ಆ್ಯಪ್ನಗರ

‘ಬೆಂಗಳೂರು ಟೆಕ್' ಸಮ್ಮೇಳನಕ್ಕೆ ಐಟಿ ಸಿಟಿ ಸಜ್ಜು; ಟೆಕ್ ವೈಭವದ ವಿಶೇಷತೆ ಏನು ಗೊತ್ತಾ?

ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮೇಳನಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ವಿವಿಧ ದೇಶಗಳ ಮೂರು ಸಾವಿರ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

Vijaya Karnataka Web 17 Nov 2019, 4:50 pm
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ 'ಬೆಂಗಳೂರು ಟೆಕ್ ಸಮ್ಮೇಳನ' ನಡೆಯಿದೆ. ಸೋಮವಾರ ಬೆಳಗ್ಗೆ 10 ಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. 20 ದೇಶಗಳ ಐಟಿ ತಜ್ಞರು, ತಂತ್ರಜ್ಞರು ಸಹಿತ ಸುಮಾರು ಮೂರು ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
Vijaya Karnataka Web bangalore tech


ಐಟಿ ಸಿಟಿ ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಸಮ್ಮೇಳನಕ್ಕೆ 12 ಸಾವಿರ ಮಂದಿ ವೀಕ್ಷಕರು ಭಾಗಿಯಾಗಲಿದ್ದಾರೆ. 47 ಗೋಷ್ಠಿಗಳು ನಡೆಯಲಿದ್ದು, 200 ಭಾಷಣಕಾರರು ಪಾಲ್ಗೊಳ್ಳಲಿದ್ದು ಸಮ್ಮೇಳನ ಯಶಸ್ವಿಗೊಳಿಸಲು ಸರಕಾರ ಎಲ್ಲಾ ಸಿದ್ಧತೆ ಕೈಗೊಂಡಿದೆ.

ನ.18ರಿಂದ 'ಬೆಂಗಳೂರು ಟೆಕ್‌ ಸಮ್ಮೇಳನ' : ಮುಂದಿನ ವರ್ಷ ಹೊಸ ಐಟಿ ನೀತಿ ಪ್ರಕಟ

ಕರ್ನಾಟಕ ಐಟಿ-ಬಿಟಿಯಲ್ಲಿ‌ ದೇಶದ ನಾಯಕತ್ವವನ್ನು ಹೊಂದಿದೆ. ತಂತ್ರಜ್ಞಾನ ಕ್ಷೇತ್ರದ ಹೊಸ ಶಾಖೆಗಳಾದ ಕೃತಕ ಬುದ್ಧಿಮತ್ತೆ ,ವರ್ಚುವಲ್ ವರ್ಲ್ಡ್ ಸಹಿತ ನಾನಾ ವಿಭಾಗಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಈ ಎಲ್ಲಾ ಕ್ಷೇತ್ರಗಳನ್ನು ಸರಕಾರ ಪ್ರೋತ್ಸಾಹ ನೀಡಲಿದೆ. ಇದಕ್ಕೆ ಪೂರಕ ವಾತಾವರಣ ಮೂಡಿಸಲು ಅಗತ್ಯ ನೆರವು ಹಾಗೂ ಅಗತ್ಯ ನಿಯಮಾವಳಿ, ಕಾನೂನು ರೂಪಿಸಲಾಗುತ್ತಿದೆ. ಉದ್ಯೋಗ ಸೃಷ್ಟಿಗೂ ಒತ್ತು ನೀಡಲಾಗುತ್ತಿದೆ. ನವೋದ್ಯಮಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡುಲು ಹೊಸ ನೀತಿ ತರಲಾಗಿದೆ. ಆವಿಷ್ಕಾರ ಪ್ರಾಧಿಕಾರ ರಚಿಸಿದ್ದು, ಸದ್ಯದಲ್ಲೇ ಹೊಸ ಐಟಿ ನೀತಿಯನ್ಮು ಜಾರಿಗೆ ತರಲಾಗುತ್ತದೆ ಎಂದು ಐಟಿ ಬಿಟಿ ಸಚಿವರೂ ಆಗಿರುವ ಡಿಸಿಎಂ ಡಾ. ಅಶ್ವಥ್ ನಾರಾಯಣ್ ತಿಳಿಸಿದರು.


ಆರ್ಥಿಕ ಹಿಂಜರಿತದಿಂದ ಬೆಂಗಳೂರು ಐಟಿ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರದು. ಸ್ವಲ್ಪಮಟ್ಟಿನ ಹಿನ್ನೆಡೆ ಇದ್ದರೂ ಉದ್ಯಮಕ್ಕೆ ತೊಂದರೆ ಆಗದು. ಇದನ್ನು ಕಂಪನಿಗಳು ಕೂಡ ಗಂಭೀರವಾಗಿ ಪರಿಗಣಿಸಿವೆ. ಸರಕಾರ ಉದ್ಯಮಕ್ಕೆ ಬೆನ್ನುಲುಬಾಗಿ ನಿಂತಿದೆ. ಸೈಬರ್ ಕ್ರೈಂ ಕ್ಷೇತದಡಿಯಲ್ಲಿ ಹೆಚ್ಚಿನ ಅವಕಾಶ ಇದ್ದು ಈ ವಿಭಾಗದಿಂದ ಹೆಚ್ಚು ಲಾಭ ಮಾಡಿಕೊಳ್ಳಲು ಆದ್ಯತೆ ನೀಡಲಾಗಿದೆ.

ಬೆಂಗಳೂರು ಸಹಿತ ದೇಶದ ನಾನಾ ನಗರಗಳಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕುವತ್ತ ಸರಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಿದೆ. ಐಟಿ ಕ್ಷೇತ್ರದ ಅವಕಾಶ ಹಾಗೂ ಸವಾಲುಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದಿದ್ಶಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ