ಜಿಂದಾಲ್ ವಿಷಯವಾಗಿ ನನ್ನ ಮನವಿಗೆ ಬೆಲೆ ಸಿಗದ್ದಕ್ಕೆ ರಾಜೀನಾಮೆ: ಆನಂದ್ ಸಿಂಗ್
ರಾಜಭವನದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರನ್ನು ಭೇಟಿ ಮಾಡಿ ಮಾಧ್ಯಮದವರ ಜತೆ ಮಾತನಾಡಿದ ಆನಂದ್ ಸಿಂಗ್, 'ನನ್ನ ಜಿಲ್ಲೆಗೆ ಅನ್ಯಾಯ ಆಗುತ್ತಿದೆ. ಅದನ್ನು ಸರಿ ಪಡಿಸಿಲ್ಲ. ಆದರೆ ಅದರ ವಿರುದ್ಧ ಧ್ವನಿ ಎತ್ತದೇ ಇದ್ದರೆ ನಾನು ಇದ್ದು ಇಲ್ಲದಂತೆ' ಎಂದರು.
Vijaya Karnataka Web 1 Jul 2019, 3:21 pm
ಬೆಂಗಳೂರು: ನನ್ನ ರಾಜ್ಯದ ಜನರಿಗೆ ಉದ್ಯೋಗ ಸಿಗಬೇಕು. ಜಿಂದಾಲ್ಗೆ ಭೂಮಿ ಪರಭಾರೆ ಮಾಡಬೇಡಿ ಎಂದು ಮನವಿ ಮಾಡಿದ್ದೆ. ಆದರೆ, ನನ್ನ ಮಾತಿಗೆ ಬೆಲೆ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೇನೆ ಎಂದು ಶಾಸಕ ಆನಂದ್ ಸಿಂಗ್ ತಿಳಿಸಿದ್ದಾರೆ.
ರಾಜಭವನದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರನ್ನು ಭೇಟಿ ಮಾಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಜಿಲ್ಲೆಗೆ ಅನ್ಯಾಯ ಆಗುತ್ತಿದೆ. ಅದನ್ನು ಸರಿ ಪಡಿಸಿಲ್ಲ. ಆದರೆ ಅದರ ವಿರುದ್ಧ ಧ್ವನಿ ಎತ್ತದೇ ಇದ್ದರೆ ನಾನು ಇದ್ದು ಇಲ್ಲದಂತೆ. ಬೇರೆ ಬೇರೆ ಸರಕಾರ ತಪ್ಪು ಮಾಡಿರಬಹುದು. ಆದರೆ, ಅದನ್ನು ಸರಿಪಡಿಸಬೇಕು ಎಂದು ಹೇಳಿದರು.
ನಮ್ಮ ನಾಯಕರಿಗೆ ಮುಜುಗರ ತರುವಂತ ಹೇಳಿಕೆ ನಾನು ನೀಡಲ್ಲ. ಜಿಂದಾಲ್ಗೆ ಭೂಮಿ ನೀಡುವ ವಿಚಾರದಲ್ಲಿ ನನ್ನ ತೀವ್ರ ವಿರೋಧ ಇದೆ. ಬಳ್ಳಾರಿಯ ಶಾಸಕರ ಪಕ್ಷಾತೀತವಾಗಿ ಹೋರಾಟಕ್ಕೆ ಕೈ ಜೋಡಿಸಬೇಕು. ಭೂಮಿ ಮಾರಾಟ ಮಾಡೋದು ಬೇಡ. ಬೇಕಾದರೆ ಲೀಸ್ ಮುಂದುವರೆಸಲಿ. ಇದು ಯಾವುದೇ ಆಪರೇಷನ್ ಕಮಲ ಅಲ್ಲ. ನನ್ನ ಜಿಲ್ಲೆ ಉಳಿಯಬೇಕೆಂದು ನಾನು ರಾಜೀನಾಮೆ ನೀಡಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.
ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ನನಗೆ ನನ್ನ ಜಿಲ್ಲೆ ಮುಖ್ಯ. ಸಚಿವ ಸ್ಥಾನಕ್ಕೆ ನಾನು ಅಂಟಿಕೊಂಡಿಲ್ಲ. ನಾನು ಗುಂಪುಗಾರಿಕೆ ಮಾಡುತ್ತಿಲ್ಲ. ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಎಲ್ಲ ಪಕ್ಷದ ಜತೆ ಚೆನ್ನಾಗಿದ್ದೇನೆ. ರಾಜ್ಯಪಾಲರಿಗೆ ರಾಜೀನಾಮೆ ಪ್ರತಿ ಕೊಟ್ಟಿದ್ದೇನೆ. ಮತ್ತೆ ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಕೊಡುತ್ತೇನೆ ಎಂದರು.
ವಿಜಯನಗರ ಜಿಲ್ಲೆಯಾಗಬೇಕು ಎಂಬುದು ನನ್ನ ಬೇಡಿಕೆ. ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ. ಎಲ್ಲದಕ್ಕೂ ಸಿದ್ಧ. ಬೇಡಿಕೆ ಈಡೇರಿದರೆ ಏನು ಮಾಡಬೇಕು ಎನ್ನುವುದನ್ನು ಮುಂದೆ ತೀರ್ಮಾನಿಸುತ್ತೇನೆ. ಬೇಡಿಕೆ ಇಟ್ಟಿದ್ದೇನೆ. ಸರಕಾರ ಹೇಗೆ ಸ್ಪಂದಿಸುತ್ತೆ ಎಂಬುದನ್ನು ಕಾದು ನೋಡುತ್ತೇನೆ ಎಂದು ಆನಂದ್ ಸಿಂಗ್ ತಿಳಿಸಿದರು.
ರಾಜಭವನದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರನ್ನು ಭೇಟಿ ಮಾಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಜಿಲ್ಲೆಗೆ ಅನ್ಯಾಯ ಆಗುತ್ತಿದೆ. ಅದನ್ನು ಸರಿ ಪಡಿಸಿಲ್ಲ. ಆದರೆ ಅದರ ವಿರುದ್ಧ ಧ್ವನಿ ಎತ್ತದೇ ಇದ್ದರೆ ನಾನು ಇದ್ದು ಇಲ್ಲದಂತೆ. ಬೇರೆ ಬೇರೆ ಸರಕಾರ ತಪ್ಪು ಮಾಡಿರಬಹುದು. ಆದರೆ, ಅದನ್ನು ಸರಿಪಡಿಸಬೇಕು ಎಂದು ಹೇಳಿದರು.
ನಮ್ಮ ನಾಯಕರಿಗೆ ಮುಜುಗರ ತರುವಂತ ಹೇಳಿಕೆ ನಾನು ನೀಡಲ್ಲ. ಜಿಂದಾಲ್ಗೆ ಭೂಮಿ ನೀಡುವ ವಿಚಾರದಲ್ಲಿ ನನ್ನ ತೀವ್ರ ವಿರೋಧ ಇದೆ. ಬಳ್ಳಾರಿಯ ಶಾಸಕರ ಪಕ್ಷಾತೀತವಾಗಿ ಹೋರಾಟಕ್ಕೆ ಕೈ ಜೋಡಿಸಬೇಕು. ಭೂಮಿ ಮಾರಾಟ ಮಾಡೋದು ಬೇಡ. ಬೇಕಾದರೆ ಲೀಸ್ ಮುಂದುವರೆಸಲಿ. ಇದು ಯಾವುದೇ ಆಪರೇಷನ್ ಕಮಲ ಅಲ್ಲ. ನನ್ನ ಜಿಲ್ಲೆ ಉಳಿಯಬೇಕೆಂದು ನಾನು ರಾಜೀನಾಮೆ ನೀಡಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.
ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ನನಗೆ ನನ್ನ ಜಿಲ್ಲೆ ಮುಖ್ಯ. ಸಚಿವ ಸ್ಥಾನಕ್ಕೆ ನಾನು ಅಂಟಿಕೊಂಡಿಲ್ಲ. ನಾನು ಗುಂಪುಗಾರಿಕೆ ಮಾಡುತ್ತಿಲ್ಲ. ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಎಲ್ಲ ಪಕ್ಷದ ಜತೆ ಚೆನ್ನಾಗಿದ್ದೇನೆ. ರಾಜ್ಯಪಾಲರಿಗೆ ರಾಜೀನಾಮೆ ಪ್ರತಿ ಕೊಟ್ಟಿದ್ದೇನೆ. ಮತ್ತೆ ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಕೊಡುತ್ತೇನೆ ಎಂದರು.
ವಿಜಯನಗರ ಜಿಲ್ಲೆಯಾಗಬೇಕು ಎಂಬುದು ನನ್ನ ಬೇಡಿಕೆ. ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ. ಎಲ್ಲದಕ್ಕೂ ಸಿದ್ಧ. ಬೇಡಿಕೆ ಈಡೇರಿದರೆ ಏನು ಮಾಡಬೇಕು ಎನ್ನುವುದನ್ನು ಮುಂದೆ ತೀರ್ಮಾನಿಸುತ್ತೇನೆ. ಬೇಡಿಕೆ ಇಟ್ಟಿದ್ದೇನೆ. ಸರಕಾರ ಹೇಗೆ ಸ್ಪಂದಿಸುತ್ತೆ ಎಂಬುದನ್ನು ಕಾದು ನೋಡುತ್ತೇನೆ ಎಂದು ಆನಂದ್ ಸಿಂಗ್ ತಿಳಿಸಿದರು.