ಆ್ಯಪ್ನಗರ

ಶೀಘ್ರದಲ್ಲೇ ಜನೌಷಧ ಕೇಂದ್ರಗಳಿಗೆ ಫಾರ್ಮಸಿಸ್ಟ್‌ ನೇಮಕ: ಅರ್ಹ ಅಭ್ಯರ್ಥಿಗಳಿಗಾಗಿ ನಡೆಯುತ್ತಿದೆ ಹುಡುಕಾಟ!

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿಯಿರುವ ಜನೌಷಧ ಕೇಂದ್ರಕ್ಕೆ ಫಾರ್ಮಾಸಿಸ್ಟ್‌ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲು ಎಂಎಸ್‌ಐಎಲ್ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗ ಅರ್ಹ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

Vijaya Karnataka Web 18 Sep 2020, 7:24 am
ಬೆಂಗಳೂರು: ರಾಜ್ಯದ ನಾನಾ ಜಿಲ್ಲೆಗಳಲ್ಲಿನ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಖಾಲಿಯಿರುವ ಫಾರ್ಮಸಿಸ್ಟ್‌ ಸಿಬ್ಬಂದಿಯನ್ನು ನಿಯೋಜಿಸಲು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌(ಎಂಎಸ್‌ಐಎಲ್‌) ಮುಂದಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ರಾಜ್ಯ ಸಾರ್ವಜನಿಕ ವಲಯದ ಎಂಎಸ್‌ಐಎಲ್‌ ಆರೋಗ್ಯ ಇಲಾಖೆ ಮೂಲಕ ನಾನಾ ಜಿಲ್ಲೆಗಳಲ್ಲಿ ಸುಮಾರು 124 ಜನೌಷಧಿ ಕೇಂದ್ರಗಳನ್ನು ನಿರ್ವಹಿಸುತ್ತಿದೆ. ಇವುಗಳಲ್ಲಿ ಹೆಚ್ಚಿನವು ಬೆಂಗಳೂರಿನ ಹೊರಗಡೆ ಇವೆ. ಈಗ ಹತ್ತು ಕಡೆ ಫಾರ್ಮಾಸಿಸ್ಟ್‌ ಹುದ್ದೆಗಳು ಖಾಲಿಯಿವೆ. ಇವುಗಳನ್ನು ತುಂಬಲು ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಅರ್ಹರು ಸಿಕ್ಕಲ್ಲಿ ತಕ್ಷಣವೇ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ವಿಕ ರಿಯಾಲಿಟಿ ಚೆಕ್: ಜನೌಷಧ ಗ್ರಾಹಕರ ಸಂಖ್ಯೆಯಲ್ಲಿ ಶೇ.20ರಷ್ಟು ಹೆಚ್ಚಳ

ಪ್ರತಿ ಫಾರ್ಮಸಿಸ್ಟ್‌ಗೆ ಮಾಸಿಕ 15 ಸಾವಿರ ರೂ. ಸಂಬಳ ಹಾಗೂ ಇತರೆ ಭತ್ಯೆ ನೀಡಲಾಗುತ್ತದೆ. ಫಾರ್ಮಸಿ ಪದವಿ ಹೊಂದಿದವರನ್ನು ನಿಯೋಜಿಸಿಕೊಳ್ಳಲು ನಿರ್ಧರಿಸಲಾಗಿದೆ. ಖಾಲಿ ಹುದ್ದೆಗಳನ್ನು ವಾರದೊಳಗೆ ತುಂಬಲಾಗುವುದು. ಸಂಸ್ಥೆ ನಿರ್ವಹಿಸುತ್ತಿರುವ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ. ಹೆಚ್ಚು ವಹಿವಾಟು ನಡೆಯುವ ಕೇಂದ್ರಗಳಲ್ಲಿ ಇಬ್ಬರು ಫಾರ್ಮಸಿಸ್ಟ್‌ಗಳನ್ನು ನಿಯೋಜಿಸಲಾಗಿದೆ ಎಂದು ಎಂಎಸ್‌ಐಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ