ಆ್ಯಪ್ನಗರ

ಸುಪ್ರೀಂ ವಿಚಾರಣೆ ಮುಕ್ತಾಯ, ಆದೇಶ ಬಾಕಿ, ಬುಧವಾರ ಬೆಳಗ್ಗೆವರೆಗೂ ಮತ್ತೆ ಟೆನ್ಷನ್‌

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ವಿಚಾರಣೆಯನ್ನು ಕಾಂಗ್ರೆಸ್‌, ಜೆಡಿಎಸ್ ನಾಯಕರು ರೆಸಾರ್ಟ್‌ಗಳಲ್ಲಿ ಉಳಿದುಕೊಂಡು ಟಿವಿ ವಾಹಿನಿಗಳ ವೀಕ್ಷಿಸಿದ್ದಾರೆ.

Vijaya Karnataka Web 16 Jul 2019, 4:42 pm
ಬೆಂಗಳೂರು: ದೋಸ್ತಿ ಸರಕಾರದ ವಿರುದ್ಧ ಅತೃಪ್ತ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಕುರಿತು ಸುಪ್ರೀಂ ಅಂತಿಮ ತೀರ್ಪು ಪ್ರಕಟಿಸಲಿದ್ದು, ಬುಧವಾರ ಬೆಳಗ್ಗೆ ಆದೇಶ ಹೊರಬೀಳಲಿದೆ.
Vijaya Karnataka Web ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌


ಇದೊಂದು ಸಾಂವಿಧಾನಿಕ ಬಿಕ್ಕಟ್ಟು ಉಂಟು ಮಾಡಿರುವ ಪ್ರಕರಣವಾಗಿದ್ದು, ಒಂದು ವೇಳೆ ಇದನ್ನು ಸಾಂವಿಧಾನ ಪೀಠಕ್ಕೆ ವರ್ಗಾಯಿಸಿದರೆ ಮುಂದೇನು ಎಂಬ ಪ್ರಶ್ನೆ ಮೂಡಿದೆ.

ವಿಧಾನಸಭೆ ಸ್ಪೀಕರ್ ಸಾಂವಿಧಾನಿಕ ಹುದ್ದೆ. ಸುಪ್ರೀಂ ಕೋರ್ಟ್‌ ಕೂಡ ಈ ವ್ಯಾಪ್ತಿಯ ಬಗ್ಗೆ ಪ್ರಶ್ನಿಸುವಂತಿಲ್ಲ ಎಂದು ಹೇಳಲಾಗಿದೆ.

ಹೀಗಾಗಿ ಶಾಸಕರ ರಾಜೀನಾಮೆ ವಿಚಾರ ಸ್ಪೀಕರ್ ವಿವೇಚನೆ ಮೇಲೆ ನಿರ್ಧಾರವಾಗಲಿದೆ. ಈ ಹಿಂದೆಯೂ ಇದೇ ನಿಯಮ ಪಾಲನೆಯಾಗಿದೆ. ಈಗ ಪರಿಸ್ಥಿತಿ ಭಿನ್ನವಾಗಿರುವುದರಿಂದ ಸುಪ್ರೀಂ ನ್ಯಾಯಪೀಠ ಯಾವ ಆದೇಶ ಕೈಗೊಳ್ಳುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಲಿದೆ.

ಅತೃಪ್ತ ಶಾಸಕರ ಪರವಾಗಿ, ಸ್ಪೀಕರ್‌ ಪರವಾಗಿ ಹಾಗೂ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪರವಾಗಿ ಮೂವರು ಹಿರಿಯ ವಕೀಲರು ವಾದ ಮಂಡಿಸಿದ್ದಾರೆ.

ಮೂವರೂ ತಮ್ಮದೇ ಶೈಲಿಯಲ್ಲಿ ವಾದ ಮಂಡಿಸಿದ್ದು, ಸಾಂವಿಧಾನಿಕ ಬಿಕ್ಕಟ್ಟು ಇನ್ನಷ್ಟು ಕಗ್ಗಂಟಾಗಿದೆ.

ಈ ಎಲ್ಲ ಸೂಕ್ಷ್ಮಗಳನ್ನು ಅರಿತಿರುವ ಸುಪ್ರೀಂ ನ್ಯಾಯಪೀಠ ಈಗ ಬುಧವಾರ ಬೆಳಗ್ಗೆ ಆದೇಶ ಪ್ರಕಟಿಸುವ ನಿರ್ಧಾರ ಕೈಗೊಂಡಿದೆ.

ಸುಪ್ರೀಂ ಕೋರ್ಟ್‌ ಆದೇಶ ಏನು ಬರಬಹುದು ಎಂಬ ಬಗ್ಗೆ ಸಾಮಾನ್ಯವಾಗಿ ಪ್ರಶ್ನೆ ಉದ್ಭವವಾಗಿದೆ.

ಒಂದು ವೇಳೆ ಅತೃಪ್ತರ ಪರವಾಗಿ ತೀರ್ಪು ಬಂದರೆ ದೋಸ್ತಿ ಖತಂ ಆಗಲಿದೆ.

ವಿಧಾನಸಭಾ ಸ್ಪೀಕರ್ ಕಾರ್ಯ ವ್ಯಾಪ್ತಿಯನ್ನು ನಾವು ಪ್ರಶ್ನಿಸುವುದಿಲ್ಲ. ರಾಜೀನಾಮೆ ಅಂಗೀಕಾರ, ತಿರಸ್ಕಾರ ವಿವೇಚನೆ ಅವರಿಗೆ ಬಿಡಲಾಗಿದೆ ಎಂದು ತೀರ್ಪು ಬಂದರೆ ಅತೃಪ್ತರಿಗೆ ಹಾಗೂ ಸರಕಾರ ರಚನೆ ಮಾಡುವ ಕನಸು ಕಾಣುತ್ತಿರುವ ಬಿಜೆಪಿಗೆ ತೀವ್ರ ನಿರಾಸೆ ಉಂಟು ಮಾಡಲಿದೆ.

ಒಂದು ವೇಳೆ ಇದೊಂದು ಸಾಂವಿಧಾನಿಕ ಬಿಕ್ಕಟ್ಟಿನ ಸನ್ನಿವೇಶನ ನಿರ್ಮಾಣ ಮಾಡಿರುವುದರಿಂದ ಹೆಚ್ಚಿನ ಚರ್ಚೆ ಅಗತ್ಯ ಎಂದು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದರೆ ಕರ್ನಾಟಕ ರಾಜಕೀಯ ಕ್ಷಿಪ್ರಕ್ರಾಂತಿಯ ಕ್ಲೈಮ್ಯಾಕ್ಸ್‌ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್‌ ಆದೇಶ ಬರುವವರೆಗೂ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ನಾಯಕರು ರೆಸಾರ್ಟ್‌ನಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಸಿದ್ದರಾಮಯ್ಯ ಅವರು ಮೊಬೈನಲ್ಲಿಯೇ ಟಿವಿ ವಾಹಿನಿಗಳ ಮೂಲಕ ವಿಚಾರಣೆಯ ಮಾಹಿತಿ ವೀಕ್ಷಿಸಿದ್ದಾರೆ.

ಈಗ ಎಲ್ಲರ ಕಣ್ಣು ಸುಪ್ರೀಂ ಕೋರ್ಟ್‌ ತೀರ್ಪಿನ ಮೇಲೆ ನೆಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ