ಆ್ಯಪ್ನಗರ

ಸದನದಲ್ಲಿ ನಾಳೆ ಆಡಿಯೊ ಸೌಂಡ್‌

ಸ್ಪೀಕರ್‌ ರಮೇಶ್‌ ಕುಮಾರ್‌ ನಿರ್ಧಾರದ ಮೇಲೆ ಎಲ್ಲರ ಕಣ್ಣು ಬಿಜೆಪಿಯಿಂದ ಕುಮಾರಸ್ವಾಮಿ ವಿರುದ್ಧ ಪ್ರತ್ಯಸ್ತ್ರ * ಸಂಸತ್ತಿನಲ್ಲೂ ಸದ್ದು ಸಾಧ್ಯತೆ

Vijaya Karnataka 10 Feb 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web ramesh kumar

ಆಪರೇಷ ಕಮಲಕ್ಕೆ ಸಂಬಂಧಪಟ್ಟ್ಂಕೃೆ ಮುಖ್ಯಮಂತ್ರಿ ಎ.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೊ ಸೋಮವಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಸುವುದು ನಿಶ್ಚಿತವಾಗಿದೆ.
ಈ ನಡುವೆ ಸಿಎಂ ಬಿಡುಗಡೆ ಮಾಡಿರುವ ಬಿಜೆಪಿ ಆಡಿಯೊದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸ್ಪೀಕರ್ ರಮೇಶ್‌ ಕುಮಾ, ಈ ವಿಷಯವಾಗಿ ನ್ಯಾಯ ಸಮ್ಮತ ನಿರ್ಧಾರ ಕೈಗೊಳ್ಳಲಿರುವುದಾಗಿ ಪ್ರಕಟಿಸಿರುವುದು ರಾಜಕೀಯ ವಲಯದಲ್ಲಿ ಕ್ಕೃುೂಹಲ ಮೂಡಿಸಿದೆ.
ಇತ್ತ ಬಿಜೆಪಿಯು ಕುಮಾರಸ್ವಾಮಿ ಅವರು ಆಮಿಷ ಒಡ್ಡಿದ್ದಾರೆನ್ನಲಾದ ಆಡಿಯೊವನ್ನು ಸ್ಪೀಕರ್ ಗೆ ಸಲ್ಲಿಸಿ ಸಿಎಂ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಮುಂದಾಗಿದೆ.
ಸ್ಪೀಕರ್ ಮುಂದಿನ ಆಯ್ಕೆ
ಸ್ಪೀಕರ್ ರಮೇಶ್ ಕುಮಾರ್ ಅವರು ಆಡಿಯೊ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸಿಬಿ ಸೇರಿ ಸೂಕ್ತ ಸಂಸ್ಥೆಯಿಂದ ತನಿಖೆ ನಡೆಸಲು ಸರಕಾರಕ್ಕೆ ಸೂಚನೆ ನೀಡುವ, ಸಭಾಧ್ಯಕ್ಷರ ಹುದ್ದೆಗೆ ಕಳಂಕ ತರುವ ಯತ್ನವಾಗಿದೆಯೆಂದು ಹಕ್ಕು ಭಾಧ್ಯತಾ ಸಮಿತಿಯ ವಿಚಾರಣೆಗೆ ನೀಡುವ ಅಥವಾ ತನಿಖೆಗೆ ಸದನ ಸಮಿತಿ ರಚಿಸುವ ನಿರ್ಧಾರ ಮಾಡಬಹುದಾಗಿದೆ.
ಇತ್ತ ಬಿಜೆಪಿಯು ಸರಕಾರದ ವಿರುದದ ತನ್ನ ಹೋರಾಟವನ್ನು ಮುಂದುವರಿಸಬಹುದು ಇಲ್ಲವೇ ತಮಗೆ ತಿರುಗುಬಾಣವಾಗುವ ಆತಂಕದಿಂದ ತಣ್ಣಗುಳಿಯುವ ಸಾಧ್ಯತೆಯೂ ಇದೆ.
ದೋಸ್ತಿ ನಡೆ ಏನು?
ಒಂದೊಮ್ಮೆ ಸ್ಪೀಕರ್ ಅವರು ಈ ಪ್ರಕರಣದ ಬಗ್ಗೆ ದೃಢ ನಿರ್ಧಾರ ಕೈಗೊಳ್ಳದಿದ್ದರೆ, ದೋಸ್ತಿ ಸರಕಾರ ಆಡಿಯೊವನ್ನು ಎಎಎ ಪರೀಕ್ಷೆಗೆ ಒಪ್ಪಿಸುವ ಸಾಧ್ಯ್ಕೃೆಯೂ ಕಂಡುಬಂದಿದೆ. ಹೀಗಾಗಿ ಸೋಮವಾರ ದೋಸ್ತಿ ಪಕ್ಷಗಳು ಮುಕ್ತ ಬಿಜೆಪಿ ನಡುವೆ ಭಾರಿ ಸಂಘರ್ಷ ನಡೆಯುವುದು ನಿಶ್ಚಿತ
ಇತ್ತ ಕಾಂಗ್ರೆ ಕೂಡ ಆಡಿಯೋ ಪ್ರಕರಣವನ್ನು ರಾಷ್ಟ್ರ ರಾಜಧಾನಿ ದಿಲ್ಲಿಗೆ ಕೊಂಡೊಯ್ದು, ಅಲ್ಲಿಯೂ ಸದ್ದು ಮಾಡಲು ಪ್ರಯತ್ನಿಸಿದೆ.

ಎಂಎಲ್ಸಿಗಿರಿಗಾಗಿ 25 ಕೋಟಿ
ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲು ಕುಮಾರಸ್ವಾಮಿಯವರು ಈ ಹಿಂದೆ ವಿಜುಗೌಡ ಪಾಟೀಲರಿಂದ 25 ಕೋಟಿ ರೂ. ಡಿಮ್ಯಾಂಡ್‌ ಮಾಡಿದ್ದಾರೆ ಎನ್ನಲಾದ ವಿಡಿಯೊವನ್ನು ಸ್ಪೀಕಗೆ ಸಲ್ಲಿಸಿ ‘ನೈತಿಕತೆ’ ಪ್ರಶ್ನೆ ಎತ್ತಲು ಪ್ರತಿಪಕ್ಷ ನಾಯಕ ಬಿ.ಎ.ಯಡಿಯೂರಪ್ಪ ನಿರ್ಧರಿಸಿದ್ದಾರೆ. ಜತೆಗೆ ಬಿಜೆಪಿಯ ಹಾಲಿ ಶಾಸಕರೊಬ್ಬರಿಗೆ ಕುಮಾರಸ್ವಾಮಿ ಆಮಿಷವೊಡ್ಡಿದ ಧ್ವನಿ ಸುರುಳಿ ತಮ್ಮ ಬಳಿ ಇದೆ ಎಂದು ಬಿಜೆಪಿ ಹೇಳಿಕೊಂಡಿರುವುದು ಆಮಿಷದ ವಿವಾದವನ್ನು ಮತ್ತಷ್ಟು ಗಟ್ಟಿ ಮಾಡಿದೆ.
ಕುಮಾರಸ್ವಾಮಿಗೆ ತಿರುಗೇಟು ನೀಡುವುದಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪ ನಿವಾಸದಲ್ಲಿ ಶನಿವಾರ ಮಹತ್ವದ ಸಭೆ ನಡೆದಿದೆ. ಆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ‘‘ಕುಮಾರಸ್ವಾಮಿ ಕೀಳುಮಟ್ಟದ ರಾಜಕೀಯಕ್ಕೆ ಕೈ ಹಾಕಿದ್ದಾರೆ. ವಿಜುಗೌಡ ಪಾಟೀಲರಿಂದ 25 ಕೋಟಿ ಡಿಮ್ಯಾಂಡ್ ಮಾಡಿದ ದೃಶ್ಯಾವಳಿ ನಮ್ಮ ಬಳಿ ಇದೆ. ಸಿಎಂ ಈ ಬಗ್ಗೆ ಉತ್ತರ ನೀಡಲಿ. ಅನಗತ್ಯವಾಗಿ ಸ್ಪೀಕರ್ ಅವರನ್ನೂ ಈ ವಿವಾದದಲ್ಲಿ ಎಳೆದುತಂದಿದ್ದಾರೆ. ವಿಡಿಯೊ ಪ್ರತಿಯನ್ನು ನಾವು ಸ್ಪೀಕರ್ ಅವರಿಗೆ ಕೊಡುತ್ತೇವೆ,’’ ಎಂದು ಹೇಳಿದ್ದಾರೆ.

ಎಚ್ಡಿಕೆಗೆ ಸಣ್ಣ ಭಯವೇಕೆ ?
ಬಿಜೆಪಿ ಪ್ರಯೋಗಿಸಲು ಹೊರಟಿರುವ ವಿಡಿಯೊ ಈ ಹಿಂದೆ ಕುಮಾರಸ್ವಾಮಿಯವರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿತ್ತು. ಮಾಧ್ಯಮಗಳಲ್ಲಿ ಪ್ರಕಟವಾದ ಈ ವರದಿ ಹಾಗೂ ಧ್ವನಿ ಸುರುಳಿ ಆಧರಿಸಿ ಮಂಡ್ಯದ ವಕೀಲ ಸಾಕ್ಯನಂದ ಎಂಬುವರು ಅಂದಿನ ರಾಷ್ಟ್ರಪತಿ ಪ್ರಣ ಮುಖರ್ಜಿಯವರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದರು. ಬಳಿಕ ಅದು ಕೇಂದ್ರ ಗೃಹ ಇಲಾಖೆಗೆ ಹಸ್ತಾಂತರವಾಗಿತ್ತು. ಚುನಾವಣಾ ಆಯೋಗಕ್ಕೂ ಈ ದೂರು ಹೋಗಿತ್ತು. ಅಂದು ಬಹಿರಂಗವಾಗಿದ್ದ ಆಡಿಯೋ-ವೀಡಿಯೋದಲ್ಲಿರುವ ದನಿ ತನ್ನದು ಎಂದು ಕುಮಾರಸ್ವಾಮಿ ಒಪ್ಪಿಕೊಂಡಿದ್ದರು. ‘‘ಈಗಿನ ರಾಜಕೀಯ ಪರಿಸ್ಥಿತಿಯೇ ಈ ರೀತಿ ಇದೆ. ನಾನೇನು ಮಾಡಲು ಸಾಧ್ಯ,’’ ಎಂಬರ್ಥದಲ್ಲಿ ಅಂದು ಕುಮಾರಸ್ವಾಮಿ ಹೇಳಿದ್ದು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದು, ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ. ಈ ಸಂಗತಿಯೇ ಕುಮಾರಸ್ವಾಮಿ ಅವರಲ್ಲಿ ಸಣ್ಣ ಭಯ ಮೂಡಿಸಿದಂತಿದೆ.

ಬಿಜೆಪಿ ಆತಂಕ ಏನು ?
ಎಚ್. ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಕುರಿತು ಸ್ಪೀಕರ್‌ ಕಟುವಾದ ನಿರ್ಧಾರ ಕೈಗೊಂಡರೆ, ಆಪರೇಷನ್‌ ಗೆ ಹಾಕುವ ಶ್ರಮವನ್ನು ಡ್ಯಾಮೇಜ್‌ ಕಂಟ್ರೋಲ್‌ಗೆ ಹಾಕಬೇಕಾದೀತು ಎಂಬುದು ಬಿಜೆಪಿಯ ಆತಂಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ