ಆ್ಯಪ್ನಗರ

ಆಸ್ತಿ ಅಸಲಿಯತ್ತು ತಿಳಿಸುವ ದಿಶಾಂಕ್‌ ಆ್ಯಪ್‌

ಸಾರ್ವಜನಿಕರು ಭೂಮಿ, ನಿವೇಶನ ಅಥವಾ ಫ್ಲ್ಯಾಟ್‌ ಖರೀದಿ ವೇಳೆ ವಂಚನೆಗೊಳಗಾಗುವುದನ್ನು ತಪ್ಪಿಸಲು ರಾಜ್ಯ ಭೂಮಾಪನ, ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯು ವಿನೂತನ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.

Vijaya Karnataka 30 Mar 2018, 9:05 am
ಬೆಂಗಳೂರು: ಸಾರ್ವಜನಿಕರು ಭೂಮಿ, ನಿವೇಶನ ಅಥವಾ ಫ್ಲ್ಯಾಟ್‌ ಖರೀದಿ ವೇಳೆ ವಂಚನೆಗೊಳಗಾಗುವುದನ್ನು ತಪ್ಪಿಸಲು ರಾಜ್ಯ ಭೂಮಾಪನ, ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯು ವಿನೂತನ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.
Vijaya Karnataka Web asset information app
ಆಸ್ತಿ ಅಸಲಿಯತ್ತು ತಿಳಿಸುವ ದಿಶಾಂಕ್‌ ಆ್ಯಪ್‌


ಭೂಗಳ್ಳರು ಸರಕಾರಿ ಭೂಮಿ, ಖರಾಬು, ಗೋಮಾಳ, ಕೆರೆ ಅಂಗಳ, ರಾಜಕಾಲುವೆ ಜಾಗವನ್ನು ಕಬಳಿಸಿ, ಇತರರಿಗೆ ಮಾರಾಟ ಮಾಡಿ ವಂಚಿಸಿರುವ ಪ್ರಕರಣಗಳು ಸಾಕಷ್ಟಿವೆ. ಈ ಜಾಗಗಳಲ್ಲಿ ಕಟ್ಟಿಸಿದ್ದ ಮನೆಗಳನ್ನು ಜಿಲ್ಲಾಡಳಿತವು ಕೆಡವಿ ಹಾಕಿರುವ ಪ್ರಕರಣಗಳು ನಮ್ಮ ಕಣ್ಣು ಮುಂದೆಯೇ ಇವೆ. ಇದರಿಂದ ಹಲವರು ಬೀದಿ ಪಾಲಾಗಿದ್ದಾರೆ. ಹೀಗಾಗಿ, ಜನರು ನಿವೇಶನ, ಫ್ಲ್ಯಾಟ್‌ ಅಥವಾ ಜಮೀನು ಖರೀದಿಸಲು ಹಿಂದೇಟು ಹಾಕುವಂತಾಗಿದೆ.

ಇದಕ್ಕೆಲ್ಲಾ ಭೂದಾಖಲೆಗಳ ಇಲಾಖೆಯು ಅಭಿವೃದ್ಧಿಪಡಿಸಿರುವ 'ದಿಶಾಂಕ್‌' ಆ್ಯಪ್‌ (DISHAANK) ಪರಿಹಾರ ಒದಗಿಸುತ್ತದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದಿಶಾಂಕ್‌ ಎಂಬ ಆ್ಯಪ್‌ ಲಭ್ಯವಿದೆ. ಜನರು ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು, ಅದರ ಪ್ರಯೋಜನ ಪಡೆದುಕೊಳ್ಳಬಹುದು. ದಿಶಾಂಕ್‌ ಆ್ಯಪ್‌ ನೀವು ನಿಂತಿರುವ ಜಾಗದ ಸರ್ವೇ ನಂಬರ್‌ ಎಂಬುದನ್ನು ತಿಳಿಸುತ್ತದೆ. ಅಲ್ಲದೇ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಯಾವುದೇ ಪ್ರದೇಶದಲ್ಲಿನ ನಿವೇಶನಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ತಿಳಿಯಬಹುದಾಗಿದೆ.

ಕಾರ್ಯನಿರ್ವಹಣೆ ಹೇಗೆ ?

ದಿಶಾಂಕ್‌ ಆ್ಯಪ್‌ ಜಿಪಿಎಸ್‌ ಆಧರಿಸಿ ಕಾರ್ಯ ನಿರ್ವಹಿಸುತ್ತದೆ. ನೀವು ನಿಂತಿರುವ ಸ್ಥಳದಲ್ಲಿ ಆ್ಯಪ್‌ ತೆರೆದರೆ, ಸ್ಯಾಟಲೈಟ್‌ ಅಥವಾ ಗೂಗಲ್‌ ಮ್ಯಾಪ್‌ ಸಹಿತವಾಗಿ ಸರ್ವೇ ಸಂಖ್ಯೆಯನ್ನು ತಿಳಿಸುತ್ತದೆ. ಹಾಗೆಯೇ, ಅದರಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ಸರ್ವೇ ಸಂಖ್ಯೆಯನ್ನು ನಮೂದಿಸಿದರೆ, ಅದರ ನಕಾಶೆ ಕಾಣ ಸಿಗುತ್ತದೆ.

ಖರೀದಿ ಸರಳ:

ದಿಶಾಂಕ್‌ ಆ್ಯಪ್‌ ಒದಗಿಸುವ ಮಾಹಿತಿಯಿಂದ ಜನರು ನಿಶ್ಚಿಂತೆಯಿಂದ ನಿವೇಶನ, ಫ್ಲ್ಯಾಟ್‌ ಖರೀದಿ ಮಾಡಬಹುದು. ಇದರ ಮೂಲಕ ಸರ್ವೇ ನಂಬರ್‌, ಜಮೀನಿನ ಸ್ವರೂಪ, ಕೆರೆ, ಕಾಳುವೆ ಎಲ್ಲ ಮಾಹಿತಿ ಸಿಗುವುದರಿಂದ ಆಸ್ತಿ ಖರೀದಿ ಸರಳವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ