ಆ್ಯಪ್ನಗರ

ಮುಂಬಡ್ತಿ ತಡೆಹಿಡಿಯಲು ಅಹಿಂಸಾ ಮನವಿ

ಸುಪ್ರೀಂಕೋರ್ಟ್‌ ಆದೇಶದಂತೆ ಪರಿಶಿಷ್ಟರ ಮುಂಬಡ್ತಿ ಪ್ರಕ್ರಿಯೆ ತಡೆಹಿಡಿಯುವಂತೆ ಅಹಿಂಸಾ ಸಂಘಟನೆ ಪ್ರತಿನಿಧಿಗಳು ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Vijaya Karnataka 12 Mar 2019, 5:00 am
ಬೆಂಗಳೂರು : ಸುಪ್ರೀಂಕೋರ್ಟ್‌ ಆದೇಶದಂತೆ ಪರಿಶಿಷ್ಟರ ಮುಂಬಡ್ತಿ ಪ್ರಕ್ರಿಯೆ ತಡೆಹಿಡಿಯುವಂತೆ ಅಹಿಂಸಾ ಸಂಘಟನೆ ಪ್ರತಿನಿಧಿಗಳು ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
Vijaya Karnataka Web ahimsa oppose sc st promotion
ಮುಂಬಡ್ತಿ ತಡೆಹಿಡಿಯಲು ಅಹಿಂಸಾ ಮನವಿ


ಅಹಿಂಸಾ ಅಧ್ಯಕ್ಷ ಎಂ.ನಾಗರಾಜ್‌ ನೇತೃತ್ವದಲ್ಲಿ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾದ ಸಂಘಟನೆ ಪ್ರಮುಖರು, ಪರಿಶಿಷ್ಟರಿಗೆ ಮುಂಬಡ್ತಿ ನೀಡಲು ಸರಕಾರ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ವಿಧಿಸಿದೆ. ಜತೆಗೆ ಸುಪ್ರೀಂಕೋರ್ಟ್‌ನ ಅಂತಿಮ ವಿಚಾರಣೆಯ ತೀರ್ಪು ಹೊರಬೀಳುವುದು ಬಾಕಿಯಿದೆ. ಈ ಹಂತದಲ್ಲಿ ಬಡ್ತಿ ಪ್ರದಾನ ಮಾಡಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದ್ದಾರೆ.

ಕೋರ್ಟ್‌ ಆದೇಶದಂತೆ ಬಡ್ತಿ ತಡೆಹಿಡಿಯಲು ಸರಕಾರವೂ ಸೂಚಿಸಿದೆ. ಈ ನಡುವೆಯೂ ಕೆಲವು ಸಂಸ್ಥೆಗಳಲ್ಲಿ ಬಡ್ತಿ ನೀಡಲಾಗುತ್ತಿದೆ ಎಂದು ಸಂಸ್ಥೆ ದೂರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ