ಗಿರೀಶ್ ಕೋಟೆ ಬೆಂಗಳೂರು
ಮೆಟ್ರೊ ನಿಲ್ದಾಣದಲ್ಲಿ ಆಗಂತುಕನೊಬ್ಬ ಭದ್ರತಾ ತಪಾಸಣೆಗೆ ಒಳಪಡದೆ ವಾಪಸ್ ತೆರಳಿದ ಬಳಿಕ 'ಶಂಕಿತ ಉಗ್ರ'ನ ಭೀತಿಯಿಂದ ಬೆಂಗಳೂರು ಬೆಚ್ಚಿಬಿದ್ದಿತ್ತು. ನಗರಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿತ್ತು. ನೂರಾರು ಪೊಲೀಸರು ಶೋಧ ಕಾರ್ಯಾಚರಣೆಗಿಳಿದು, ಕೊನೆಗೂ ಆತನನ್ನು ಪತ್ತೆ ಹಚ್ಚಿದ್ದರು. ಆದರೆ ಈ ಎಲ್ಲ ಟೆನ್ಶನ್ಗೆ ಕಾರಣವಾಗಿದ್ದು 'ಚೆಡ್ಡಿ' ಎನ್ನುವುದೀಗ ಬಯಲಾಗಿದೆ!
ಆ ದಿನ ಮೆಟ್ರೊ ನಿಲ್ದಾಣಕ್ಕೆ ಬಂದಿದ್ದ ಭಿಕ್ಷುಕ ಸಾಜಿದ್ ಖಾನ್ನನ್ನು ಮೆಟ್ರೊದ ಕಾವಲು ಸಿಬ್ಬಂದಿ ಮಾಮೂಲಿಯಂತೆ ತಪಾಸಣೆಗೆ ಒಳಪಡಿಸಿದಾಗ ಬೀಪ್ ಶಬ್ದ ಬಂದಿತ್ತು. ಸಹಜವಾಗಿ ಭದ್ರತಾ ಸಿಬ್ಬಂದಿ ಅನುಮಾನಗೊಂಡು ಪೈಜಾಮಾ ಬಿಚ್ಚಲು ಹೇಳಿದ್ದ. ಆದರೆ ಸಾಜಿದ್ ಖಾನ್ ಪೈಜಾಮಾ ಬಿಚ್ಚುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಆತ ಪೈಜಾಮಾದೊಳಗೆ ಚೆಡ್ಡಿ ಹಾಕಿರಲಿಲ್ಲ! ಹಾಗಾಗಿ ಮುಜುಗರ ತಪ್ಪಿಸಿಕೊಳ್ಳಲು ಅಲ್ಲಿಂದ ಜಾಗ ಖಾಲಿ ಮಾಡಿದ್ದ.
ಮೆಟ್ರೊ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಓಡಾಟ ದೊಡ್ಡ ಸುದ್ದಿ ಆದ ಬಳಿಕ ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ವಿಭಾಗ, ಉಗ್ರ ನಿಗ್ರಹ ದಳ ಸೇರಿದಂತೆ ನಾನಾ ವಿಭಾಗದ ಸುಮಾರು 80ಕ್ಕೂ ಹೆಚ್ಚು ಅಧಿಧಿಕಾರಿಗಳ ತಂಡ ಹೈ ಅಲರ್ಟ್ ಆಗಿತ್ತು. ನಾನಾ ಕೋನಗಳಲ್ಲಿ ತನಿಖೆ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯ ನೋಡಿ ಮೆಟ್ರೊ ಕಾವಲು ಸಿಬ್ಬಂದಿಯನ್ನು ವಿಚಾರಣೆ ನಡೆಸಿದ ಬಳಿಕ ಬಹುತೇಕ ಎಲ್ಲಾ ತನಿಖಾ ಸಂಸ್ಥೆಗಳ ಅಧಿಧಿಕಾರಿಗಳಿಗೂ, ಆತ ಯಾರೋ ಬಡಪಾಯಿ ಇರಬೇಕು ಎನ್ನುವುದು ಖಚಿತ ಆಗಿತ್ತು. ಆದರೂ ಆತನನ್ನು ಪತ್ತೆಹಚ್ಚಿ ಮಾಧ್ಯಮಗಳ ಮುಂದೆ ಸತ್ಯ ಬಿಚ್ಚಿಡುವ ತನಕ ಏನೂ ಹೇಳುವ ಹಾಗಿರಲಿಲ್ಲ.
ಕೊನೆಗೆ ಆತ ಕಾಟನ್ಪೇಟೆ ಪೊಲೀಸ್ ಠಾಣೆ ಪಕ್ಕದ ಸಿಬಿ ಲಾಡ್ಜ್ನಲ್ಲೇ ಇದ್ದಾನೆ ಎನ್ನುವುದು ಗೊತ್ತಾಯಿತು. ಬಳಿಕ ಎಲ್ಲಾ ತನಿಖಾ ಸಂಸ್ಥೆಗಳ ಅಧಿಧಿಕಾರಿಗಳೂ ಅಲ್ಲಿಗೆ ದೌಡಾಯಿಸಿದರು. ಒಬ್ಬರಾದ ನಂತರ ಒಬ್ಬರು ಸಾಜಿದ್ ಖಾನ್ನನ್ನು ಹತ್ತು ಹಲವು ರೀತಿಯಲ್ಲಿ ಪ್ರಶ್ನಿಸಿದರು. ಆಗ ಸಾಜಿದ್ ಖಾನ್ 'ಚೆಡ್ಡಿ ಪ್ರಸಂಗ'ವನ್ನು ಹೇಳಿಕೊಂಡರು.
ಒಂದೇ ಚೆಡ್ಡಿ ಇತ್ತು ಸಾಬ್!
''ನೀನು ಏನೂ ತಪ್ಪು ಮಾಡಿಲ್ಲ ಅಂತಾದರೆ ಮೆಟ್ರೊ ಸ್ಟೇಷನ್ನಿಂದ ವಾಪಸ್ ಹೋಗಿದ್ದು ಏಕೆ?,'' ಎನ್ನುವ ಪ್ರಶ್ನೆಯನ್ನು ಉರ್ದು ಭಾಷೆಯಲ್ಲೇ ಅಧಿಧಿಕಾರಿಗಳು ಕೇಳಿದರು. ಬಹಳ ಸಂಕೋಚದಿಂದ ಸಾಜಿದ್ ಖಾನ್ ''ಸಾಬ್ ಮೇರೆ ಪಾಸ್ ಏಕೀ ಚೆಡ್ಡಿ ಥಾ ಸಾಬ್. ಉಸ್ ದಿನ್ ಮೈ ಚೆಡ್ಡಿ ನಹೀ ಪೆಹನಾ ಥಾ. ಮುಝೆ ಪೈಜಾಮಾ ನಿಕಾಲ್ನೆಕೋ ಬೋಲ್ರಹಾಥಾ' (ನನ್ನ ಬಳಿ ಒಂದೇ ಚೆಡ್ಡಿ ಇತ್ತು. ಆ ದಿನ ನಾನು ಚೆಡ್ಡಿ ಹಾಕಿರಲಿಲ್ಲ. ಮೆಟ್ರೊ ಕಾವಲು ಸಿಬ್ಬಂದಿ ಪೈಜಾಮಾ ಬಿಚ್ಚಲು ಹೇಳುತ್ತಿದ್ದ. ಇದರಿಂದ ಭಯಗೊಂಡು ಅಲ್ಲಿಂದ ಓಡಿಬಿಟ್ಟೆ) ಎಂದು ಉತ್ತರಿಸಿದ್ದಾನೆ. ಹೀಗೆ ಉತ್ತರಿಸುತ್ತಲೇ ಸಾಜಿದ್, ಕಿಟಕಿ ಮೇಲೆ ಒಣ ಹಾಕಿದ್ದ ಚೆಡ್ಡಿಯನ್ನೂ ಅಧಿಧಿಕಾರಿಗೆ ತೋರಿಸಿದ್ದ!
''ಈ ಕತೆ ಕೇಳಿಸಿಕೊಂಡ ನಮಗೂ ಬೇಸರ ಆಯಿತು. ಇಂಥ ಬಡಪಾಯಿ ವ್ಯಕ್ತಿಯ ಬಗ್ಗೆ ಎಷ್ಟೆಲ್ಲ ಕಟ್ಟು ಕತೆಗಳು ಬಂದು ನಾವೆಲ್ಲ ದಿನಗಟ್ಟಲೆ ನಿದ್ದೆಗೆಡುವಂತಾಯಿತು. ಆದರೆ ಸಾಜಿದ್ ಪೈಜಾಮಾ ಬಿಚ್ಚಿ ಬೆತ್ತಲಾಗುವುದರಿಂದ ಬಚಾವಾದರು. ವದಂತಿ ಹಬ್ಬಿಸಿದವರು ಬೆತ್ತಲಾದರು,'' ಎಂದು ಅಧಿಕಾರಿಯೊಬ್ಬರು ಈ ಸಂಗತಿಯನ್ನು 'ವಿಜಯ ಕರ್ನಾಟಕ' ಜತೆ ಹಂಚಿಕೊಂಡರು.
ಮೆಟ್ರೊ ನಿಲ್ದಾಣದಲ್ಲಿ ಆಗಂತುಕನೊಬ್ಬ ಭದ್ರತಾ ತಪಾಸಣೆಗೆ ಒಳಪಡದೆ ವಾಪಸ್ ತೆರಳಿದ ಬಳಿಕ 'ಶಂಕಿತ ಉಗ್ರ'ನ ಭೀತಿಯಿಂದ ಬೆಂಗಳೂರು ಬೆಚ್ಚಿಬಿದ್ದಿತ್ತು. ನಗರಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿತ್ತು. ನೂರಾರು ಪೊಲೀಸರು ಶೋಧ ಕಾರ್ಯಾಚರಣೆಗಿಳಿದು, ಕೊನೆಗೂ ಆತನನ್ನು ಪತ್ತೆ ಹಚ್ಚಿದ್ದರು. ಆದರೆ ಈ ಎಲ್ಲ ಟೆನ್ಶನ್ಗೆ ಕಾರಣವಾಗಿದ್ದು 'ಚೆಡ್ಡಿ' ಎನ್ನುವುದೀಗ ಬಯಲಾಗಿದೆ!
ಆ ದಿನ ಮೆಟ್ರೊ ನಿಲ್ದಾಣಕ್ಕೆ ಬಂದಿದ್ದ ಭಿಕ್ಷುಕ ಸಾಜಿದ್ ಖಾನ್ನನ್ನು ಮೆಟ್ರೊದ ಕಾವಲು ಸಿಬ್ಬಂದಿ ಮಾಮೂಲಿಯಂತೆ ತಪಾಸಣೆಗೆ ಒಳಪಡಿಸಿದಾಗ ಬೀಪ್ ಶಬ್ದ ಬಂದಿತ್ತು. ಸಹಜವಾಗಿ ಭದ್ರತಾ ಸಿಬ್ಬಂದಿ ಅನುಮಾನಗೊಂಡು ಪೈಜಾಮಾ ಬಿಚ್ಚಲು ಹೇಳಿದ್ದ. ಆದರೆ ಸಾಜಿದ್ ಖಾನ್ ಪೈಜಾಮಾ ಬಿಚ್ಚುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಆತ ಪೈಜಾಮಾದೊಳಗೆ ಚೆಡ್ಡಿ ಹಾಕಿರಲಿಲ್ಲ! ಹಾಗಾಗಿ ಮುಜುಗರ ತಪ್ಪಿಸಿಕೊಳ್ಳಲು ಅಲ್ಲಿಂದ ಜಾಗ ಖಾಲಿ ಮಾಡಿದ್ದ.
ಮೆಟ್ರೊ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಓಡಾಟ ದೊಡ್ಡ ಸುದ್ದಿ ಆದ ಬಳಿಕ ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ವಿಭಾಗ, ಉಗ್ರ ನಿಗ್ರಹ ದಳ ಸೇರಿದಂತೆ ನಾನಾ ವಿಭಾಗದ ಸುಮಾರು 80ಕ್ಕೂ ಹೆಚ್ಚು ಅಧಿಧಿಕಾರಿಗಳ ತಂಡ ಹೈ ಅಲರ್ಟ್ ಆಗಿತ್ತು. ನಾನಾ ಕೋನಗಳಲ್ಲಿ ತನಿಖೆ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯ ನೋಡಿ ಮೆಟ್ರೊ ಕಾವಲು ಸಿಬ್ಬಂದಿಯನ್ನು ವಿಚಾರಣೆ ನಡೆಸಿದ ಬಳಿಕ ಬಹುತೇಕ ಎಲ್ಲಾ ತನಿಖಾ ಸಂಸ್ಥೆಗಳ ಅಧಿಧಿಕಾರಿಗಳಿಗೂ, ಆತ ಯಾರೋ ಬಡಪಾಯಿ ಇರಬೇಕು ಎನ್ನುವುದು ಖಚಿತ ಆಗಿತ್ತು. ಆದರೂ ಆತನನ್ನು ಪತ್ತೆಹಚ್ಚಿ ಮಾಧ್ಯಮಗಳ ಮುಂದೆ ಸತ್ಯ ಬಿಚ್ಚಿಡುವ ತನಕ ಏನೂ ಹೇಳುವ ಹಾಗಿರಲಿಲ್ಲ.
ಕೊನೆಗೆ ಆತ ಕಾಟನ್ಪೇಟೆ ಪೊಲೀಸ್ ಠಾಣೆ ಪಕ್ಕದ ಸಿಬಿ ಲಾಡ್ಜ್ನಲ್ಲೇ ಇದ್ದಾನೆ ಎನ್ನುವುದು ಗೊತ್ತಾಯಿತು. ಬಳಿಕ ಎಲ್ಲಾ ತನಿಖಾ ಸಂಸ್ಥೆಗಳ ಅಧಿಧಿಕಾರಿಗಳೂ ಅಲ್ಲಿಗೆ ದೌಡಾಯಿಸಿದರು. ಒಬ್ಬರಾದ ನಂತರ ಒಬ್ಬರು ಸಾಜಿದ್ ಖಾನ್ನನ್ನು ಹತ್ತು ಹಲವು ರೀತಿಯಲ್ಲಿ ಪ್ರಶ್ನಿಸಿದರು. ಆಗ ಸಾಜಿದ್ ಖಾನ್ 'ಚೆಡ್ಡಿ ಪ್ರಸಂಗ'ವನ್ನು ಹೇಳಿಕೊಂಡರು.
ಒಂದೇ ಚೆಡ್ಡಿ ಇತ್ತು ಸಾಬ್!
''ನೀನು ಏನೂ ತಪ್ಪು ಮಾಡಿಲ್ಲ ಅಂತಾದರೆ ಮೆಟ್ರೊ ಸ್ಟೇಷನ್ನಿಂದ ವಾಪಸ್ ಹೋಗಿದ್ದು ಏಕೆ?,'' ಎನ್ನುವ ಪ್ರಶ್ನೆಯನ್ನು ಉರ್ದು ಭಾಷೆಯಲ್ಲೇ ಅಧಿಧಿಕಾರಿಗಳು ಕೇಳಿದರು. ಬಹಳ ಸಂಕೋಚದಿಂದ ಸಾಜಿದ್ ಖಾನ್ ''ಸಾಬ್ ಮೇರೆ ಪಾಸ್ ಏಕೀ ಚೆಡ್ಡಿ ಥಾ ಸಾಬ್. ಉಸ್ ದಿನ್ ಮೈ ಚೆಡ್ಡಿ ನಹೀ ಪೆಹನಾ ಥಾ. ಮುಝೆ ಪೈಜಾಮಾ ನಿಕಾಲ್ನೆಕೋ ಬೋಲ್ರಹಾಥಾ' (ನನ್ನ ಬಳಿ ಒಂದೇ ಚೆಡ್ಡಿ ಇತ್ತು. ಆ ದಿನ ನಾನು ಚೆಡ್ಡಿ ಹಾಕಿರಲಿಲ್ಲ. ಮೆಟ್ರೊ ಕಾವಲು ಸಿಬ್ಬಂದಿ ಪೈಜಾಮಾ ಬಿಚ್ಚಲು ಹೇಳುತ್ತಿದ್ದ. ಇದರಿಂದ ಭಯಗೊಂಡು ಅಲ್ಲಿಂದ ಓಡಿಬಿಟ್ಟೆ) ಎಂದು ಉತ್ತರಿಸಿದ್ದಾನೆ. ಹೀಗೆ ಉತ್ತರಿಸುತ್ತಲೇ ಸಾಜಿದ್, ಕಿಟಕಿ ಮೇಲೆ ಒಣ ಹಾಕಿದ್ದ ಚೆಡ್ಡಿಯನ್ನೂ ಅಧಿಧಿಕಾರಿಗೆ ತೋರಿಸಿದ್ದ!
''ಈ ಕತೆ ಕೇಳಿಸಿಕೊಂಡ ನಮಗೂ ಬೇಸರ ಆಯಿತು. ಇಂಥ ಬಡಪಾಯಿ ವ್ಯಕ್ತಿಯ ಬಗ್ಗೆ ಎಷ್ಟೆಲ್ಲ ಕಟ್ಟು ಕತೆಗಳು ಬಂದು ನಾವೆಲ್ಲ ದಿನಗಟ್ಟಲೆ ನಿದ್ದೆಗೆಡುವಂತಾಯಿತು. ಆದರೆ ಸಾಜಿದ್ ಪೈಜಾಮಾ ಬಿಚ್ಚಿ ಬೆತ್ತಲಾಗುವುದರಿಂದ ಬಚಾವಾದರು. ವದಂತಿ ಹಬ್ಬಿಸಿದವರು ಬೆತ್ತಲಾದರು,'' ಎಂದು ಅಧಿಕಾರಿಯೊಬ್ಬರು ಈ ಸಂಗತಿಯನ್ನು 'ವಿಜಯ ಕರ್ನಾಟಕ' ಜತೆ ಹಂಚಿಕೊಂಡರು.