ಆ್ಯಪ್ನಗರ

ವಾಯುಯಾನಕ್ಕೆ ಮಜಿನ ಕಾಟ: ಬೆಂಗಳೂರಿನಲ್ಲಿ2 ದಿನದಲ್ಲಿ 189 ವಿಮಾನಗಳ ಹಾರಾಟ ವ್ಯತ್ಯಯ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಳಿಗಾಲದ ಮಂಜಿನ ಆಟ ಆರಂಭವಾಗಿದ್ದು, ಎರಡು ದಿನಗಳಲ್ಲಿ ಸುಮಾರು 200 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಪರಿಣಾಮ ಸಾವಿರಾರು ಪ್ರಯಾಣಿಕರು ನಿಲ್ದಾಣದಲ್ಲಿ ಪರದಾಡಿದರು.

Vijaya Karnataka Web 11 Nov 2019, 11:32 pm
ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಳಿಗಾಲದ ಮಂಜಿನ ಆಟ ಆರಂಭವಾಗಿದ್ದು, ಎರಡು ದಿನಗಳಲ್ಲಿಬರೋಬ್ಬರಿ 200 ವಿಮಾನಗಳ ಹಾರಾಟದಲ್ಲಿವ್ಯತ್ಯಯವಾಗಿದೆ. ಪರಿಣಾಮ ಸಾವಿರಾರು ಪ್ರಯಾಣಿಕರು ನಿಲ್ದಾಣದಲ್ಲಿಪರದಾಡಿದರು.
Vijaya Karnataka Web airplane
ಸಾಂದರ್ಭಿಕ ಚಿತ್ರ


ಕೆಐಎನಲ್ಲಿಬೆಳಗಿನ ವೇಳೆ ವಿಮಾನಗಳ ಟೇಕಾಫ್‌, ಲ್ಯಾಂಡಿಂಗ್‌ ಸೇರಿದಂತೆ ಎಲ್ಲರೀತಿಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸುಮಾರು ಐದು ತಾಸುಗಳವರೆಗೂ ವಿಮಾನಗಳ ಹಾರಾಟದಲ್ಲಿವ್ಯತ್ಯಯ, ವಿಳಂಬ ಉಂಟಾಗಿದ್ದು, ಕೆಲವು ವಿಮಾನಗಳನ್ನು ಬೇರೆ ನಗರಗಳಿಗೆ ಕಳುಹಿಸಲಾಗಿದೆ.

ಸೋಮವಾರ ಬೆಳಗ್ಗೆ ದಟ್ಟ ಮಂಜು ಆವರಿಸಿದ್ದ ಕಾರಣ 56 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ನಿರ್ಗಮಿಸಬೇಕಿದ್ದ 22 ವಿಮಾನಗಳು, ಆಗಮಿಸಬೇಕಿದ್ದ 16 ವಿಮಾನಗಳ ಹಾರಾಟದಲ್ಲಿವ್ಯತ್ಯಯವಾಯಿತು. ಲ್ಯಾಂಡ್‌ ಆಗಬೇಕಿದ್ದ 7 ವಿಮಾನಗಳು, ಆಕಾಶದಲ್ಲೇ ಸುತ್ತಾಡಿ ಕೆಲ ಹೊತ್ತಿನ ಬಳಿಕ ಲ್ಯಾಂಡ್‌ ಆದವು. ಮೂರು ವಿಮಾನಗಳನ್ನು ಚೆನ್ನೈಗೆ, ಹೈದರಾಬಾದ್‌ಗೆ ಏಳು ಮತ್ತು ಕೊಯಂಬತ್ತೂರಿಗೆ ಒಂದು ವಿಮಾನವನ್ನು ಕಳುಹಿಸಲಾಯಿತು.

ಭಾನುವಾರ (ನ.10) ಬೆಳಗ್ಗೆ ನಿರ್ಗಮಿಸಬೇಕಿದ್ದ 66 ವಿಮಾನಗಳು, ಆಗಮಿಸಬೇಕಿದ್ದ 30 ವಿಮಾನಗಳು ವಿಳಂಬವಾದವು. ಮಂಜಿನ ಕಾರಣ ಲ್ಯಾಂಡಿಂಗ್‌ಗೆ ಕ್ಲಿಯರೆನ್ಸ್‌ ಸಿಗದೆ 33 ವಿಮಾನಗಳ ಆಕಾಶದಲ್ಲೇ ಕೆಲ ಕಾಲ ಸುತ್ತಾಡಿ ಕ್ಲಿಯರೆನ್ಸ್‌ ಸಿಕ್ಕ ಬಳಿಕ ಲ್ಯಾಂಡ್‌ ಆಗಿವೆ. 4 ವಿಮಾನಗಳನ್ನು ಚೆನ್ನೈಗೆ ರವಾನಿಸಲಾಯಿತು.

ಪ್ರಯಾಣಿಕರ ಪರದಾಟ
ವಿಮಾನಗಳ ನಿರ್ಗಮನದಲ್ಲಿವಿಳಂಬವಾದ ಕಾರಣ ಸಾವಿರಾರು ಪ್ರಯಾಣಿಕರು ಟರ್ಮಿನಲ್‌ನಲ್ಲಿಪರದಾಡಿದರು. ವಿಮಾನದಲ್ಲಿಕುಳಿತವರು ಮತ್ತು ವಿಮಾನದ ಬೋರ್ಡಿಂಗ್‌ಗಾಗಿ ಕಾಯುತ್ತಿದ್ದವರೂ ಸೇರಿದಂತೆ ನಿಲ್ದಾಣದ ಎಲ್ಲಕಡೆ ತೀವ್ರ ದಟ್ಟಣೆ ಇತ್ತು. ವಿಳಂಬದ ಕಾರಣ ಸೂಕ್ತ ತಿಂಡಿ, ಆಹಾರ ವ್ಯವಸ್ಥೆ ಮಾಡದ ಏರ್‌ಲೈನ್ಸ್‌ಗಳ ವಿರುದ್ಧ ಪ್ರಯಾಣಿಕರು ಜಾಲತಾಣಗಳಲ್ಲಿಅಸಮಾಧಾನ ಹೊರಹಾಕಿದ್ದಾರೆ.

ಜನವರಿವರೆಗೂ...
ಮಂಜು ಮುಸುಕಿದ ವಾತಾವರಣ ಮುಂದುವರೆಯಲಿರುವ ಕಾರಣ ವಿಮಾನಗಳ ಹಾರಾಟ ವಿಳಂಬವೂ ಚಳಿಗಾಲ ಮುಗಿಯುವವರೆಗೂ ಮುಂದುವರೆಯುವ ಸಂಭವವಿದೆ. ಹೀಗಾಗಿ, ಜನವರಿ ತಿಂಗಳವರೆಗೂ ವಿಳಂಬ ತಪ್ಪಿದ್ದಲ್ಲಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ