ಆ್ಯಪ್ನಗರ

ಕಾಶಿಯಲ್ಲಿ ಅಂಬರೀಶ್‌ ಅಸ್ಥಿ ವಿಸರ್ಜಿಸಿದ ದೊಡ್ಡಣ್ಣ, ರಾಜೇಂದ್ರ ಸಿಂಗ್‌ ಬಾಬು

ಕಾಶಿಯ ಪವಿತ್ರ ಘಾಟ್‌ನಲ್ಲಿ ಲೀನರಾದ ಕರುನಾಡ ಕರ್ಣ

Vijaya Karnataka Web 2 Dec 2018, 6:29 pm
ಬೆಂಗಳೂರು: ಇತ್ತೀಚಿಗೆ ನಿಧನರಾದ ಕನ್ನಡ ಚಿತ್ರರಂಗದ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಅಸ್ಥಿಯನ್ನು ಕಾಶಿಯಲ್ಲಿರುವ ಸಂಗಮದಲ್ಲಿ ವಿಸರ್ಜಿಸಲಾಯಿತು.
Vijaya Karnataka Web ದೊಡ್ಡಣ್ಣ, ರಾಜೇಂದ್ರ ಸಿಂಗ್‌ ಬಾಬು
ದೊಡ್ಡಣ್ಣ, ರಾಜೇಂದ್ರ ಸಿಂಗ್‌ ಬಾಬು


ಅಂಬಿಯ ಆಪ್ತ ಬಣದಲ್ಲಿರುವ ದೊಡ್ಡಣ್ಣ ಹಾಗೂ ರೆಬೆಲ್‌ ಸ್ಟಾರ್‌ ಎಂಬ ಬಿರುದು ಬರಲು ಕಾರಣರಾದ ನಿರ್ದೇಶಕ, ರಾಜೇಂದ್ರ ಸಿಂಗ್‌ ಬಾಬು ಅಸ್ಥಿಯನ್ನು ಶಾಸ್ತ್ರೋಕ್ತವಾಗಿ ಗಂಗಾನದಿಯ ಸಂಗಮದಲ್ಲಿ ವಿಸರ್ಜನೆ ಮಾಡಿದರು.

ಕಳೆದ ಶನಿವಾರ ನಿಧನರಾದ ಅಂಬರೀಶ್‌ ಅವರ ಅಂತ್ಯಕ್ರಿಯೆ ಕಳೆದ ಸೋಮವಾರ ನಡೆದಿತ್ತು.. ಕಳೆದ ಬುಧವಾರ ಕಾವೇರಿಯ ಸಂಗಮದಲ್ಲಿ ಕುಟುಂಬ ಸದಸ್ಯರಾದ ಪುತ್ರ ಅಭಿಷೇಕ್‌, ಪತ್ನಿ ಸುಮಲತಾ, ರಾಕ್‌ಲೈನ್‌ ವೆಂಕಟೇಶ್‌, ದರ್ಶನ್‌, ಶಾಸಕ ಮುನಿರತ್ನ ಸೇರಿದಂತೆ ಹಲವರು ತೆರಳಿ ಅಂಬಿ ಅಸ್ಥಿ ವಿಸರ್ಜನೆ ಮಾಡಿದ್ದರು.

ನಂತರ ಒಟ್ಟು ಮೂರು ಕಡೆ ಅಂಬಿ ಅಸ್ಥಿ ವಿಸರ್ಜನೆ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

ಅದರಂತೆ ದೊಡ್ಡಣ್ಣ ಮತ್ತು ರಾಜೇಂದ್ರ ಸಿಂಗ್‌ ಬಾಬು ಅವರು ಕಾಶಿಯಲ್ಲಿ ಅಂಬಿ ಅಸ್ಥಿ ವಿಸರ್ಜನೆ ಕಾರ್ಯಗಳನ್ನು ವಿಧಿ ವಿಧಾನಗಳೊಂದಿಗೆ ಪೂರೈಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ