ಆ್ಯಪ್ನಗರ

ಡಿಸಿಎಂ ಅವಕಾಶ: ಜೆಡಿಎಸ್‌ ಬೆಂಬಲಿಸಲು ಮುಸ್ಲೀಂರಿಗೆ ಒವೈಸಿ ಕರೆ

ಡಿಸಿಎಂ ಆಗುವ ಅವಕಾಶವಿರುವ ಕಾರಣ ಮುಸ್ಲಿಮರು ಜೆಡಿಎಸ್‌ ಪಕ್ಷಕ್ಕೆ ಬೆಂಬಲ ನೀಡುವಂತೆ ಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಕರೆ ...

Vijaya Karnataka 5 May 2018, 5:00 am
ಬೆಂಗಳೂರು: ಡಿಸಿಎಂ ಆಗುವ ಅವಕಾಶವಿರುವ ಕಾರಣ ಮುಸ್ಲಿಮರು ಜೆಡಿಎಸ್‌ ಪಕ್ಷಕ್ಕೆ ಬೆಂಬಲ ನೀಡುವಂತೆ ಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಕರೆ ನೀಡಿದ್ದಾರೆ.
Vijaya Karnataka Web asaduddin


ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್‌ ಅಲ್ತಾಫ್‌ ಖಾನ್‌ ಪರ ಶುಕ್ರವಾರ ಪ್ರಚಾರ ನಡೆಸಿದ ಅವರು ''ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಒಬ್ಬ ದಲಿತರು ಹಾಗೂ ಮತ್ತೊಬ್ಬ ಮುಸ್ಲಿಂ ನಾಯಕರು ಡಿಸಿಎಂ ಆಗುವ ಅವಕಾಶ ಸಿಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿಗೆ ಪರ್ಯಾಯವಾದ ಧ್ವನಿ ಬೇಕು'' ಎಂದರು.

''ಉತ್ತರ ಪ್ರದೇಶದ ನಂತರ ಅತೀ ಹೆಚ್ಚು ಕೋಮುಗಲಭೆಗಳು ನಡೆದಿರುವುದು ಕರ್ನಾಟಕದಲ್ಲಿ ಮಾತ್ರ. ಸಿದ್ದರಾಮಯ್ಯ ಕೇವಲ ರಾಜಕಾರಣಕ್ಕೆ ದಲಿತರು ಮತ್ತು ಅಲ್ಪಸಂಖ್ಯಾತರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಲವು ಕಡೆಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ನಡೆದಿದೆ'' ಎಂದು ಆರೋಪಿಸಿದರು.

''ರಾಜ್ಯದಲ್ಲಿ ಜೆಡಿಎಸ್‌ ಕಿಂಗ್‌ ಮೇಕರ್‌ ಅಲ್ಲ, ಕಿಂಗ್‌ ಆಗಲಿದೆ. ಕುಮಾರಸ್ವಾಮಿ ಸಿಎಂ ಆಗುವುದು ನಿಶ್ಚಿತ. ಬಿಜೆಪಿ ಜತೆ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದು, ಕಾಂಗ್ರೆಸ್‌ ನಾಯಕರ ಅಪಪ್ರಚಾರಕ್ಕೆ ಕಿವಿಗೊಡಬೇಡಿ'' ಎಂದು ಮನವಿ ಮಾಡಿದರು.

ರೌಡಿಗಳಿಗೆ ನಾಯಕ

ಜೆಡಿಎಸ್‌ ಅಭ್ಯರ್ಥಿ ಅಲ್ತಾಫ್‌ಖಾನ್‌ ಮಾತನಾಡಿ ''ಶಾಸಕ ಜಮೀರ್‌ ಅಹ್ಮದ್‌ ಅವರು ಕ್ಷೇತ್ರದ ಮಸೀದಿ, ಮಂದಿರಗಳನ್ನು ಕಾಂಗ್ರೆಸ್‌ ಕಚೇರಿ ಮಾಡಿಕೊಂಡಿದ್ದಾರೆ. ಗೂಂಡಾಗಳು, ರೌಡಿಗಳನ್ನು ಜತೆಯಲ್ಲಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ, '' ಎಂದು ಆರೋಪಿಸಿದರು.

''ಜಮೀರ್‌ ಅಹ್ಮದ್‌ ಕ್ಲಬ್‌, ಪಬ್‌ ದಂಧೆ ನಡೆಸುತ್ತಿದ್ದು, ಅದರಿಂದ ಬಂದ ಹಣವನ್ನು ಬಳಸಿ ಚುನಾವಣೆ ಗೆಲ್ಲುತ್ತಿದ್ದಾರೆ. ಈ ಪಾಪದ ಹಣಕ್ಕೆ ಕೈಚಾಚಬೇಡಿ'' ಎಂದು ಮತದಾರರಿಗೆ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ