ಆ್ಯಪ್ನಗರ

ಗುಂಡು ಪ್ರಿಯ ಮಂಡ್ಯದ ಗಂಡು ಟಿಪ್ಸ್ ಕೊಡೋದ್ರಲ್ಲಿ ಎತ್ತಿದ ಕೈ

ಒಂದು ಸಾರಿ ಅಂಬಿ, ಸಹಾಯಕರಿಗೆ 10ಸಾವಿರ ಕೊಟ್ಟು ಇಲ್ಲಿ ಕೆಲಸ ಮಾಡುವ ಎಲ್ಲರಿಗೂ ಹಂಚು ಅಂತ ಹೇಳಿ ಹೋದರು.

Vijaya Karnataka Web 25 Nov 2018, 11:48 am
ಬೆಂಗಳೂರು: ಅಂಬರೀಶ್ ಗುಂಡು ಪ್ರಿಯರು. ಅವರು ಬಂದರೆಂದರೆ ರೆಸ್ಟೋರೆಂಟ್‌‌ನಲ್ಲಿ ಸರ್ವ್ ಮಾಡುವ ಹುಡುಗರಿಗೆ ಹಬ್ಬವೋ ಹಬ್ಬ. ವಾಪಸ್ ಹೋಗುವಾಗ ಕೈ ತುಂಬಾ ಟಿಪ್ಸ್ ಕೊಟ್ಟು ಹೋಗುವುದನ್ನು ಅವರು ಯಾವತ್ತೂ ಮರೆಯುತ್ತಿರಲಿಲ್ಲ.
Vijaya Karnataka Web Ambi


ಒಂದು ಸಾರಿ ಅಂಬಿ, ಸಹಾಯಕರಿಗೆ 10ಸಾವಿರ ಕೊಟ್ಟು ಇಲ್ಲಿ ಕೆಲಸ ಮಾಡುವ ಎಲ್ಲರಿಗೂ ಹಂಚು ಅಂತ ಹೇಳಿ ಹೋದರು. ಬಳಿಕ ಏನನ್ನಿಸಿತೋ ಏನೋ! ಮರಳಿ ಬಂದು ಎಲ್ಲರಿಗೆ ದುಡ್ಡು ಹಂಚಿದ್ದೀರಾ ಎಂದು ಕೇಳಿದರು. ಅರೇ! ನೀವು ಕೊಟ್ಟಿದ್ದು10ಸಾವಿರನಾ ಸಾರ್. ಸಾವಿರ ಅಲ್ವಾ? ಅಂದರಂತೆ ರೆಸ್ಟೋರೆಂಟ್ ಹುಡುಗರು. ಸಹಾಯಕನನ್ನು ಕರೆದು ಚೆನ್ನಾಗಿ ಉಗಿದಾಗ ಬಚ್ಚಿಟ್ಟುಕೊಂಡಿದ್ದ 9ಸಾವಿರವನ್ನು ಆತ ಅಂಬರೀಶ್ ಎದುರಲ್ಲೇ ಎಲ್ಲರಿಗೂ ಹಂಚಿದನಂತೆ.

ಹೀಗಿದ್ದರು ನೋಡಿ ನಮ್ಮ ಅಂಬಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ