ಆ್ಯಪ್ನಗರ

ಮಧ್ಯ ಪ್ರದೇಶ 'ಹನಿಟ್ರ್ಯಾಪ್‌'ಗೆ ಬೆಂಗಳೂರು ನಂಟು; ದಂಧೆಯ ಸೀಕ್ರೆಟ್‌ ರಾಜಧಾನಿಯಲ್ಲಿ ಸೇಫ್!

ಹನಿ ಟ್ರ್ಯಾಪ್‌ನ ಲೀಡರ್‌ ಶ್ವೇತಾ ವಿಜಯ ಜೈನ್‌ ಬೆಂಗಳೂರಿನ ಸೈಬರ್‌ ಫೋರೆನ್ಸಿಕ್‌ ಮತ್ತು ಸೈಬರ್‌ ಸೆಕ್ಯುರಿಟಿ ಕಂಪನಿಗೆ ಈ ಡೇಟಾಗಳನ್ನು ಒದಗಿಸಿ ಸುರಕ್ಷಿತವಾಗಿಡುವ ಜವಾಬ್ದಾರಿಯನ್ನು ವಹಿಸಿದ್ದಳು.

Vijaya Karnataka Web 30 Sep 2019, 8:52 pm

ಬೆಂಗಳೂರು: ಮಧ್ಯಪ್ರದೇಶದಲ್ಲಿ ರಾಜಕಾರಣಿಗಳು, ಅಧಿಕಾರಿಗಳ ಬಣ್ಣ ಬಯಲು ಮಾಡಿದ 'ಹನಿಟ್ರ್ಯಾಪ್‌' ಪ್ರಕರಣಕ್ಕೆ ಬೆಂಗಳೂರಿನ ನಂಟೂ ಇದೆ! ಹನಿ ಟ್ರ್ಯಾಪ್‌ನ ವೇಳೆ ದಾಖಲಿಸಿದ ವಿಡಿಯೊ, ಫೋಟೊ, ವಾಟ್ಸ್‌ಆ್ಯಪ್‌ ಚಾಟ್‌ ಹಾಗೂ ಇನ್ನಿತರ ರಹಸ್ಯ ಮಾಹಿತಿಗಳನ್ನು ಸಂಗ್ರಹಿಸಿ ಕಾಯ್ದಿಡುವ ಹೊಣೆಯನ್ನು ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಆರೋಪಿಗಳು ವಹಿಸಿದ್ದರು!
Vijaya Karnataka Web Bhopal: Indore police produce Monica Yadav, one of the accused in honey trap gan...
Indore police produce Monica Yadav, one of the accused in honey trap gang case for spot investigations in Bhopal.Photo) (


ಹನಿ ಟ್ರ್ಯಾಪ್‌ನ ಲೀಡರ್‌ ಶ್ವೇತಾ ವಿಜಯ ಜೈನ್‌ ಬೆಂಗಳೂರಿನ ಸೈಬರ್‌ ಫೋರೆನ್ಸಿಕ್‌ ಮತ್ತು ಸೈಬರ್‌ ಸೆಕ್ಯುರಿಟಿ ಕಂಪನಿಗೆ ಈ ಡೇಟಾಗಳನ್ನು ಒದಗಿಸಿ ಸುರಕ್ಷಿತವಾಗಿಡುವ ಜವಾಬ್ದಾರಿಯನ್ನು ವಹಿಸಿದ್ದಳು. ಇದೀಗ ಭೋಪಾಲ್‌ ಪೊಲೀಸರ ತಂಡವೊಂದು ಬೆಂಗಳೂರಿಗೆ ಬಂದು ಮಾಹಿತಿ ಕಲೆ ಹಾಕಲಿದೆ.

ಮಧ್ಯಪ್ರದೇಶವನ್ನೇ ನಡುಗಿಸಿದ ಈ ಹನಿಟ್ರ್ಯಾಪ್‌ ಜಾಲದಲ್ಲಿರುವ ಒಬ್ಬ ಕಾಲೇಜು ಯುವತಿ ಸೇರಿದಂತೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ. ಸಾವಿರಾರು ರಾಜಕಾರಣಿಗಳು ಮತ್ತು ಅಧಿಕಾರಿಗಳು ಇವರ ಬಲೆಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಬೆಂಗಳೂರಿನ ನಂಟು ಕಂಡುಬಂದಿದೆ. ಬೆಂಗಳೂರಿನ ಕಂಪನಿಯ ಕೆಲವು ನೌಕರರು ಹನಿಟ್ರ್ಯಾಪ್‌ ಜಾಲಕ್ಕೆ ನೆರವಾಗುತ್ತಿದ್ದರು ಎನ್ನಲಾಗಿದೆ. ಆದರೆ, ನೇರವಾಗಿ ಅವರ ಪಾತ್ರ ಇದೆಯೇ, ಇಲ್ಲವೋ ಎನ್ನುವುದು ಹೆಚ್ಚಿನ ತನಿಖೆಯ ನಂತರ ಬೆಳಕಿಗೆ ಬರಲಿದೆ. ಶ್ವೇತಾ ಕೂಡಾ ಆಗಾಗ ಬೆಂಗಳೂರಿಗೆ ಬಂದು ಈ ಕಂಪನಿಯಲ್ಲಿಇರುತ್ತಿದ್ದಳು ಎನ್ನಲಾಗಿದೆ.

ದೇಶದ ಬೃಹತ್‌ ಸೆಕ್ಸ್‌ ಹಗರಣ ಬಯಲು!: ರಾಜಕಾರಣಿಗಳು, ಅಧಿಕಾರಿಗಳು ಸೇರಿ ನೂರಾರು ಜನ ಬೆತ್ತಲು

ಪೆಗಾಸಸ್‌ ಸಾಫ್ಟ್‌ವೇರ್‌ ಬಳಕೆ


ಕಂಪನಿಯು ಫೋನ್‌ಗಳ ಮೇಲೆ ನಿಗಾ ಇಡಲು ಪೆಗಾಸಸ್‌ ಎಂಬ ಸಾಫ್ಟ್‌ವೇರ್‌ ಕುತಂತ್ರಾಂಶವನ್ನು ಬಳಸುತ್ತಿತ್ತು ಎನ್ನಲಾಗಿದೆ. ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌ ಮತ್ತು ಇತರ ರೀತಿಗಳ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳ ಫೋನ್‌ಗೆ ಇದನ್ನು ಕಳುಹಿಸಲಾಗುತ್ತದೆ. ಅಲ್ಲಿಆ್ಯಕ್ಟಿವೇಟ್‌ ಆಗುತ್ತಿದ್ದಂತೆಯೇ ಕಾಲ್‌ಗಳು ಗೌಪ್ಯವಾಗಿ ದಾಖಲಾಗಲು ಆರಂಭವಾಗುತ್ತವೆ. ವಾಟ್ಸ್‌ಆ್ಯಪ್‌ ಚಾಟ್‌, ಎಸ್‌ಎಂಎಸ್‌ಗಳು ದಾಖಲಾಗುತ್ತವೆ. ಈ ಸಾಫ್ಟ್‌ವೇರ್‌ ಮೂಲಕ ಅತ್ಯಂತ ಭದ್ರತೆಯ ಐಫೋನ್‌ಗಳನ್ನೂ ಹ್ಯಾಕ್‌ ಮಾಡಬಹುದು ಎನ್ನಲಾಗಿದೆ. ಆದರೆ, ಹ್ಯಾಕ್‌ ಮಾಡಿದ್ದು ಯಾರು ಎನ್ನುವುದು ಗೊತ್ತಾಗುವುದೇ ಇಲ್ಲ.

ದೇಶದ ಅತೀ ದೊಡ್ಡ ಲೈಂಗಿಕ ಹಗರಣಕ್ಕೆ ಆರ್‌ಎಸ್‌ಎಸ್‌ ಕಾರಣ ಎಂದ ಕಾಂಗ್ರೆಸ್‌ ನಾಯಕ

ಇದೇ ಮೊದಲು

ರಾಜ್ಯದಲ್ಲಿಯೂ ಇಂತಹ ಹನಿಟ್ರ್ಯಾಪ್‌ ಪ್ರಕರಣಗಳು ಬೆಳಕಿಗೆ ಬಂದಿವೆ. ಸಿನಿಮಾ ಹಾಗೂ ಕಿರುತೆರೆ ನಟಿಯರು ಶಾಮೀಲಾಗಿ ವೈದ್ಯರು ಹಾಗೂ ಉದ್ಯಮಿಗಳನ್ನು ಈ ಖೆಡ್ಡಾಕ್ಕೆ ಬೀಳಿಸಿ ನಂತರ ಹಣ ವಸೂಲಿ ಮಾಡಿರುವ ಹಲವು ಪ್ರಕರಣಗಳು ಇವೆ. ಆದರೆ ಯುವತಿಯರೊಂದಿಗಿನ ಖಾಸಗಿ ಕ್ಷಣಗಳ ವಿಡಿಯೊ ಹಾಗೂ ಫೋಟೊಗಳ ಡೇಟಾ ಸಂಗ್ರಹಿಸಿಡಲು ಖಾಸಗಿ ಕಂಪನಿಯೊಂದಕ್ಕೆ ನೀಡಲಾಗುತ್ತಿತ್ತು ಎಂಬುದು ಇದೇ ಮೊದಲು.

ಬೆಂಗಳೂರಿನಲ್ಲಿ ಏಕೆ?

ಶ್ವೇತಾ ವಿಜಯ್‌ ಜೈನ್‌ ತಾಂತ್ರಿಕ ಪರಿಣತೆಯಾಗಿದ್ದು, ಒಂದು ಟೆಕ್‌ ಕಂಪನಿ ಕೂಡಾ ಹೊಂದಿದ್ದಾಳೆ. ಮಧ್ಯ ಪ್ರದೇಶದಲ್ಲೇ ಈ ದಾಖಲೆ ಸಂಗ್ರಹಿಸಿಟ್ಟರೆ ಅದು ಸೋರಿಕೆಯಾಗಬಹುದು ಎಂಬ ಕಾರಣಕ್ಕೆ ಬೆಂಗಳೂರಿನ ಕಂಪನಿಯನ್ನು ಆಯ್ಕೆ ಮಾಡಿದ್ದಾಳೆ ಎನ್ನಲಾಗಿದೆ.

ಬೆಂಗಳೂರು ಮೂಲದ ಕಂಪನಿಯು ಸೈಬರ್‌ ಕಣ್ಗಾವಲಿಗೆ ಹೆಸರಾದ ಸಂಸ್ಥೆಯಾಗಿದ್ದು, ಈ ಹಿಂದೆ ಕೆಲವು ಕೇಂದ್ರೀಯ ತನಿಖಾ ಸಂಸ್ಥೆಗಳಿಗೂ ನೆರವು ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ