ಆ್ಯಪ್ನಗರ

ಕಸಾಯಿಖಾನೆಗೆ ಕರುಗಳ ಸಾಗಾಟ: ಇಬ್ಬರ ಬಂಧನ

ಆಟೊದಲ್ಲಿ‌ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಕರುಗಳನ್ನು ಸಾಗಿಸಲಾಗುತಿತ್ತು. ಆಟೊದಿಂದ ಹೊರಹೊಮ್ಮುತ್ತಿದ್ದ ವಾಸನೆ ಕಂಡು ಸಾರ್ವಜನಿಕರೊಬ್ಬರು ವಾಹನ ತಡೆದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿತು.

Vijaya Karnataka Web 15 Jun 2019, 9:19 pm
ರಾಮನಗರ: ಕರುಗಳನ್ನು ಸಣ್ಣ ಚೀಲಗಳಲ್ಲಿ ತುಂಬಿ ಆಟೊದಲ್ಲಿ‌ ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರನ್ನು ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ಗೋ ಸಾಗಾಟ
ಗೋ ಸಾಗಾಟ


ರಾಮನಗರ ನಿವಾಸಿಗಳಾದ ಮಹಮ್ಮದ್ ತಾಹಿರ್ ಮತ್ತು‌ ಮಹಮ್ಮದ್ ಫಸಿವುಲ್ಲಾ ಬಂಧಿತರು. ನಾಲ್ಕು ಕರುಗಳನ್ನು ರಕ್ಷಣೆ ಮಾಡಲಾಗಿದ್ದು, ಕುಂಬಳಗೂಡು ಬಳಿಯ ಬಿಜಿಎಸ್ ಗೋಶಾಲೆಗೆ ಬಿಡಲಾಗಿದೆ.

ಆಟೊದಲ್ಲಿ‌ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಕರುಗಳನ್ನು ಸಾಗಿಸಲಾಗುತಿತ್ತು. ಆಟೊದಿಂದ ಹೊರಹೊಮ್ಮುತ್ತಿದ್ದ ವಾಸನೆ ಕಂಡು ಸಾರ್ವಜನಿಕರೊಬ್ಬರು ವಾಹನ ತಡೆದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿತು.

ಸ್ಥಳದಲ್ಲಿ ಇದ್ದ ಜನರು ಹಾಗೂ ಸಂಚಾರ ಪೊಲೀಸರು ಕರುಗಳನ್ನು ಚೀಲದಿಂದ ಹೊರ ತೆಗೆದು ಆರೋಪಿಗಳ ಸಮೇತ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ