ಆ್ಯಪ್ನಗರ

ವಿಧಾನಪರಿಷತ್‌ಗೆ ಬರಗೂರು, ಡಾ.ಎಚ್‌.ಸುದರ್ಶನ್‌ ನಾಮಕರಣ?

ರಾಜ್ಯ ವಿಧಾನ ಪರಿಷತ್ತಿಗೆ ಜೆಡಿಎಸ್‌ ಕೋಟಾದಲ್ಲಿ ಅಮೆರಿಕ ಕನ್ನಡ ಕೂಟದ ಅಮರನಾಥ್‌ಗೌಡ ಹಾಗೂ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಡಾ.ಎಚ್‌.ಸುದರ್ಶನ್‌ ಆಯ್ಕೆಯಾಗುವ ಸಾಧ್ಯತೆಗಳಿವೆ.

Vijaya Karnataka 19 Sep 2018, 8:58 am
ಬೆಂಗಳೂರು: ರಾಜ್ಯ ವಿಧಾನ ಪರಿಷತ್ತಿಗೆ ಜೆಡಿಎಸ್‌ ಕೋಟಾದಲ್ಲಿ ಅಮೆರಿಕ ಕನ್ನಡ ಕೂಟದ ಅಮರನಾಥ್‌ಗೌಡ ಹಾಗೂ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಡಾ.ಎಚ್‌.ಸುದರ್ಶನ್‌ ಆಯ್ಕೆಯಾಗುವ ಸಾಧ್ಯತೆಗಳಿವೆ.
Vijaya Karnataka Web Vidhan Saudha.


ಮೇಲ್ಮನೆಯ ಮೂರು ಸ್ಥಾನಗಳಿಗೆ ವಿಧಾನಸಭೆಯಿಂದ ಚುನಾವಣೆ ನಡೆಯುತ್ತಿದ್ದು, ಮೂರು ಸ್ಥಾನಗಳಿಗೆ ನಾಮನಿರ್ದೇಶನ ಮಾಡಬೇಕಿದೆ. ಈ ಪೈಕಿ ಜೆಡಿಎಸ್‌ ಪಾಲಿಗೆ ತಲಾ ಒಂದು ಸ್ಥಾನ ಸಿಗುತ್ತಿವೆ.

ವಿಧಾನಸಭೆಯಿಂದ ನಡೆಯುವ ಚುನಾವಣೆಯಲ್ಲಿ ಅಮರನಾಥಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ ಬಯಸಿದ್ದು, ತಪ್ಪಿದರೆ ಜೆಡಿಎಸ್‌ ವಕ್ತಾರ ರಮೇಶ್‌ಬಾಬು ಅಥವಾ ಮುಸ್ಲಿಂ ಸಮುದಾಯದ ಮುಖಂಡರೊಬ್ಬರಿಗೆ ಅವಕಾಶ ನೀಡಲು ಚಿಂತನೆ ನಡೆದಿದೆ.

ನಾಮನಿರ್ದೇಶನದ ಅವಕಾಶವನ್ನು ಗಿರಿಜನ ಕಲ್ಯಾಣಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ.ಎಚ್‌.ಸುದರ್ಶನ್‌ ಅವರಿಗೆ ನೀಡಲು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಯಸಿದ್ದಾರೆ. ಈ ಹಿಂದೆ ಎಸ್‌.ಎಂ.ಕೃಷ್ಣ ಹಾಗೂ ಸಿದ್ದರಾಮಯ್ಯ ಸರಕಾರಗಳ ಅವಧಿಯಲ್ಲೂ ಡಾ.ಎಚ್‌. ಸುದರ್ಶನ್‌ ನಾಮನಿರ್ದೇಶನ ಪ್ರಸ್ತಾಪ ಬಂದಿತ್ತಾದರೂ, ಅವಕಾಶ ಕೈತಪ್ಪಿತ್ತು.

ಕಾಂಗ್ರೆಸ್‌ನಿಂದ ಯಾರು?

ಕಾಂಗ್ರೆಸ್‌ ಪಕ್ಷವು ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಮಾಜಿ ಸಚಿವೆ ರಾಣಿ ಸತೀಶ್‌ ಅವರನ್ನು ನಾಮನಿರ್ದೇಶನ ಮಾಡಲು ಬಯಸಿದೆ ಎನ್ನಲಾಗಿದೆ. ವಿಧಾನಸಭೆಯಿಂದ ನಡೆಯುವ ಚುನಾವಣೆಯಲ್ಲಿ ನಿವೇದಿತ್‌ ಆಳ್ವ, ಎಂ.ಸಿ.ವೇಣುಗೋಪಾಲ್‌ ಅವರನ್ನು ಅಭ್ಯರ್ಥಿಗಳಾಗಿ ಅಯ್ಕೆ ಮಾಡುವ ಸಾಧ್ಯತೆಗಳಿವೆ.

ಡಿಸಿಎಂ ಡಾ.ಜಿ.ಪರಮೇಶ್ವರ್‌, ಕೆ.ಎಸ್‌.ಈಶ್ವರಪ್ಪ ಹಾಗೂ ವಿ.ಸೋಮಣ್ಣ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈ ಮೂರೂ ಸ್ಥಾನಗಳಿಗೆ ಅ.3 ರಂದು ಉಪ ಚುನಾವಣೆ ನಿಗದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ