ಆ್ಯಪ್ನಗರ

ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ! ನಾವೇನು ಮಿಮಿಕ್ರಿ ಇಟ್ಟುಕೊಂಡಿದ್ದೇವಾ? - ಡಿಕೆಶಿ

ನಾಯಕತ್ವ ಬದಲಾವಣೆಯ ಕುರಿತಾಗಿ ಮಾತನಾಡಿರುವ ಆಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೇ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅವರ ಪಕ್ಷದ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 19 Jul 2021, 7:08 pm
ಬೆಂಗಳೂರು: ನಾಯಕತ್ವ ಬದಲಾವಣೆಯ ಕುರಿತಾಗಿ ಮಾತನಾಡಿರುವ ಆಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
Vijaya Karnataka Web DK Shivakumar


ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡರು ಯಾವ ರೀತಿ ಮಾತಾಡ್ತಾರೆ ಅಂತ ಎಲ್ಲರಿಗೂ ಗೊತ್ತು. ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ. ಅವರ ಪಕ್ಷದ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ ಎಂದರು.

ಇದು ಯಾರೋ ಸಾಮಾನ್ಯರ ಆಡಿಯೋ ಅಲ್ಲ. ಆಡಿಯೋವನ್ನು ತನಿಖೆಗೆ ಕೊಡಬೇಕು ಅಂತಾರೆ, ತನಿಖೆಗೆ ಆಫೀಸರ್‌ ನೇಮಕ ಮಾಡ್ತಾರೆ. ಅವರು ಇದನ್ನು ಫೇಕ್ ಅಂತಾರೆ. ಈ ಹಿಂದೆ ಯಡಿಯೂರಪ್ಪರದ್ದು ಏನಾಯ್ತು? ಇತ್ತೀಚಿಗೆ ಆ ಪ್ರಕರಣ ಏನಾಯ್ತು? ನಾವಂತೂ ಈ ಪ್ರಕರಣದಲ್ಲಿ ಇಲ್ಲ ಎಂದರು.

ಸಿಎಂ ಬದಲಾವಣೆ ಬಗ್ಗೆ ಮೊದಲೇ ಹೇಳಿದ್ದೆ: ಭ್ರಷ್ಟ ಸಿಎಂ ಹೋಗ್ತಿದ್ದಾರಷ್ಟೇ ಎಂದ ಸಿದ್ದರಾಮಯ್ಯ
'ಆಡಿಯೋ ಮಿಮಿಕ್ರಿ ಮಾಡಿದ್ದಾರೆ' ಎಂದು ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ನಾವೇನು ಮಿಮಿಕ್ರಿ ಇಟ್ಟುಕೊಂಡಿದ್ದೀವಾ? ಬಿಜೆಪಿ ಕಿತ್ತೊಗೆಯಬೇಕು ಎಂದು ಜನ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಎರಡು ದಿನ ಲಂಬಾಣಿ ತಾಂಡಕ್ಕೆ ಹೋಗಿದ್ದೆ, ಆನ್‌ಲೈನ್ ಅಂತಾರೆ ಎಲ್ಲಿದೆ? ಸರ್ಕಾರದ ಒಂದು ಯೋಜನೆ ತೋರಿಸಲಿ," ಎಂದು ಸವಾಲು ಹಾಕಿದರು.

ನಳೀನ್‌ ಕುಮಾರ್‌ ಕಟೀಲ್‌ ಆಡಿಯೋ ವೈರಲ್ : ಸಚಿವ ಕೆ. ಸುಧಾಕರ್ ಪ್ರತಿಕ್ರಿಯೆ ಏನು?
ಇನ್ನು ದೆಹಲಿ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಎಲ್ಲಾ ಪಿಸಿಸಿ ಅಧ್ಯಕ್ಷರ ಜೊತೆ ರಾಹುಲ್ ಚರ್ಚೆ ಮಾಡ್ತಾ ಇದ್ದಾರೆ. ನಮ್ಮನ್ನು ಕೂಡ ಕರೆದಿದ್ದಾರೆ. ಅವರ ಮಾರ್ಗದರ್ಶನ ಪಡೆಯಲು ಹೋಗುತ್ತಿದ್ದೇನೆ ಎಂದರು. ಪದಾಧಿಕಾರಿಗಳ ನೇಮಕ ಚರ್ಚೆ ಆಗುತ್ತದೆ ಹಾಗೂ ಮುಂದಿನ ವಾರ ಉಸ್ತುವಾರಿ ಐದು ದಿನಗಳ ರಾಜ್ಯ ಪ್ರವಾಸ ಮಾಡ್ತಾರೆ. ಅವರು ಬಂದು ಹೋದ ಬಳಿಕ ಪಟ್ಟಿ ಅಂತಿಮವಾಗುತ್ತದೆ. ನಾನು ಈಗಾಗಲೇ ಪಟ್ಟಿ ನೀಡಿದ್ದೇನೆ ಎಂದು ತಿಳಿಸಿದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ