ಆ್ಯಪ್ನಗರ

ಕನ್ನಡದಲ್ಲೇ ಬ್ಯಾಂಕಿಂಗ್‌ ಪರೀಕ್ಷೆ: ಹನುಮಂತಯ್ಯ ಒತ್ತಾಯ

ಈ ಹಿಂದೆ ಬ್ಯಾಂಕಿಂಗ್‌ ವಲಯದ ನೇಮಕದಲ್ಲಿದ್ದ ಸ್ಥಳೀಯ ಭಾಷೆಯ ಜ್ಞಾನ ಕಡ್ಡಾಯ ಎಂಬ ನಿಯಮವನ್ನು ಮತ್ತೆ ಜಾರಿಗೆ ತರಬೇಕು ಎಂದು ಸಂಸದ ಎಲ್‌.ಹನುಮಂತಯ್ಯ ಒತ್ತಾಯಿಸಿದ್ದಾರೆ.

Vijaya Karnataka 7 Aug 2018, 8:07 am
ಹೊಸದಿಲ್ಲಿ: ಈ ಹಿಂದೆ ಬ್ಯಾಂಕಿಂಗ್‌ ವಲಯದ ನೇಮಕದಲ್ಲಿದ್ದ ಸ್ಥಳೀಯ ಭಾಷೆಯ ಜ್ಞಾನ ಕಡ್ಡಾಯ ಎಂಬ ನಿಯಮವನ್ನು ಮತ್ತೆ ಜಾರಿಗೆ ತರಬೇಕು ಎಂದು ಸಂಸದ ಎಲ್‌.ಹನುಮಂತಯ್ಯ ಒತ್ತಾಯಿಸಿದ್ದಾರೆ.
Vijaya Karnataka Web l


ರಾಜ್ಯಸಭೆಯ ಕಲಾಪದ ಶೂನ್ಯವೇಳೆಯಲ್ಲಿ ಸೋಮವಾರ ಈ ವಿಷಯ ಪ್ರಸ್ತಾಪಿಸಿ,'' ಪ್ರಾದೇಶಿಕ ನೇಮಕಾತಿ ಮಂಡಳಿ (ಆರ್‌ಆರ್‌ಬಿ)ಯನ್ನು ರದ್ದುಗೊಳಿಸಿ ಕೇಂದ್ರ ಸರಕಾರವೀಗ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರಿಂದ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಿಗೆ ತೀವ್ರ ಅನ್ಯಾಯವಾಗುತ್ತಿದೆ,''ಎಂದರು.

''ಕರ್ನಾಟಕವೊಂದರಲ್ಲೇ 18 ಸಾವಿರ ನೇಮಕಗಳಾಗಿದ್ದು, ಈ ಪೈಕಿ ಕೇವಲ 1060 ಕನ್ನಡಿಗರು. ಈ ಹಿಂದೆ ಆರ್‌ಆರ್‌ಬಿ ನೇಮಕದಲ್ಲಿ ಸ್ಥಳೀಯ ಭಾಷೆಯ ಜ್ಞಾನ ಕಡ್ಡಾಯ ಎಂಬ ನಿಯಮದ ಬದಲು ಸ್ಥಳೀಯ ಭಾಷೆಯ ಜ್ಞಾನ ಅಪೇಕ್ಷಣೀಯ ಎಂದಷ್ಟೇ ಹೇಳಲಾಗಿದೆ. ಇದರಿಂದ ಗುಮಾಸ್ತನ ಹುದ್ದೆಯೂ ಸೇರಿದಂತೆ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಯಾವುದೇ ಉದ್ಯೋಗ ಸಿಗದಂತಾಗಿದೆ,'' ಎಂದೂ ಅವರು ವಿವರಿಸಿದರು.

ಈ ನಿರ್ಧಾರದ ಪರಿಣಾಮವಾಗಿ ಸ್ಥಳೀಯ ಭಾಷೆ ಗೊತ್ತಿಲ್ಲದ ಅಧಿಕಾರಿಗಳೇ ಬ್ಯಾಂಕುಗಳಲ್ಲಿ ಹೆಚ್ಚಾಗಿರುವುದರಿಂದ ಸ್ಥಳೀಯ ಭಾಷೆ ಮಾತ್ರ ತಿಳಿದಿರುವ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯ ವಿರುದ್ಧವಾಗಿದೆ. ಸಮಸ್ಯೆ ಬಗ್ಗೆ ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳು ಕೇಂದ್ರ ಸರಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ,''ಎಂದು ನೆನಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ