ಆ್ಯಪ್ನಗರ

ನಿಮ್ಮ ಮನವಿಯ ಮೇರೆಗೆ ಮಾನವೀಯ ದೃಷ್ಠಿಯಿಂದ ಧ್ವನಿ ಮತಕ್ಕೆ ಹಾಕುತ್ತೇವೆ; ಸಿದ್ದರಾಮಯ್ಯ

ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಂಡಿದ್ದು, ಕೊರೊನಾ ಪಾಸಿಟಿವ್ ಬಂದಿರುವ ಶಾಸಕರನ್ನು ಸದನಕ್ಕೆ ಕರೆತರುವುದು ಸರಿಯಲ್ಲ, ಪಿಪಿಇ ಕಿಟ್ ಹಾಕೊಂಡು ಬರಲಿ ಎಂದು ಹೇಳುತ್ತಾರೆ. 25 ಶಾಸಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ದ್ವನಿ ಮತಕ್ಕೆ ಮುಂದಾಗುವ ಬಗ್ಗೆ ಸ್ಪೀಕರ್ ಮನವಿ ಮಾಡಿದರು.

Vijaya Karnataka Web 26 Sep 2020, 11:30 am
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದ ಕಾಂಗ್ರೆಸ್ ಪಕ್ಷ, ಇದೀಗ ಈ ವಿಚಾರವಾಗಿ ಮತ ವಿಭಜನೆ ಬದಲಾಗಿ ಧ್ವನಿ ಮತಕ್ಕೆ ಒಪ್ಪಿದೆ.
Vijaya Karnataka Web siddaramaiah


ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಂಡಿದ್ದು, ಕೊರೊನಾ ಪಾಸಿಟಿವ್ ಬಂದಿರುವ ಶಾಸಕರನ್ನು ಸದನಕ್ಕೆ ಕರೆತರುವುದು ಸರಿಯಲ್ಲ, ಪಿಪಿಇ ಕಿಟ್ ಹಾಕೊಂಡು ಬರಲಿ ಎಂದು ಹೇಳುತ್ತಾರೆ. 25 ಶಾಸಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ದ್ವನಿ ಮತಕ್ಕೆ ಮುಂದಾಗುವ ಬಗ್ಗೆ ಸ್ಪೀಕರ್ ಮನವಿ ಮಾಡಿದರು.

ಕುತೂಹಲ ಸೃಷ್ಟಿಸಿರುವ ಸಿಎಂ-ಎಚ್‌ಡಿಕೆ ಭೇಟಿ; ಒಂದು ತಿಂಗಳಲ್ಲಿ ಮೂರನೇ ಬಾರಿ ಮೀಟಿಂಗ್

ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಸ್ಪೀಕರ್ ಮನವಿ ಮಾಡಿದ ಬೆನ್ನಲ್ಲೇ ಸಚಿವ ಮಾಧುಸ್ವಾಮಿ ಕೂಡ ವಿರೋಧ ಪಕ್ಷದ ಜೊತೆ ಮನವಿ ಮಾಡಿದ್ದು, ಕಡ್ಡಾಯ ಮಾಡುವುದಾದರೆ ಪಿಪಿಇ ಕಿಟ್ ಹಾಕಿ ಕರೆದುಕೊಂಡು ಬರಬೇಕಾಗುತ್ತದೆ. ಈ ಕಾರಣಕ್ಕಾಗಿ ವಿರೋಧ ಪಕ್ಷ ಸಹಕಾರ ನೀಡಬೇಕು. ಮತಕ್ಕೆ ಹಾಕುವುದರೆ ನಮ್ಮ ಸದಸ್ಯರನ್ನು ರೆಡಿ ಮಾಡಿದ್ದೇವೆ ಎಂದು ಹೇಳಿದರು.

ಅವಿಶ್ವಾಸ ಮಂಡನೆ ಚರ್ಚೆ, ಪಿಪಿಇ ಕಿಟ್‌ ಧರಿಸಿ ಬರಲು ಕೋವಿಡ್‌ ಶಾಸಕರಿಗೆ ಬಿಜೆಪಿ ವಿಪ್‌ ಜಾರಿ

ಈ ವೇಳೆ ಸರ್ಕಾರದ ಮನವಿಗೆ ಸ್ಪಂದಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಎರಡೂ ಪಕ್ಷದ ಶಾಸಕರು ಕೊರೊನಾಗೆ ಒಳಗಾಗಿದ್ದಾರೆ. ನಮಗೂ ಸಾಮಾಜಿಕ ಜವಾಬ್ದಾರಿ ಇದೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಮತಕ್ಕೆ ಹಾಕುವಂತೆ ಸಾಮಾನ್ಯವಾಗಿ ಬೇಡಿಕೆ ಇಡುತ್ತೇವೆ. ಮನುಷ್ಯತ್ವ, ಜೀವನ ಮುಖ್ಯ ಎಂಬ ಕಾರಣದಿಂದ ಮಾನವೀಯ ದೃಷ್ಟಿಯಿಂದ ನಿಮ್ಮ ಮನವಿಯ ಮೇರೆಗೆ ಮತ ವಿಭಜನೆ ಬದಲಾಗಿ ಧ್ವನಿ ಮತಕ್ಕೆ ಹಾಕುವುದಾಗಿ ಸಿದ್ದರಾಮಯ್ಯ ಹೇಳಿದರು.

ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ 30 ತಿಂಗಳಿಗೆ ಇಳಿಸುವ ಬಿಲ್‌ ಪಾಸ್‌; ರಮೇಶ್‌-ರೇವಣ್ಣ ಜಟಾಪಟಿ!

ಇದೇ ವೇಳೆ ಡಿಜೆ ಹಳ್ಳಿ ಗಲಭೆ ಪ್ರಕರಣ ಕೂಡಾ ಅವಿಶ್ವಾಸ ನಿರ್ಣಯ ಚರ್ಚೆಯೊಳಗೆ ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ, ಅವಿಶ್ವಾಸ ನಿರ್ಣಯ ಮಂಡನೆಯಿಂದ ನಮಗೆ ಶಕ್ತಿ ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ. ನಿಮಗೆ ಶಕ್ತಿ ಕೊಡಲೇ ನಾವು ಸದನದಲ್ಲಿ ಅವಿಶ್ವಾಸ ನಿರ್ಣಯ ತಂದಿದ್ದೇವೆ ಎಂದರು. ಅಲ್ಲದೇ ನಾನು ಯಡಿಯೂರಪ್ಪ ಒಟ್ಟಿಗೆ ರಾಜಕೀಯಕ್ಕೆ ಬಂದವರು, ಅವರ ಹುಟ್ಟು ಹಬ್ಬಕ್ಕೆ ಹೋಗಿ ಒಳ್ಳೆಯ ಮಾತನಾಡಿದ್ದೇನೆ. ವೈಯಕ್ತಿಕ ರಾಜಕೀಯ ‌ಸಂಬಂಧ ಬೇರೆ.‌ ರಾಜಕೀಯ ಸಂಬಂಧದಲ್ಲಿ ರಾಜಿ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ