ಆ್ಯಪ್ನಗರ

ರವಿ ಬೆಳಗೆರೆಗೆ ಮತ್ತೊಂದು ಸಂಕಷ್ಟ; ವಾರಂಟ್‌ ಜಾರಿ

ಸಹುದ್ಯೋಗಿಗೆ ಸುಪಾರಿ ನೀಡಿದ ಪಕ್ರರಣದಲ್ಲಿ ತಾತ್ಕಾಲಿಕ ರಿಲೀಫ್‌ ಪಡೆದಿದ್ದ ಪತ್ರಕರ್ತ ರವಿ ಬೆಳಗೆರೆಗೆ ಮತ್ತೊಂದಿ ಸಂಕಷ್ಟ ಎದುರಾಗಿದ್ದು, ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂದಿಸಿದಂತೆ ಬೆಳಗೆರೆ ಬಂಧನಕ್ಕೆ ವಾರೆಂಟ್ ಜಾರಿಯಾಗಿದೆ.

Vijaya Karnataka Web 14 Dec 2017, 5:02 pm
ಬೆಂಗಳೂರು: ಸಹುದ್ಯೋಗಿಗೆ ಸುಪಾರಿ ನೀಡಿದ ಪಕ್ರರಣದಲ್ಲಿ ತಾತ್ಕಾಲಿಕ ರಿಲೀಫ್‌ ಪಡೆದಿದ್ದ ಪತ್ರಕರ್ತ ರವಿ ಬೆಳಗೆರೆಗೆ ಮತ್ತೊಂದಿ ಸಂಕಷ್ಟ ಎದುರಾಗಿದ್ದು, ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂದಿಸಿದಂತೆ ಬೆಳಗೆರೆ ಬಂಧನಕ್ಕೆ ವಾರಂಟ್‌ ಜಾರಿಯಾಗಿದೆ.
Vijaya Karnataka Web arrest warrant issued to ravi belagere
ರವಿ ಬೆಳಗೆರೆಗೆ ಮತ್ತೊಂದು ಸಂಕಷ್ಟ; ವಾರಂಟ್‌ ಜಾರಿ


ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆ ಮಧ್ಯಾಂತರ ಜಾಮೀನು ಪಡೆದುಕೊಂಡಿದ್ದರು, ಇದರ ಬೆನ್ನಲ್ಲೇ ಗುರುವಾರದಂದು ಮಾನಹಾನಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿ, ಡಿ,28ರೊಳಗೆ ಕೋರ್ಟ್‌ಗೆ ಹಾಜರುಪಡಿಸುವಂತೆ ಸಂಜಯನಗರ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ರವಿ ಬೆಳಗೆರೆ ಒರಟ ಚಿತ್ರ ನಾಯಕ ಪ್ರಶಾಂತ್ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ್ದರು, ಹೀಗಾಗಿ ಪ್ರಶಾಂತ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಬೆಳಗೆರೆಗೆ ವಾರಂಟ್‌‌ ಜಾರಿ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ