ಆ್ಯಪ್ನಗರ

ಎಸ್‌ಸಿ ಪಟ್ಟಿಯಿಂದ ಈ ಜಾತಿಗಳನ್ನು ಹೊರಗಿಡಲು ಆಯೋಗಕ್ಕೆ ಮನವಿ

ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗವನ್ನು ಭೇಟಿ ಮಾಡಿರುವ ನಿಯೋಗ ಕೆಲ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಹೊರಗಿಡುವಂತೆ ಮನವಿ ಮಾಡಿದೆ.

Vijaya Karnataka Web 29 Feb 2020, 10:16 am
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕರ್ನಾಟಕ ರಾಜ್ಯ ಅಸ್ಪ್ರಶ್ಯ ಸಮುದಾಯಗಳ ಪರವಾಗಿ ದೇವಮಿತ್ರ ರಾಯಚೂರು, ಮಾರುತಿರಾವ್‌ ಯಾದಗಿರಿ, ಕೃಷ್ಣ ಸಿಎಂ ಹಾಗೂ ಪ್ರಸನ್ನಕುಮಾರ್‌ ಬಿ.ಎಸ್‌. ಅವರನ್ನೊಳಗೊಂಡ ಸಮಿತಿಯು, 'ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗ'ವನ್ನು ಭೇಟಿ ಮಾಡಿ ಲಂಬಾಣಿ, ವಡ್ಡ, ಬೋವಿ, ಕೊರಮ, ಕೊರಚ, ಬುಡ್ಗ ಜಂಗಮ, ಬೇಡ ಜಂಗಮ ಇತ್ಯಾದಿ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಹೊರಗಿಡುವಂತೆ ಮನವಿ ಮಾಡಿದೆ.
Vijaya Karnataka Web sc


ಜಾತಿ ಪ್ರಮಾಣಪತ್ರ ಅಮಾನ್ಯ: ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಸೊಲ್ಲಾಪುರ ಬಿಜೆಪಿ ಸಂಸದ

ಭಾರತದ ಸಂವಿಧಾನ 341(1)(2) ಅನುಚ್ಚೇದಗಳನ್ನು ಉಲ್ಲಂಘಿಸಿ ಎಸ್‌ಸಿ ಪಟ್ಟಿಯಲ್ಲಿ ಈ ಸಮುದಾಯಗಳನ್ನು ಸೇರಿಸಲಾಗಿದೆ ಎಂದು ಸಮಿತಿಯು ಆರೋಪಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಮಿತಿಯು ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ರೋಹಿಂಗ್ಟನ್‌ ನಾರಿಮನ್‌ ನೇತೃತ್ವದ ದ್ವಿಸದಸ್ಯ ಪೀಠವು, ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗವನ್ನು ನಾಲ್ಕು ವಾರದೊಳಗೆ ಸಂಪರ್ಕಿಸಲು ಫೆ. 14 ರಂದು ಆದೇಶಿಸಿತ್ತು. ತನಿಖೆ ನಡೆಸಿ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸುವಂತೆ ಆಯೋಗಕ್ಕೆ ಕೋರ್ಟ್‌ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ