2224 ಕರೆಗಳನ್ನು ರೈತರಿಂದ ಸ್ವೀಕರಿಸಿ ಪರಿಹಾರ ಒದಗಿಸಲಾಗಿದೆ. ಇಲ್ಲಿ ಬಿತ್ತನೆ ಕಾರ್ಯ ಹಾಗೂ ತಾಂತ್ರಿಕ ಸಲಹೆ ನೀಡಲಾಗುತ್ತಿದೆ.
ಅಗ್ರಿ ವಾರ್ ರೂಮ್ ಸಂಪರ್ಕ
080-22212818/22210237 (ಕೃಷಿ ಇಲಾಖೆ)
080-22636800 (ಜಿಕೆವಿಕೆ)
ರೈತರ ಮನೆ ಬಾಗಿಲಿಗೇ ಬರಲಿದೆ ಬಿತ್ತನೆ ಬೀಜ: ಯಾರನ್ನು ಸಂಪರ್ಕಿಸಬೇಕು? ಇಲ್ಲಿದೆ ವಿವರ
ತರಕಾರಿ ಮಾರಾಟಕ್ಕೆ ಮಾರುಕಟ್ಟೆಗಳ ವಿವರ ಕೋರಿದಾಗ ನಿರ್ದಿಷ್ಟ ಪ್ರದೇಶದ ಕುರಿತು ಮಾಹಿತಿ ದೊರೆಯಿತು. ಇಂತಹ ವ್ಯವಸ್ಥೆಯು ರೈತರಿಗೆ ಎಲ್ಲಾ ಋತುಮಾನದಲ್ಲಿ ಸಿಕ್ಕರೆ ಅನುಕೂಲ.
- ನಾಗರಾಜ್, ರೈತ
ಅಗ್ರಿ ವಾರ್ ರೂಮ್ಗೆ ರೈತರಿಂದ ಬರುವ ಕರೆ ಸ್ವೀಕರಿಸಿ ಸೂಕ್ತ ಮಾಹಿತಿ ಒದಗಿಸಲು ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾನಾ ಜಿಲ್ಲೆಗಳ ರೈತರು ಕರೆ ಮಾಡುತ್ತಿದ್ದು, ಅವರ ಸಂದೇಹ ನಿವಾರಣೆಗೆ ಆದ್ಯತೆ ನೀಡಲಾಗಿದೆ.
- ದೇವರಾಜ್, ಅಗ್ರಿ ವಾರ್ ರೂಮ್ ಉಸ್ತುವಾರಿ, ಕೃಷಿ ಇಲಾಖೆ
ಕೊರೊನಾ ಸಂಕಷ್ಟ ಕಾಲದಲ್ಲಿ ಸರಕಾರ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ಜಿಲ್ಲೆಯಲೂ ಸಹಾಯವಾಣಿ ಸ್ಥಾಪಿಸಿದರೆ ಅಲ್ಲಿನ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ.
- ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ
10 ಕೋಟಿ ಮೌಲ್ಯದ 7 ಸಾವಿರ ಟನ್ ನಕಲಿ ಬಿತ್ತನೆ ಬೀಜ ವಶ, ಎಚ್ಚರಿಕೆಯಲ್ಲಿರುವಂತೆ ರೈತರಿಗೆ ಬಿಎಸ್ವೈ ಮನವಿ
ಕೊರೊನಾಘಾತಕ್ಕೆ ಸಿಲುಕಿರುವ ಅನ್ನದಾತರು ಎದುರಿಸುವ ನಾನಾ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಕೃಷಿ ಆಯುಕ್ತಾಲಯದಲ್ಲಿ ಅಗ್ರಿವಾರ್ರೂಮ್ ಕಾರ್ಯಾಚರಿಸುತ್ತಿದೆ. ನಾನಾ ಜಿಲ್ಲೆಗಳಿಂದ ಕರೆ ಮಾಡುತ್ತಿರುವ ರೈತರು ಬೆಳೆ ಸಾಗಿಸಲು ವಾಹನ ಸೌಲಭ್ಯ, ಮಾರುಕಟ್ಟೆ ವ್ಯವಸ್ಥೆ, ಗ್ರೀನ್ ಪಾಸ್ ವಿತರಣೆ, ಟೋಲ್ ಪಾವತಿ ಕೇಂದ್ರದಲ್ಲಿನ ಕಿರಿಕಿರಿ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡುತ್ತಾರೆ. ಅವರ ಸಮಸ್ಯೆಗಳಿಗೆ ಈ ಕೃಷಿ ಸಹಾಯವಾಣಿ ಪರಿಹಾರ ದೊರಕಿಸಿಕೊಡುವಲ್ಲಿ ಸಫಲವಾಗಿದೆ.
ರೈತರ ಇಂತಹ ಹತ್ತು ಹಲವು ದುಃಖ-ದುಮ್ಮಾನಗಳಿಗೆ ಕೃಷಿ ಇಲಾಖೆ ಸಿಬ್ಬಂದಿಗೆ ಕಿವಿಯಾದರು. ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ರೈತರಿಗೆ ಆಪದ್ಬಾಂಧವರಾಗಿದ್ದಾರೆ. ಸರಕಾರ ಹಲವು ಸೌಲಭ್ಯ ಕಲ್ಪಿಸಿದ ಬಳಿಕ ಕರೆಗಳ ಸಂಖ್ಯೆ ಅರ್ಧದಷ್ಟು ಇಳಿಕೆಯಾಗಿದೆ. ಕೃಷಿಕರು ಈಗ ಬಿತ್ತನೆ ಬೀಜ-ರಸಗೊಬ್ಬರ, ಪಿಎಂ ಕಿಸಾನ್ ವಿಮೆ, ಬೆಳೆಗಳ ತಾಂತ್ರಿಕ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಮುಂಗಾರಿನಲ್ಲಿ ರೈತರಿಗೆ ವಂಚಿಸಲು ಸಂಚು ಹೂಡಿರುವ ಆಂಧ್ರದ ನಕಲಿ ಬಿತ್ತನೆ ಬೀಜ ಜಾಲ!
ನಿರಂತರ ಮುಂದುವರಿಕೆಗೆ ಮನವಿ: ಅಗ್ರಿವಾರ್ರೂಮ್ ನಿತ್ಯ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಹನ್ನೆರಡು ತಾಸು ಕಾರ್ಯನಿರ್ವಹಿಸುತ್ತಿದೆ. ಈಗ ಎರಡು ಲೈನ್ಗಳಷ್ಟೇ ಇದ್ದು, ಇದನ್ನು ಹೆಚ್ಚಿಸಿದಲ್ಲಿ ಹೆಚ್ಚಿನವರಿಗೆ ಅನುಕೂಲವಾಗುತ್ತದೆ. ಸಮರ್ಪಕವಾಗಿ ಮಾಹಿತಿ ಸಿಗುತ್ತಿರುವ ಕಾರಣ ವರ್ಷಪೂರ್ತಿ ನಿರಂತರವಾಗಿ ಮುಂದುವರಿಸಲು ರೈತರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಜಿಕೆವಿಕೆ ಕೇಂದ್ರಕ್ಕೂ ಕರೆಗಳ ಸುರಿಮಳೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲೂ ವಿವಿ ವತಿಯಿಂದ ಪ್ರತ್ಯೇಕ ಅಗ್ರಿ ವಾರ್ ರೂಮ್ ಸ್ಥಾಪಿಸಲಾಗಿದೆ. ಕೇಂದ್ರ ಸ್ಥಾಪನೆಯಾದ ಹತ್ತೇ ದಿನದಲ್ಲಿ 2224 ಕರೆಗಳನ್ನು ರೈತರಿಂದ ಸ್ವೀಕರಿಸಿ ಪರಿಹಾರ ಒದಗಿಸಲಾಗಿದೆ. ಇಲ್ಲಿ ಬಿತ್ತನೆ ಕಾರ್ಯ ಹಾಗೂ ತಾಂತ್ರಿಕ ಸಲಹೆ ನೀಡಲಾಗುತ್ತಿದೆ.
ಅಗ್ರಿ ವಾರ್ ರೂಮ್ ಸಂಪರ್ಕ
080-22212818/22210237 (ಕೃಷಿ ಇಲಾಖೆ)
080-22636800 (ಜಿಕೆವಿಕೆ)
ರೈತರ ಮನೆ ಬಾಗಿಲಿಗೇ ಬರಲಿದೆ ಬಿತ್ತನೆ ಬೀಜ: ಯಾರನ್ನು ಸಂಪರ್ಕಿಸಬೇಕು? ಇಲ್ಲಿದೆ ವಿವರ
ತರಕಾರಿ ಮಾರಾಟಕ್ಕೆ ಮಾರುಕಟ್ಟೆಗಳ ವಿವರ ಕೋರಿದಾಗ ನಿರ್ದಿಷ್ಟ ಪ್ರದೇಶದ ಕುರಿತು ಮಾಹಿತಿ ದೊರೆಯಿತು. ಇಂತಹ ವ್ಯವಸ್ಥೆಯು ರೈತರಿಗೆ ಎಲ್ಲಾ ಋತುಮಾನದಲ್ಲಿ ಸಿಕ್ಕರೆ ಅನುಕೂಲ.
- ನಾಗರಾಜ್, ರೈತ
ಅಗ್ರಿ ವಾರ್ ರೂಮ್ಗೆ ರೈತರಿಂದ ಬರುವ ಕರೆ ಸ್ವೀಕರಿಸಿ ಸೂಕ್ತ ಮಾಹಿತಿ ಒದಗಿಸಲು ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾನಾ ಜಿಲ್ಲೆಗಳ ರೈತರು ಕರೆ ಮಾಡುತ್ತಿದ್ದು, ಅವರ ಸಂದೇಹ ನಿವಾರಣೆಗೆ ಆದ್ಯತೆ ನೀಡಲಾಗಿದೆ.
- ದೇವರಾಜ್, ಅಗ್ರಿ ವಾರ್ ರೂಮ್ ಉಸ್ತುವಾರಿ, ಕೃಷಿ ಇಲಾಖೆ
ಕೊರೊನಾ ಸಂಕಷ್ಟ ಕಾಲದಲ್ಲಿ ಸರಕಾರ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ಜಿಲ್ಲೆಯಲೂ ಸಹಾಯವಾಣಿ ಸ್ಥಾಪಿಸಿದರೆ ಅಲ್ಲಿನ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ.
- ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ
10 ಕೋಟಿ ಮೌಲ್ಯದ 7 ಸಾವಿರ ಟನ್ ನಕಲಿ ಬಿತ್ತನೆ ಬೀಜ ವಶ, ಎಚ್ಚರಿಕೆಯಲ್ಲಿರುವಂತೆ ರೈತರಿಗೆ ಬಿಎಸ್ವೈ ಮನವಿ