ಆ್ಯಪ್ನಗರ

ಅಂಜು ಅಥ್ಲೆಟಿಕ್ಸ್‌ ಅಕಾಡೆಮಿಗೆ ಕೇಂದ್ರದಿಂದ 5 ಕೋಟಿ ರೂಪಾಯಿ

ಬೆಂಗಳೂರಿನಲ್ಲಿಅಥ್ಲೆಟಿಕ್ಸ್‌ ಅಕಾಡೆಮಿ ನಿರ್ಮಿಸಲು ಅಥ್ಲೀಟ್‌ ಅಂಜು ಬಾಬ್ಬಿ ಜಾಜ್‌ರ್‍ ಅವರಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಮಂಗಳವಾರ 5 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.

Vijaya Karnataka 18 Sep 2019, 5:00 am
ಬೆಂಗಳೂರು: ಬೆಂಗಳೂರಿನಲ್ಲಿಅಥ್ಲೆಟಿಕ್ಸ್‌ ಅಕಾಡೆಮಿ ನಿರ್ಮಿಸಲು ಅಥ್ಲೀಟ್‌ ಅಂಜು ಬಾಬ್ಬಿ ಜಾಜ್‌ರ್‍ ಅವರಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಮಂಗಳವಾರ 5 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
Vijaya Karnataka Web anju academe have got 5 crore
ಅಂಜು ಅಥ್ಲೆಟಿಕ್ಸ್‌ ಅಕಾಡೆಮಿಗೆ ಕೇಂದ್ರದಿಂದ 5 ಕೋಟಿ ರೂಪಾಯಿ


ಕೇರಳ ಮೂಲದ ಲಾಂಗ್‌ ಜಂಪ್‌ ಪಟು ಅಂಜು ಬಾಬ್ಬಿ ಜಾಜ್‌ರ್‍ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಪದಕ ಗೆದ್ದ ಭಾರತದ ಪ್ರಪ್ರಥಮ ಮತ್ತು ಏಕೈಕ ಅಥ್ಲೀಟ್‌ ಎನಿಸಿಕೊಂಡಿದ್ದಾರೆ. 2003ರಲ್ಲಿಪ್ಯಾರಿಸ್‌ನಲ್ಲಿನಡೆದ ಚಾಂಪಿಯನ್‌ಷಿಪ್‌ನ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿಅವರು ಕಂಚಿನ ಪದಕ ಗೆದ್ದಿದ್ದರು.

''2003ರ ಪ್ಯಾರಿಸ್‌ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಪದಕ (ಲಾಂಗ್‌ ಜಂಪ್‌ನಲ್ಲಿಕಂಚು) ಗೆದ್ದ ಭಾರತದ ಮೊದಲ ಮತ್ತು ಏಕೈಕ ಅಥ್ಲೀಟ್‌ ಅಂಜು ಬಾಬ್ಬಿ ಜಾಜ್‌ರ್‍ ಅವರನ್ನು ಭೇಟಿ ಮಾಡಲು ಸಂತಸವಾಗುತ್ತಿದೆ. ಅವರ ಬೆಂಗಳೂರಿನ ಅಥ್ಲೆಟಿಕ್ಸ್‌ ಅಕಾಡೆಮಿಗೆ ಇಂದು (ಮಂಗಳವಾರ) 5 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ,'' ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ