ಹೊಸದಿಲ್ಲಿ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರೊಂದಿಗೆ ಅನಿರ್ದಿಷ್ಟ ನಿರಶನ ನಡೆಸುತ್ತಿರುವ ರಾಜ್ಯದ ರೈತ ಅಜಯಕುಮಾರ್ ಪಾಟೀಲ್ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮರ್ತೂರು ಗ್ರಾಮದ ಪಾಟೀಲರು ಕಳೆದ ನಾಲ್ಕು ದಿನಗಳಿಂದಲೇ ಅಣ್ಣಾ ಹಜಾರೆ ಅವರ ಜತೆಗೆ ನಿರಶನಕ್ಕೆ ಕುಳಿತಿದ್ದರು. ''ಸೋಮವಾರ ಮಧ್ಯಾಹ್ನ ಪ್ರಜ್ಞೆ ತಪ್ಪಿದ ನಂತರ ಸಮೀಪದ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮತ್ತೆ ಅವರು ನಿರಶನ ಮುಂದುವರಿಸಿದ್ದಾರೆ,'' ಎಂದು ಅಣ್ಣಾ ಹಜಾರೆ ಅವರ ಕೋರ್ ಕಮಿಟಿಯ ಸದಸ್ಯ ರಾಜ್ಯದ ರಾಮ್ನಾಯ್ಕ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಲೋಕಪಾಲ್, ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕ, ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿಯ ಬೇಡಿಕೆಗಳನ್ನು ಇಟ್ಟುಕೊಂಡು 23 ರಿಂದ ಅಣ್ಣಾ ಹಜಾರೆ ಅವರು ನಿರಶನ ಆರಂಭಿಸಿದ್ದಾರೆ. ರಾಜ್ಯದಿಂದ 500ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮರ್ತೂರು ಗ್ರಾಮದ ಪಾಟೀಲರು ಕಳೆದ ನಾಲ್ಕು ದಿನಗಳಿಂದಲೇ ಅಣ್ಣಾ ಹಜಾರೆ ಅವರ ಜತೆಗೆ ನಿರಶನಕ್ಕೆ ಕುಳಿತಿದ್ದರು. ''ಸೋಮವಾರ ಮಧ್ಯಾಹ್ನ ಪ್ರಜ್ಞೆ ತಪ್ಪಿದ ನಂತರ ಸಮೀಪದ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮತ್ತೆ ಅವರು ನಿರಶನ ಮುಂದುವರಿಸಿದ್ದಾರೆ,'' ಎಂದು ಅಣ್ಣಾ ಹಜಾರೆ ಅವರ ಕೋರ್ ಕಮಿಟಿಯ ಸದಸ್ಯ ರಾಜ್ಯದ ರಾಮ್ನಾಯ್ಕ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಲೋಕಪಾಲ್, ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕ, ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿಯ ಬೇಡಿಕೆಗಳನ್ನು ಇಟ್ಟುಕೊಂಡು 23 ರಿಂದ ಅಣ್ಣಾ ಹಜಾರೆ ಅವರು ನಿರಶನ ಆರಂಭಿಸಿದ್ದಾರೆ. ರಾಜ್ಯದಿಂದ 500ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ.