ಆ್ಯಪ್ನಗರ

ಉಪನಿಷತ್ತುಗಳನ್ನು ಕಲಿಸುವ ಶಿಕ್ಷಣ ಮರಳಿ ಬರಬೇಕಿದೆ : ಬನ್ನಂಜೆ ಗೋವಿಂದಾಚಾರ್ಯ

ದೇಶದಲ್ಲಿ ಅಪ್ರಬುದ್ಧ ಶಿಕ್ಷಣ ವ್ಯವಸ್ಥೆ ಇದ್ದು, ಉಪನಿಷತ್ತುಗಳನ್ನು ಕಲಿಸುವ ಶಿಕ್ಷಣ ಮರಳಿ ಬರಬೇಕಿದೆ ಎಂದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ...

Vijaya Karnataka 31 Dec 2018, 5:00 am
ಬೆಂಗಳೂರು: ದೇಶದಲ್ಲಿ ಅಪ್ರಬುದ್ಧ ಶಿಕ್ಷಣ ವ್ಯವಸ್ಥೆ ಇದ್ದು, ಉಪನಿಷತ್ತುಗಳನ್ನು ಕಲಿಸುವ ಶಿಕ್ಷಣ ಮರಳಿ ಬರಬೇಕಿದೆ ಎಂದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಹೇಳಿದರು.
Vijaya Karnataka Web BNG-3012-2-2-HAVYAKA-3


ಹವ್ಯಕ ಸಮ್ಮೇಳನದಲ್ಲಿ ನಡೆದ ಯೋಧರಿಗೆ ಸನ್ಮಾನ ಕಾರ‍್ಯಕ್ರಮದಲ್ಲಿ ಮಾತನಾಡಿ''ಹಿಂದೆ ರಾಮಾಯಣ, ಮಹಾಭಾರತ ಬಗ್ಗೆ ಶಾಲೆಗಳಲ್ಲಿ ಕಲಿಸಲಾಗುತ್ತಿತ್ತು. ಜಾತ್ಯತೀತ ದೇಶವೆಂದು ಭಾರತವನ್ನು ಗುರುತಿಸಿದ್ದು, ಶಾಲೆಯಲ್ಲಿ ಪುರಾಣದ ಬಗ್ಗೆ ಹೇಳಿದರೆ ಟೀಕೆ ಕೇಳಿಬರುತ್ತದೆ. ಹೀಗಾಗಿ ಮಕ್ಕಳು ಕ್ರಿಯಾಶೀಲರಾಗಿ ಬೆಳೆಯುತ್ತಿಲ್ಲ,'' ಎಂದರು.

''ಮನುಸ್ಮೃತಿಯಲ್ಲಿ ಹಣಕ್ಕೆ ಕೊನೆಯ ಸ್ಥಾನ ಹಾಗೂ ಶಿಕ್ಷಣಕ್ಕೆ ಮೊದಲ ಸ್ಥಾನ ನೀಡಬೇಕು ಎಂದು ಹೇಳಲಾಗಿದೆ. ಈಗ ಹಣಕ್ಕೆ ಮೊದಲ ಸ್ಥಾನ ದೊರೆಯುತ್ತಿದೆ,'' ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ,''ಯುದ್ಧ ಭೂಮಿಯಲ್ಲಿ ಸೈನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಕಾರ್ಗಿಲ್‌ ಯುದ್ಧ ವೇಳೆ ಪಾಕಿಸ್ತಾನ ಕಡೆ ಎಷ್ಟು ಸೈನಿಕರು ಬಂದಿದ್ದಾರೆಂದು ಮಾಹಿತಿ ಸಿಗದೇ ಇದ್ದರೂ ಹೋರಾಟ ನಡೆಸಿ ಗೆದ್ದರು. ಈಗ ದೇಶದ ಪರಿಸ್ಥಿತಿ ಬದಲಾಗಿದ್ದು, ನಾಲ್ಕೂವರೆ ವರ್ಷಗಳಲ್ಲಿ ಒಂದೇ ಒಂದು ಉಗ್ರಗಾಮಿ ಚಟುವಟಿಕೆ ನಡೆದಿಲ್ಲ. ಇದಕ್ಕೆ ಕೇಂದ್ರ ರಕ್ಷಣಾ ಸಚಿವಾಲಯವು ಮಾಹಿತಿ ಸಂಗ್ರಹಿಸಲು ಬೇರೆ ದೇಶಗಳ ಜತೆ ಒಪ್ಪಂದ ಮಾಡಿಕೊಂಡಿದ್ದೇ ಕಾರಣ,'' ಎಂದರು.

75 ಮಂದಿಗೆ ಹವ್ಯಕ ದೇಶ ರತ್ನ ಪ್ರಶಸ್ತಿ ಪ್ರದಾನ :

ಕಾರ್ಯಕ್ರಮದಲ್ಲಿ ಲೆ.ಜ.ಬಿಎನ್‌ಬಿಎಂ ಪ್ರಸಾದ್‌, ಮೇ.ಜ.ಎಂ.ವಿ.ಭಟ್‌, ಬ್ರಿಗೆಡಿಯರ್‌ ಎಸ್‌.ಜಿ.ಭಾಗವತ್‌, ಕಮಾಂಡರ್‌ ಶ್ರೀಧರ್‌ ಕಾರ್ಣಿಕ್‌, ಕ್ಯಾ.ಶ್ರೀಕಾಂತ್‌ ಹೆಗಡೆ ಸೇರಿದಂತೆ 75 ಯೋಧರಿಗೆ 'ಹವ್ಯಕ ದೇಶರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ 75 ವಿದ್ಯಾರ್ಥಿಗಳಿಗೆ 'ಹವ್ಯಕ ವಿದ್ಯಾರತ್ನ' ಪ್ರಶಸ್ತಿ ಪ್ರದಾನವಾಯಿತು.


ಹಿಂದೆ ಗುಣಮಟ್ಟದ ಶಿಕ್ಷಣದ ಪರಿಣಾಮ ಮಕ್ಕಳಿಗೆ ನಯ, ವಿನಯ ಕಲಿಯಲು ಸಾಧ್ಯವಿಲ್ಲ. ಈಗಿನ ಶಿಕ್ಷಣದಲ್ಲಿ ಗುಣಮಟ್ಟವೇ ಇಲ್ಲ.

-ಮನೋಹರ್‌, ನಿವೃತ್ತ ನ್ಯಾಯಮೂರ್ತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ