ಆ್ಯಪ್ನಗರ

ಫೋನ್‌ ಕದ್ದಾಲಿಕೆ: ಅಲೋಕ್‌ ಕುಮಾರ್‌ಗೆ 7 ತಾಸು ಸಿಬಿಐ ವಿಚಾರಣೆ ಬಿಸಿ

ದೂರವಾಣಿ ಕದ್ದಾಲಿಕೆ ಪ್ರಕರಣದ ಸಂಬಂಧ ಬರುವ ದಿನಗಳಲ್ಲಿಹಿಂದಿನ ಪೊಲೀಸ್‌ ಆಯುಕ್ತರ ಅವಧಿಯಲ್ಲಿ ಕದ್ದಾಲಿಕೆ ಮಾಡಲಾದ ಫೋನ್‌ಗಳ ಕುರಿತಾಗಿಯೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.

Vijaya Karnataka Web 27 Sep 2019, 11:04 pm
ಬೆಂಗಳೂರು: ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಬೆಂಗಳೂರು ನಗರದ ಹಿಂದಿನ ಪೊಲೀಸ್‌ ಆಯುಕ್ತ, ಎಡಿಜಿಪಿ ಅಲೋಕ್‌ಕುಮಾರ್‌ ಅವರನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ 7 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದರು.
Vijaya Karnataka Web ಅಲೋಕ್‌ ಕುಮಾರ್‌
ಅಲೋಕ್‌ ಕುಮಾರ್‌


ಅಲೋಕ್‌ ಮನೆ ಮತ್ತು ಕಚೇರಿಯಲ್ಲಿಗುರುವಾರ 9 ತಾಸು ಶೋಧ ನಡೆಸಿದ್ದ ಸಿಬಿಐ ಅಧಿಖಾರಿಗಳು ಹಲವು ಮಾಹಿತಿ ಕಲೆ ಹಾಕಿದ್ದರು. ಅಲ್ಲದೇ ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು.

ಕುಮಾರಕೃಪಾ ಅತಿಥಿ ಗೃಹದಲ್ಲಿರುವ ಸಿಬಿಐ ತಾತ್ಕಾಲಿಕ ಕಚೇರಿಗೆ ಬೆಳಗ್ಗೆ 11 ಗಂಟೆಗೆ ತೆರಳಿದ ಅಲೋಕ್‌ಕುಮಾರ್‌ ಅವನ್ನು ಸಂಜೆ 6 ಗಂಟೆವರೆಗೂ ವಿಚಾರಣೆ ನಡೆಸಲಾಯಿತು. ಅಪರಾಧ ಪ್ರಕರಣಗಳಲ್ಲಿಪೂರ್ವಾನುಮತಿ ಪಡೆದಿರುವ ಫೋನ್‌ ನಂಬರ್‌ ಹೊರತುಪಡಿಸಿ ಇನ್ನಿತರ ಫೋನ್‌ ಕರೆಗಳನ್ನು ಕದ್ದಾಲಿಸಲಾಗಿತ್ತೇ? ಅವುಗಳನ್ನು ಯಾರ ನಿರ್ದೇಶನದ ಮೇಲೆ ಕದ್ದಾಲಿಸಲಾಗಿದೆ? ಅಪರಾಧ ಪ್ರಕರಣದಲ್ಲಿಕದ್ದಾಲಿಸಲಾಗಿದ್ದರೆ ಅದರ ಫಲಿತಾಂಶ ಏನು? ಯಾರನ್ನಾದರೂ ಬಂಧಿಸಲಾಗಿದೆಯೇ? ಮತ್ತು ಯಾವ ಮಹತ್ವದ ಮಾಹಿತಿಗಳು ಫೋನ್‌ ಕದ್ದಾಲಿಕೆಯಿಂದ ಲಭ್ಯವಾಗಿವೆ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಫೋನ್‌ ಕದ್ದಾಲಿಸುವ ವಿಶೇಷ ತಂಡದ ಇನ್ಸ್‌ಪೆಕ್ಟರ್‌ ಮತ್ತು ಎಸಿಪಿ ಮಟ್ಟದ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿರುವ ಸಿಬಿಐ ಅಧಿಕಾರಿಗಳು, ಸಂಬಂಧಪಟ್ಟ ಉಪಕರಣಗಳು, ಹಾರ್ಡ್‌ಡಿಸ್ಕ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.

ರಾಜ್ಯದಲ್ಲಿಯಾವ ಪ್ರಕರಣಗಳಲ್ಲಿಫೋನ್‌ ಕದ್ದಾಲಿಸಲಾಗುತ್ತದೆ. ಅವುಗಳ ಮೇಲ್ವಿಚಾರಣೆ ಮತ್ತು ವರದಿ ಸ್ವೀಕರಿಸುವ ಮತ್ತು ಪರಿಶೀಲನೆ ನಡೆಸುವ ಅಧಿಕಾರಿ ವ್ಯಾಪ್ತಿ ಯಾರಿಗೆ ಇದೆ ಎಂಬುದೂ ಸೇರಿದಂತೆ ರಾಜ್ಯದಲ್ಲಿಕದ್ದಾಲಿಸಲಾಗಿರುವ ಕರೆಗಳ ಕುರಿತಾಗಿ ವಿವಿಧ ಪ್ರಶ್ನೆಗಳನ್ನು ಅಲೋಕ್‌ ಕುಮಾರ್‌ ಅವರ ಮುಂದಿಟ್ಟಿದ್ದರು ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ