ಆ್ಯಪ್ನಗರ

ಇಂದು ಅಂಬಿ ಚಿತಾಭಸ್ಮ ವಿಸರ್ಜನೆ

ಅಂಬರೀಶ್‌ ಸ್ನೇಹಿತರು ಮತ್ತು ಸಿನಿಮಾ ರಂಗದ ಕೆಲ ಹಿತೈಷಿಗಳು ಸೇರಿಕೊಂಡು ಕಾಶಿ ಮತ್ತು ಗೋಕರ್ಣದಲ್ಲೂ ಚಿತಾಭಸ್ಮ ವಿಸರ್ಜನೆ ಮಾಡಬೇಕು ಎಂಬ ತೀರ್ಮಾನ ಕೂಡ ಮಾಡಿದ್ದಾರೆ

Vijaya Karnataka 28 Nov 2018, 5:30 am
ಬೆಂಗಳೂರು: 'ರೆಬಲ್‌ ಸ್ಟಾರ್‌' ಅಂಬರೀಶ್‌ರ ಚಿತಾಭಸ್ಮವನ್ನು ಬುಧವಾರ ಶ್ರೀರಂಗಪಟ್ಟಣದಲ್ಲಿರುವ ಪಶ್ಚಿಮ ವಾಹಿನಿಯಲ್ಲಿ ವಿಸರ್ಜನೆ ಮಾಡುವುದಾಗಿ ಅಂಬರೀಶ್‌ ಆಪ್ತ, ನಟ ದೊಡ್ಡಣ್ಣ ತಿಳಿಸಿದ್ದಾರೆ.
Vijaya Karnataka Web ambi


ಅಂಬರೀಶ್‌ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌, ಕುಟುಂಬದ ಸದಸ್ಯರು ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ಅಂಬಿ ಆಪ್ತ ಜಗನ್ನಾಥ್‌ ಸೇರಿದಂತೆ ಕೆಲ ಸಿನಿಮಾ ತಾರೆಯರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

''ಅಂಬರೀಶ್‌ ಸ್ನೇಹಿತರು ಮತ್ತು ಸಿನಿಮಾ ರಂಗದ ಕೆಲ ಹಿತೈಷಿಗಳು ಸೇರಿಕೊಂಡು ಕಾಶಿ ಮತ್ತು ಗೋಕರ್ಣದಲ್ಲೂ ಚಿತಾಭಸ್ಮ ವಿಸರ್ಜನೆ ಮಾಡಬೇಕು ಎಂಬ ತೀರ್ಮಾನ ಕೂಡ ಮಾಡಿದ್ದಾರೆ,'' ಎಂದು ದೊಡ್ಡಣ್ಣ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ