ಆ್ಯಪ್ನಗರ

ಸಿದ್ದಗಂಗಾ ಶ್ರೀಗಳಿಗೆ ಸಂದ ಪ್ರಶಸ್ತಿಗಳು ಮತ್ತು ಭಕ್ತರು ನೀಡಿದ ಬಿರುದುಗಳಿವು

ನಡೆದಾಡುವ ದೇವರೆಂದೇ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ, ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಸಂದ ಪ್ರಶಸ್ತಿಗಳು ಮತ್ತು ಅಸಂಖ್ಯಾತ ಭಕ್ತರು ನೀಡಿದ ಬಿರುದಗಳ ಪಟ್ಟಿ ಇಲ್ಲಿವೆ ನೋಡಿ.

Vijaya Karnataka Web 21 Jan 2019, 3:20 pm
ನಡೆದಾಡುವ ದೇವರೆಂದೇ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ, ತುಮಕೂರಿನ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಅಸಂಖ್ಯಾತಭಕ್ತರು ಹಲವಾರು ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. 111 ವರ್ಷಕ್ಕಿಂತ ಹೆಚ್ಚು ಕಾಲ ಬದುಕುವ ಮೂಲಕ ಅಚ್ಚರಿ ಮೂಡಿಸಿದ್ದ ಸ್ವಾಮೀಜಿ ಅವರನ್ನು ಭಕ್ತರು ಸಾಕ್ಷಾತ್‌ ದೇವರು ಎಂದೇ ಪೂಜಿಸುತ್ತಾರೆ, ಗೌರವಿಸುತ್ತಾರೆ. ಭಾಕ್ತಾಭಿಮಾನಿಗಳು ಸಿದ್ದಗಂಗಾ ಶ್ರೀಗಳಿಗೆ ನೀಡಿದ ಹಲವು ಬಿರುದುಗಳ ಪೈಕಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
Vijaya Karnataka Web Siddaganga Sri 2

  1. ನಡೆದಾಡುವ ದೇವರು
  2. ತ್ರಿವಿಧ ದಾಸೋಹಿ
  3. ಕಾಯಕ ಯೋಗಿ
  4. ಅಭಿನವ ಬಸವಣ್ಣ
  5. ಶಕ ಪುರುಷ
  6. ಶತಮಾನದ ಸಂತ
ಶ್ರೀಗಳಿಗೆ ಸಂದ ಪ್ರಶಸ್ತಿ, ಪುರಸ್ಕಾರ
1. ಗೌರವ ಡಿ.ಲಿಟ್‌ ಪದವಿ
ಕರ್ನಾಟಕ ವಿಶ್ವವಿದ್ಯಾಲಯದ 1965ರ ನವೆಂಬರ್‌ 6ರಂದು ಶಿವಕುಮಾರ ಸ್ವಾಮೀಜಿಗಳಿಗೆ ಗೌರವ ಡಿ.ಲಿಟ್‌ ಪದವಿ ಪುರಸ್ಕರಿಸಿ ಗೌರವಿಸಲಾಯಿತು.

2. ಕರ್ನಾಟಕ ರತ್ನ
ಕರ್ನಾಟಕ ರಾಜ್ಯ ಸರಕಾರ 2007ರ ಏಪ್ರಿಲ್‌ 1ರಂದು ಸಿದ್ದಗಂಗಾ ಶ್ರೀಗಳಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

3. ಬಸವ ಪುರಸ್ಕಾರ
ಕರ್ನಾಟಕ ರಾಜ್ಯ ಸರಕಾರವು 2007ರ ಏಪ್ರಿಲ್‌ 1ರಂದು ರಾಷ್ಟ್ರೀಯ ‘ಬಸವ ಪುರಸ್ಕಾರ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

4. ಗೌರವ ಡಾಕ್ಟರೇಟ್‌ ಪದವಿ
ತುಮಕೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ಪದವಿಯನ್ನು ಸಿದ್ದಗಂಗಾ ಶ್ರೀಗಳ ಮಠಕ್ಕೇ ಕೊಂಡೊಯ್ದು ವಿವಿ ಕುಲಪತಿ ಕೊಟ್ಟರಾದರೂ ಶ್ರೀಗಳು ಸ್ವೀಕರಿಸಲಿಲ್ಲ.

5. ಮಹಾವೀರ ಶಾಂತಿ ಪ್ರಶಸ್ತಿ
ಕರ್ನಾಟಕ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಥಾಪಿಸಲಾದ ಮಹಾವೀರ ಶಾಂತಿ ಪ್ರಶಸ್ತಿಯನ್ನು 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ