ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕಲಾವಿದರನ್ನು ಕಳ್ಳರು-ಸುಳ್ಳರು ಎಂದು ಅವಹೇಳನ ಮಾಡಿರುವ ಸಚಿವ ಡಿ.ಕೆ.ಶಿವಕುಮಾರ್ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಕಲಾವಿದರು ಆಗ್ರಹಿಸಿದರು.
ಸಚಿವರ ಅವಹೇಳನ ಹೇಳಿಕೆ ಖಂಡಿಸಿ ಕಲಾವಿದರು, ಸಾಹಿತಿಗಳು ಮತ್ತು ಸಂಘ-ಸಂಸ್ಥೆಗಳ ಮುಖ್ಯಸ್ಥರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತಿ ಕಲಾವಿದರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಟೌನ್ಹಾಲ್ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ತಮಟೆ, ಪೂಜಾ ಕುಣಿತ ಹಾಗೂ ಇತರೆ ಜನಪದ ಕಲಾತಂಡಗಳೊಂದಿಗೆ ಆಗಮಿಸಿದ್ದ ಜಾನಪದ, ಹವ್ಯಾಸಿ ರಂಗಭೂಮಿ, ಸುಗಮ ಸಂಗೀತ, ನಾಟ್ಯ, ಯಕ್ಷಗಾನ, ಪೌರಾಣಿಕ, ವೃತ್ತಿ ರಂಗಭೂಮಿ ಕಲಾವಿದರು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ರಂಗ ಸಂಘಟಕ ಕೆ.ವಿ.ನಾಗರಾಜಮೂರ್ತಿ, ''ಕಲಾವಿದರು, ಸಂಘಸಂಸ್ಥೆಗಳ ಬಗ್ಗೆ ಸಚಿವರು ನೀಡಿದ ಹೇಳಿಕೆ ಖಂಡನೀಯ. ಆದ್ದರಿಂದ ಸಚಿವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಮತ್ತು ಸ್ಥಾನಕ್ಕೆ ರಾಜೀನಾಮೆ ನೀಡಬೇಕು,'' ಎಂದು ಆಗ್ರಹಿಸಿದರು.
''ಶತಮಾನಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿದಿರುವುದು ಸಾಹಿತಿ ಹಾಗೂ ಕಲಾವಿದರಿಂದಲೇ ಹೊರತು ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದಲ್ಲ. ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಕಲಾವಿದರ ಪಾತ್ರವೂ ಪ್ರಮುಖವಾಗಿದೆ. ಸಾಂಸ್ಕೃತಿಕ ಕ್ಷೇತ್ರವನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ ನೀಡುತ್ತಿರುವುದು ಅನುದಾನವೇ ಹೊರತು, ಭಿಕ್ಷೆಯಲ್ಲ. ಇತ್ತೀಚಿನ ದಿನಗಳಲ್ಲಿ ಅನುದಾನ ನೀಡುವ ವಿಷಯದಲ್ಲಿ ಇಲಾಖೆ ಅನುಸರಿಸುತ್ತಿರುವ ನೀತಿ, ನಿಯಮಗಳು ಕಲಾವಿದರಿಗೆ ಚೈತನ್ಯ ನೀಡುವ ಬದಲು ಉಸಿರುಗಟ್ಟಿಸುವಂತಾಗಿದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಪದ ಸಂಘಟಕ ಪಟ್ಲು ಗೋವಿಂದರಾಜು,''ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಕಲಿ ಸಂಘ-ಸಂಸ್ಥೆಗಳು ಅನುದಾನವನ್ನು ಪಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ಕಲಾವಿದರನ್ನು ವ್ಯಂಗ್ಯ ಮಾಡುವುದು ಯಾವ ನ್ಯಾಯ,''ಎಂದು ಪ್ರಶ್ನಿಸಿದರು.
''ಇನ್ನು ಮುಂದೆ ಶಿಕ್ಷಣ ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ನೀಡಬಾರದು. ಇಲಾಖೆಯ ಅಧಿಕಾರಿಗಳು ಕಲಾವಿದರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಹಾಗೂ ಸಕಾಲದಲ್ಲಿ ಸಂಘ-ಸಂಸ್ಥೆಗಳ ಕೆಲಸಗಳನ್ನು ಕಾರ್ಯಗತಗೊಳಿಸಬೇಕು. ತಪ್ಪಿದರೆ, ರಾಜ್ಯಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು,'' ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ನೃತ್ಯ ಕಲಾವಿದ ವಿಕ್ರಂ ಸೂರಿ, ರಮಾನಂದ್, ಮಲ್ಲಿಕಾರ್ಜುನ ಮಹಾಮನೆ, ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಚಿವರ ಅವಹೇಳನ ಹೇಳಿಕೆ ಖಂಡಿಸಿ ಕಲಾವಿದರು, ಸಾಹಿತಿಗಳು ಮತ್ತು ಸಂಘ-ಸಂಸ್ಥೆಗಳ ಮುಖ್ಯಸ್ಥರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತಿ ಕಲಾವಿದರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಟೌನ್ಹಾಲ್ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ತಮಟೆ, ಪೂಜಾ ಕುಣಿತ ಹಾಗೂ ಇತರೆ ಜನಪದ ಕಲಾತಂಡಗಳೊಂದಿಗೆ ಆಗಮಿಸಿದ್ದ ಜಾನಪದ, ಹವ್ಯಾಸಿ ರಂಗಭೂಮಿ, ಸುಗಮ ಸಂಗೀತ, ನಾಟ್ಯ, ಯಕ್ಷಗಾನ, ಪೌರಾಣಿಕ, ವೃತ್ತಿ ರಂಗಭೂಮಿ ಕಲಾವಿದರು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ರಂಗ ಸಂಘಟಕ ಕೆ.ವಿ.ನಾಗರಾಜಮೂರ್ತಿ, ''ಕಲಾವಿದರು, ಸಂಘಸಂಸ್ಥೆಗಳ ಬಗ್ಗೆ ಸಚಿವರು ನೀಡಿದ ಹೇಳಿಕೆ ಖಂಡನೀಯ. ಆದ್ದರಿಂದ ಸಚಿವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಮತ್ತು ಸ್ಥಾನಕ್ಕೆ ರಾಜೀನಾಮೆ ನೀಡಬೇಕು,'' ಎಂದು ಆಗ್ರಹಿಸಿದರು.
''ಶತಮಾನಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿದಿರುವುದು ಸಾಹಿತಿ ಹಾಗೂ ಕಲಾವಿದರಿಂದಲೇ ಹೊರತು ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದಲ್ಲ. ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಕಲಾವಿದರ ಪಾತ್ರವೂ ಪ್ರಮುಖವಾಗಿದೆ. ಸಾಂಸ್ಕೃತಿಕ ಕ್ಷೇತ್ರವನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ ನೀಡುತ್ತಿರುವುದು ಅನುದಾನವೇ ಹೊರತು, ಭಿಕ್ಷೆಯಲ್ಲ. ಇತ್ತೀಚಿನ ದಿನಗಳಲ್ಲಿ ಅನುದಾನ ನೀಡುವ ವಿಷಯದಲ್ಲಿ ಇಲಾಖೆ ಅನುಸರಿಸುತ್ತಿರುವ ನೀತಿ, ನಿಯಮಗಳು ಕಲಾವಿದರಿಗೆ ಚೈತನ್ಯ ನೀಡುವ ಬದಲು ಉಸಿರುಗಟ್ಟಿಸುವಂತಾಗಿದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಪದ ಸಂಘಟಕ ಪಟ್ಲು ಗೋವಿಂದರಾಜು,''ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಕಲಿ ಸಂಘ-ಸಂಸ್ಥೆಗಳು ಅನುದಾನವನ್ನು ಪಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ಕಲಾವಿದರನ್ನು ವ್ಯಂಗ್ಯ ಮಾಡುವುದು ಯಾವ ನ್ಯಾಯ,''ಎಂದು ಪ್ರಶ್ನಿಸಿದರು.
''ಇನ್ನು ಮುಂದೆ ಶಿಕ್ಷಣ ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ನೀಡಬಾರದು. ಇಲಾಖೆಯ ಅಧಿಕಾರಿಗಳು ಕಲಾವಿದರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಹಾಗೂ ಸಕಾಲದಲ್ಲಿ ಸಂಘ-ಸಂಸ್ಥೆಗಳ ಕೆಲಸಗಳನ್ನು ಕಾರ್ಯಗತಗೊಳಿಸಬೇಕು. ತಪ್ಪಿದರೆ, ರಾಜ್ಯಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು,'' ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ನೃತ್ಯ ಕಲಾವಿದ ವಿಕ್ರಂ ಸೂರಿ, ರಮಾನಂದ್, ಮಲ್ಲಿಕಾರ್ಜುನ ಮಹಾಮನೆ, ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.