ಬೆಂಗಳೂರು: ರಾಜ್ಯದಲ್ಲಿ ಬಯಲಿಗೆ ಬಂದಿರುವ ಮಾದಕ ವಸ್ತು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆ ಇಟ್ಟಿದ್ದು ಯಾವುದೇ ಒತ್ತಡ ಹಾಗೂ ಪ್ರಭಾವಗಳಿಗೆ ಮಣಿಯುವುದಿಲ್ಲ. ರಾಜ್ಯಕ್ಕೆ ಮಾದಕ ವಸ್ತುಗಳನ್ನು ಹಲವು ಮಾರ್ಗಗಳಲ್ಲಿ ಪೂರೈಸಲಾಗುತ್ತಿರುವುದರ ಬಗ್ಗೆಯೂ ತನಿಖೆ ನಡೆದಿದೆ. ಗಡಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಚೆಕ್ಪೋಸ್ಟ್ಗಳಲ್ಲಿ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾದಕ ವಸ್ತು ದಂಧೆಯಲ್ಲಿ ಯಾರೇ ಶಾಮೀಲಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದೇ ಹೊರತು ಪ್ರಭಾವಗಳಿಗೆ ಮಣಿಯುವುದಿಲ್ಲ. ಈ ದಂಧೆಯಲ್ಲಿಎಷ್ಟೇ ದೊಡ್ಡವರು ಭಾಗಿಯಾಗಿರಲಿ ಅವರನ್ನು ಹೊರಗೆಳೆಯುತ್ತೇವೆ. ತನಿಖೆ ಯಾವುದೇ ಹಸ್ತಕ್ಷೇಪ ಇಲ್ಲವೇ ಒತ್ತಡಗಳು ಇಲ್ಲದೆ ಮುಕ್ತವಾಗಿ ನಡೆದಿದೆ ಎಂದರು.
ರಾಗಿಣಿ ಪಾಗಿಣಿ ಗೊತ್ತಿಲ್ಲ, ಯಾರೇ ತಪ್ಪು ಮಾಡಿದ್ರೂ ಅಂಥವರ ವಿರುದ್ಧ ಕಠಿಣ ಕ್ರಮ - ಗೋವಿಂದ ಕಾರಜೋಳ
ಮಾದಕ ವಸ್ತುಗಳ ಸೇವನೆ, ಮಾರಾಟ, ಪೂರೈಕೆ ಜಾಲದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಕ್ರಮ ತೆಗೆದುಕೊಳ್ಳದಂತೆ ಪೊಲೀಸರ ಮೇಲೆ ಪ್ರಭಾವಿಗಳು ಒತ್ತಡ ತರುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಬಸವರಾಜ ಬೊಮ್ಮಾಯಿ ಅವರು, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಡ್ರಗ್ಸ್ ಜಾಲದಲ್ಲಿ ಕೆಲವು ಪ್ರಭಾವಿಗಳು ಒತ್ತಡ ಹಾಕಿದ್ದಾರೆ ಎಂದು ಹೇಳಿಲ್ಲ. ಒತ್ತಡ ಇದೆ ಎಂದು ಹೇಳಿದ್ದಾರೆ. ನಾವು ಯಾವುದಕ್ಕೂ ಬಗ್ಗುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ಮಾಡಿಯೇ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾದಕ ವಸ್ತುಗಳ ದಂಧೆಯ ಕಿಂಗ್ ಪಿನ್ ಎಂದು ಹೇಳಲಾದ ವೀರೇನ್ ಖನ್ನಾ ಎಂಬಾತನನ್ನು ದೆಹಲಿಯಲ್ಲಿ ರಾಜ್ಯದ ಸಿಸಿಪಿ ಪೊಲೀಸರು ಬಂಧಿಸಿದ್ದು ಆತನ ವಿಚಾರಣೆಯೂ ನಡೆದಿದೆ. ಈ ದಂಧೆಯ ಮೂಲದ ಹಿಂದಿರುವ ವ್ಯಕ್ತಿಗಳು ಯಾರು? ಯಾರಿಗೆ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂಬುದು ಸೇರಿದಂತೆ ಎಲ್ಲಾಆಯಾಮದಿಂದಲೂ ತನಿಖೆ ನಡೆದಿದೆ ಎಂದರು.
ಈ ದಂಧೆ ಬಗ್ಗೆ ವಿಧಾನಸಭೆಯಲ್ಲಿ ಬಹಳ ಹಿಂದೆಯೇ ಸಾಕಷ್ಟು ಸಲ ಚರ್ಚೆಗಳು ನಡೆದಿವೆ. ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಯೋಗೀಶ್ ಭಟ್ ಅವರು ಸಲ್ಲಿಸಿರುವ ವರದಿ ಸರಕಾರದ ಗಮನದಲ್ಲಿದೆ. ಈ ವರದಿಯನ್ನು ಅಧ್ಯಯನ ಮಾಡಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ವರದಿಯಲ್ಲಿನ ಶಿಫಾರಸುಗಳನ್ನು ಸರಕಾರ ಪರಿಗಣಿಸಲಿದೆ ಎಂದು ಬೊಮ್ಮಾಯಿ ಹೇಳಿದರು.
ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾದಕ ವಸ್ತು ದಂಧೆಯಲ್ಲಿ ಯಾರೇ ಶಾಮೀಲಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದೇ ಹೊರತು ಪ್ರಭಾವಗಳಿಗೆ ಮಣಿಯುವುದಿಲ್ಲ. ಈ ದಂಧೆಯಲ್ಲಿಎಷ್ಟೇ ದೊಡ್ಡವರು ಭಾಗಿಯಾಗಿರಲಿ ಅವರನ್ನು ಹೊರಗೆಳೆಯುತ್ತೇವೆ. ತನಿಖೆ ಯಾವುದೇ ಹಸ್ತಕ್ಷೇಪ ಇಲ್ಲವೇ ಒತ್ತಡಗಳು ಇಲ್ಲದೆ ಮುಕ್ತವಾಗಿ ನಡೆದಿದೆ ಎಂದರು.
ರಾಗಿಣಿ ಪಾಗಿಣಿ ಗೊತ್ತಿಲ್ಲ, ಯಾರೇ ತಪ್ಪು ಮಾಡಿದ್ರೂ ಅಂಥವರ ವಿರುದ್ಧ ಕಠಿಣ ಕ್ರಮ - ಗೋವಿಂದ ಕಾರಜೋಳ
ಮಾದಕ ವಸ್ತುಗಳ ಸೇವನೆ, ಮಾರಾಟ, ಪೂರೈಕೆ ಜಾಲದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಕ್ರಮ ತೆಗೆದುಕೊಳ್ಳದಂತೆ ಪೊಲೀಸರ ಮೇಲೆ ಪ್ರಭಾವಿಗಳು ಒತ್ತಡ ತರುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಬಸವರಾಜ ಬೊಮ್ಮಾಯಿ ಅವರು, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಡ್ರಗ್ಸ್ ಜಾಲದಲ್ಲಿ ಕೆಲವು ಪ್ರಭಾವಿಗಳು ಒತ್ತಡ ಹಾಕಿದ್ದಾರೆ ಎಂದು ಹೇಳಿಲ್ಲ. ಒತ್ತಡ ಇದೆ ಎಂದು ಹೇಳಿದ್ದಾರೆ. ನಾವು ಯಾವುದಕ್ಕೂ ಬಗ್ಗುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ಮಾಡಿಯೇ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾದಕ ವಸ್ತುಗಳ ದಂಧೆಯ ಕಿಂಗ್ ಪಿನ್ ಎಂದು ಹೇಳಲಾದ ವೀರೇನ್ ಖನ್ನಾ ಎಂಬಾತನನ್ನು ದೆಹಲಿಯಲ್ಲಿ ರಾಜ್ಯದ ಸಿಸಿಪಿ ಪೊಲೀಸರು ಬಂಧಿಸಿದ್ದು ಆತನ ವಿಚಾರಣೆಯೂ ನಡೆದಿದೆ. ಈ ದಂಧೆಯ ಮೂಲದ ಹಿಂದಿರುವ ವ್ಯಕ್ತಿಗಳು ಯಾರು? ಯಾರಿಗೆ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂಬುದು ಸೇರಿದಂತೆ ಎಲ್ಲಾಆಯಾಮದಿಂದಲೂ ತನಿಖೆ ನಡೆದಿದೆ ಎಂದರು.
ಈ ದಂಧೆ ಬಗ್ಗೆ ವಿಧಾನಸಭೆಯಲ್ಲಿ ಬಹಳ ಹಿಂದೆಯೇ ಸಾಕಷ್ಟು ಸಲ ಚರ್ಚೆಗಳು ನಡೆದಿವೆ. ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಯೋಗೀಶ್ ಭಟ್ ಅವರು ಸಲ್ಲಿಸಿರುವ ವರದಿ ಸರಕಾರದ ಗಮನದಲ್ಲಿದೆ. ಈ ವರದಿಯನ್ನು ಅಧ್ಯಯನ ಮಾಡಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ವರದಿಯಲ್ಲಿನ ಶಿಫಾರಸುಗಳನ್ನು ಸರಕಾರ ಪರಿಗಣಿಸಲಿದೆ ಎಂದು ಬೊಮ್ಮಾಯಿ ಹೇಳಿದರು.