ಆ್ಯಪ್ನಗರ

ಆ್ಯಂಬಿಡೆಂಟ್‌: 10 ದಿನಗಳಲ್ಲಿ ಮಾಹಿತಿ ನೀಡಲು ಹೈಕೋರ್ಟ್‌ ಆದೇಶ

ಸಾರ್ವಜನಿಕರಿಗೆ ಹೂಡಿಕೆ ಹೆಸರಲ್ಲಿ ವಂಚನೆ ಮಾಡುತ್ತಿರುವ ಕಂಪನಿಗಳ ಕುರಿತು 10 ದಿನದಲ್ಲಿ ಮಾಹಿತಿ ಸಂಗ್ರಹಿಸಿ ಒದಗಿಸುವಂತೆ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ನೀಡಿದೆ.

Vijaya Karnataka 24 Jan 2019, 5:00 am
ಬೆಂಗಳೂರು : ಸಾರ್ವಜನಿಕರಿಗೆ ಹೂಡಿಕೆ ಹೆಸರಲ್ಲಿ ವಂಚನೆ ಮಾಡುತ್ತಿರುವ ಕಂಪನಿಗಳ ಕುರಿತು 10 ದಿನದಲ್ಲಿ ಮಾಹಿತಿ ಸಂಗ್ರಹಿಸಿ ಒದಗಿಸುವಂತೆ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ನೀಡಿದೆ.
Vijaya Karnataka Web aymbident issue court ask information with in 10 days
ಆ್ಯಂಬಿಡೆಂಟ್‌: 10 ದಿನಗಳಲ್ಲಿ ಮಾಹಿತಿ ನೀಡಲು ಹೈಕೋರ್ಟ್‌ ಆದೇಶ


ಆ್ಯಂಬಿಡೆಂಟ್‌, ಐಎಂಎ ಗ್ರೂಪ್‌ ಆಫ್‌ ಕಂಪನಿ ಸೇರಿದಂತೆ ಸುಮಾರು 12ಕ್ಕೂ ಅಧಿಕ ಖಾಸಗಿ ಹೂಡಿಕೆ ಕಂಪನಿಗಳು ಹೂಡಿಕೆದಾರರಿಂದ ಸಾವಿರಾರು ಕೋಟಿ ವಸೂಲಿ ಮಾಡಿ ವಂಚಿಸಿರುವ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಹೈಕೋರ್ಟ್‌ನಲ್ಲಿ ಬೆಂಗಳೂರಿನ ನಿವಾಸಿಗಳಾದ ಇಮ್ರಾನ್‌ ಪಾಷಾ ಹಾಗೂ ನಾಜಿಯಾ ಬಾನು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಎಲ್‌. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್‌. ದಿನೇಶ್‌ ಕುಮಾರ್‌ ನೇತೃತ್ವದ ವಿಭಾಗೀಯಪೀಠ, ಸರಕಾರಕ್ಕೆ ಮಾಹಿತಿ ಸಂಗ್ರಹಿಸಲು ನಿರ್ದೇಶನ ನೀಡಿತು.

ಅರ್ಜಿಯಲ್ಲಿ ಐಎಂಎ (ಐ ಮಾನಿಟರಿ ಅಡ್ವೈಸರಿ)ಗ್ರೂಪ್‌ ಆಫ್‌ ಕಂಪನೀಸ್‌, ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಪ್ರೈವೇಟ್‌ ಲಿಮಿಟೆಡ್‌, ಬುರ್ರಾಖ್‌ ಗ್ರೂಪ್‌, ಆಲಾ ವೆಂಚರ್ಸ್‌ ಲಿಮಿಟೆಡ್‌, ಟೈರಾರ್ಪ್‌ ಟ್ರೇಡಿಂಗ್‌ ಸರ್ವಿಸ್‌ ಪ್ರೈ ಲಿ., ಎಸ್‌.ಕೆ. ಬ್ಯುಸಿನೆಸ್‌ ಸಲೂಷನ್ಸ್‌ ಎಲ್‌ಎಲ್‌ಪಿ, ಜೆಡ್‌.ಆರ್‌ ಬ್ಯುಸಿನೆಸ್‌ ಸಲೂಷನ್ಸ್‌ ಎಲ್‌ಎಲ್‌ಪಿ, ಪ್ರಾಫಿಟೋ ಇನ್‌ ಸರ್ವಿಸ್‌, ಅಜಮೇರಾ ಬ್ಯುಸಿನೆಸ್‌ ಸಲೂಷನ್ಸ್‌ ಎಲ್‌ಎಲ್‌ಪಿ, ಮೊರ್ಗೆನಲ್ಲ್‌, ಶ್ರೀ ಕರುಲಪ್ಪುಸ್ವಾಮಿ ಪ್ರಮೋಟರ್ಸ್‌ ಪ್ರತಿವಾದಿಯನ್ನಾಗಿ ಮಾಡಲಾಗಿದೆ.

''12 ಖಾಸಗಿ ಹೂಡಿಕೆ ಕಂಪನಿಗಳು ರಾಜ್ಯಾದ್ಯಂತ ಸುಮಾರು 50 ಸಾವಿರ ಜನರಿಂದ ಅಂದಾಜು 3 ಸಾವಿರ ಕೋಟಿ ರೂ. ಸಂಗ್ರಹ ಮಾಡಿವೆ. ಹೆಚ್ಚು ಲಾಭಾಂಶದ ಆಸೆ ತೋರಿಸಿ ಹಣ ಹೂಡಿಕೆ ಮಾಡಿಸಿಕೊಂಡು ಈ ಕಂಪನಿಗಳು ಅತ್ತ ಲಾಭಾಂಶನೂ ಕೊಡುತ್ತಿಲ್ಲ, ಇತ್ತ ಹೂಡಿಕೆ ಮಾಡಿದ ಹಣ ಸಹ ವಾಪಸ್‌ ಕೊಡುತ್ತಿಲ್ಲ,'' ಎಂದರು.

2 ಕೋಟಿ ಸಲ್ಲಿಸಲು 4 ವಾರ ಕಾಲಾವಕಾಶ

ಈ ಮಧ್ಯೆ, ಆ್ಯಂಬಿಡೆಂಟ್‌ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿಲ್ಡರ್‌ ವಿಜಯ್‌ ತಾತಾಗೆ 2 ಕೋಟಿ ಹಣ ಠೇವಣಿ ಇಡಲು ಹೈಕೋರ್ಟ್‌ 4 ವಾರ ಕಾಲಾವಕಾಶ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ