ಆ್ಯಪ್ನಗರ

ಕೇರಳದ ಪ್ರವಾಹ ಪೀಡಿತರಿಗೆ ಅಕ್ಷಯಪಾತ್ರದಿಂದ ಬಿಸಿಯೂಟ

ಕೇರಳದ ಪ್ರವಾಹಪೀಡಿತ ಸಂತ್ರಸ್ತರಿಗೆ ಅಲಫುಜ್ಜದಲ್ಲಿ ತಾತ್ಕಾಲಿಕ ಅಡುಗೆ ಕೊಣೆ ನಿರ್ಮಿಸಿ, ಊಟವನ್ನು ಅಕ್ಷಯಪಾತ್ರ ಫೌಂಡೇಷನ್‌ ಒದಗಿಸುತ್ತಿದೆ.

Vijaya Karnataka Web 23 Aug 2018, 4:00 am
ಬೆಂಗಳೂರು: ಕೇರಳದ ಪ್ರವಾಹಪೀಡಿತ ಸಂತ್ರಸ್ತರಿಗೆ ಅಲಫುಜ್ಜದಲ್ಲಿ ತಾತ್ಕಾಲಿಕ ಅಡುಗೆ ಕೊಣೆ ನಿರ್ಮಿಸಿ, ಊಟವನ್ನು ಅಕ್ಷಯಪಾತ್ರ ಫೌಂಡೇಷನ್‌ ಒದಗಿಸುತ್ತಿದೆ.
Vijaya Karnataka Web akshayatra food to for flood victims in kerala
ಕೇರಳದ ಪ್ರವಾಹ ಪೀಡಿತರಿಗೆ ಅಕ್ಷಯಪಾತ್ರದಿಂದ ಬಿಸಿಯೂಟ


25ಕ್ಕೂ ಅಧಿಕ ಸ್ವಯಂ ಸೇವಕರು ಬಿಸಿ ಊಟ ಒದಗಿಸುವ ಕಾರ‍್ಯದಲ್ಲಿ ತೊಡಗಿದ್ದಾರೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಅಕ್ಷಯ ಪಾತ್ರ ವಾಹನಗಳ ಮೂಲಕ ಸಂತ್ರಸ್ತರ ಮನೆ ಬಾಗಿಲಿಗೆ ಪೂರೈಸಲಾಗುತ್ತಿದೆ.

ಮೊದಲು ಅಡುಗೆ ಕೋಣೆಯನ್ನು ಪಂಡಂನ್‌ಗಿರಿ ಶಾಲೆಯಲ್ಲಿ ತೆರೆಯಲಾಗಿತ್ತು, ಆದರೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಸೆಂಟ್‌ ಅಲೋಶಿಯಸ್‌ ಕಾಲೇಜು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು. ಆನಂತರ ಅಲಪ್ಪುಜ್ಜದ ಕಿದನ್‌ಗಂಪರಂಬು ಶ್ರೀ ಭುವನೇಶ್ವರಿ ದೇವಾಲಯದಲ್ಲೂ ಅಡುಗೆ ಕೋಣೆ ಆರಂಭಿಸಲಾಗಿದೆ.

ಈವರೆಗೆ 25 ಸಾವಿರ ಊಟಗಳನ್ನು(ಅನ್ನ, ಸಾಂಬಾರ್‌, ಪಲ್ಯ, ಬಾತ್‌ ಇತ್ಯಾದಿ)ಹಾಗೂ 70ಸಾವಿರ ಚಪಾತಿಗಳನ್ನು ಸಂತ್ರಸ್ತರಿಗೆ ವಿತರಿಸಲಾಗಿದೆ ಎಂದು ಹೇಳಿದೆ.

ಕೇರಳದ ಸಚಿವ ಜಿ.ಸುಧಾಕರನ್‌, ಜಿಲ್ಲಾ ಕಲೆಕ್ಟರ್‌ ಎಸ್‌.ಸುಹಾಸ್‌, ಸಂಸದ ಕೊಡಿಕುನ್ನಿಲ್‌, ಡೆಪ್ಯೂಟಿ ಕಲೆಕ್ಟರ್‌ ಎ.ಮುರಳಿ, ಎಡತುವ ಗ್ರಾಮ ಪಂಚಾಯ್ತಿ ಅಧಿಕಾರಿ ಎಸ್‌.ಸುಭಾಷ್‌ ಅವರಿಗೆ ಅಕ್ಷಯಪಾತ್ರ ಫೌಂಡೇಷನ್‌ ಉಪಾಧ್ಯಕ್ಷ ಚಂಚಲಪತಿ ದಾಸ್‌ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಮರು ನಿರ್ಮಿಸಲು ಕೇಂದ್ರ ಸರಕಾರ: ಸಚಿವ ಅನಂತಕುಮಾರ್‌ ಭರವಸೆ

ಬೆಂಗಳೂರು: ಕೊಡಗು ಮತ್ತು ನೆರೆಯ ಕೇರಳದ ಹಲವು ಪ್ರದೇಶಗಳನ್ನು ಮರು ನಿರ್ಮಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಚಿವ ಅನಂತಕುಮಾರ್‌ ಭರವಸೆ ನೀಡಿದರು.

ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ, ನೆರೆ ಪೀಡಿತ ಕೊಡಗು ಮತ್ತು ಕೇರಳಕ್ಕೆ ಕೇಂದ್ರದ ವತಿಯಿಂದ ತಲಾ ಒಂದು ಲಾರಿಯಲ್ಲಿ 1 ಕೋಟಿ ರೂ. ಮೌಲ್ಯದ ಜನೌಷಧಿಗಳನ್ನು ಮತ್ತು ಅದಮ್ಯ ಚೇತನ ಸಂಸ್ಥೆಯಿಂದ 10 ಜನೌಷಧ ಬಾಕ್ಸ್‌, ಸ್ಯಾನಿಟರಿ ನ್ಯಾಪ್‌ಕಿನ್‌ ಬಾಕ್ಸ್‌ಗಳನ್ನು ಬುಧವಾರ ರವಾನೆ ಮಾಡಿ ಅವರು ಮಾತನಾಡಿದರು.

ಶಾಸಕರಾದ ಎಲ್‌.ಎ.ರವಿಸುಬ್ರಮಣ್ಯ, ಉದಯ್‌ ಗರುಡಾಚಾರ್‌, ಮಾಜಿ ಮೇಯರ್‌ ಎಸ್‌.ಕೆ.ನಟರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ