ಆ್ಯಪ್ನಗರ

Ambareesh Funeral: ಅಂಬಿ ಆರೋಗ್ಯ ಕುರಿತು ಡಾಕ್ಟರ್‌ ಹೇಳಿದ್ದೇನು?

ಬೆಂಗಳೂರು: ಹವಾಮಾನ ಬದಲಾಗಿದ್ದರಿಂದ ಅಂಬರೀಶ್‌ ಆರೋಗ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಏರುಪೇರು ಕಂಡುಬಂದಿತ್ತು...

Vijaya Karnataka 27 Nov 2018, 5:00 am
ಬೆಂಗಳೂರು: ಹವಾಮಾನ ಬದಲಾಗಿದ್ದರಿಂದ ಅಂಬರೀಶ್‌ ಆರೋಗ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಏರುಪೇರು ಕಂಡುಬಂದಿತ್ತು. ಆದರೆ ದಿಢೀರನೆ ಕಾರ್ಡಿಯಾಕ್‌ ಅಟ್ಯಾಕ್‌ ಆಗಿದ್ದು ಏಕೆ ಎಂಬ ಪ್ರಶ್ನೆಗೆ ನನ್ನ ಬಳಿಯೂ ಉತ್ತರವಿಲ್ಲ ಎಂದು ವಿಕ್ರಮ್‌ ಆಸ್ಪತ್ರೆಯ ಡಾ.ಸತೀಶ್‌ ಹೇಳಿದರು.
Vijaya Karnataka Web teta


''ಬಸವೇಶ್ವರ ವೃತ್ತದ ಬಳಿಯ ಫ್ಲ್ಯಾಟ್‌ನಲ್ಲಿ ಅಂಬರೀಶ್‌ ಹಾಗೂ ಪತ್ನಿ ಸುಮಲತ ಉಳಿದುಕೊಂಡಿದ್ದರು. ಕೇವಲ 5 ನಿಮಿಷದಲ್ಲಿ ಬರುವಷ್ಟು ದೂರದಲ್ಲಿ ವಿಕ್ರಮ್‌ ಆಸ್ಪತ್ರೆ ಇದೆ. ಅವರ ಜತೆ ವಿಕ್ರಮ್‌ ಆಸ್ಪತ್ರೆಯಿಂದ ನೇಮಿಸಿದ್ದ ನುರಿತ ಶುಶ್ರೂಷಕರೊಬ್ಬರು ಇದ್ದರು. ಶನಿವಾರ ಸಂಜೆ ಅವರಿಗೆ ಕಾರ್ಡಿಯಾಕ್‌ ಅಟ್ಯಾಕ್‌ ಆಗಿತ್ತು. ದೂರವಾಣಿ ಕರೆ ಮಾಡಿದ್ದ ಸುಮಲತ ಜೋರಾಗಿ ಅಳುತ್ತಾ ಮಾಹಿತಿ ನೀಡಿದರು. ನಾನು ಕೂಡಲೇ ಶುಶ್ರೂಷಕರೊಂದಿಗೆ ಫೋನ್‌ನಲ್ಲಿ ಮಾತನಾಡಿ, ಆಕ್ಸಿಜನ್‌ ಹೆಚ್ಚಳ ಮಾಡಿ, ಕಾರ್ಡಿಯಾಕ್‌ ಮಸಾಜ್‌ ಮಾಡಲು ಹೇಳಿದೆ. ಪ್ರಥಮ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ತಕ್ಷಣವೇ ನಮ್ಮ ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ ಕಳುಹಿಸಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಷ್ಟು ಹೊತ್ತಿಗೆ ದೇಹ ತಣ್ಣಗಾಗಿತ್ತು,'' ಎಂದು ಅವರು ತಿಳಿಸಿದರು.

''2014 ನಂತರ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದು ಬಂದ ಬಳಿಕ ಅವರ ಆರೋಗ್ಯ ಬಹಳ ಸುಧಾರಿಸಿತ್ತು. ಬೇರೆ ವೈದ್ಯರು ಔಷಧ ಹೇಳಿದರೆ ಅದನ್ನು ತೆಗೆದುಕೊಳ್ಳುತ್ತಿರಲಿಲ್ಲ. ನಾನು ಹೇಳಿದರೆ ಮಾತ್ರ ಔಷಧ ಸೇವಿಸುತ್ತಿದ್ದರು. ಹಿಂದಿನ ದಿನ ಚೆನ್ನಾಗಿಯೇ ಇದ್ದವರು ಮರುದಿನ ಇಲ್ಲವಾದರು,'' ಎಂದು ಅಂದಿನ ಘಟನೆ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ