ಆ್ಯಪ್ನಗರ

Basava Jayanti: ಅಮಿತ್ ಶಾ ಎಸೆದ ಹಾರ ಬಸವೇಶ್ವರ ಪ್ರತಿಮೆಗೆ ಬೀಳಲೇ ಇಲ್ಲ!..ಆದರೆ,....

ಬಸವೇಶ್ವರ ಪ್ರತಿಮೆಗೆ ಹಾರ ಹಾಕುವಲ್ಲಿ ಎಡವಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ...ಗುರಿ ತಲುಪಿದ ರಾಜ್ಯಾಧ್ಯಕ್ಷ ಯಡಿಯೂರಪ್ಪ!

Vijaya Karnataka 19 Apr 2018, 9:53 am
ಬೆಂಗಳೂರು: ಬಸವೇಶ್ವರ ಪ್ರತಿಮೆಗೆ ಹಾರ ಹಾಕುವಲ್ಲಿ ಎಡವಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ...ಗುರಿ ತಲುಪಿದ ರಾಜ್ಯಾಧ್ಯಕ್ಷ ಯಡಿಯೂರಪ್ಪ!
Vijaya Karnataka Web shah


ಬಸವ ಜಯಂತಿ ಪ್ರಯುಕ್ತ ಬುಧವಾರ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಹಾರ ಹಾಕುವುದಕ್ಕೆ ಕ್ರೇನ್‌ ಕಲ್ಪಿಸಲಾಗಿತ್ತು. ಅಮಿತ್‌ ಶಾ ಹಾಗೂ ಪ್ರತಿಮೆ ನಡುವೆ ಅಂತರವಿದ್ದ ಕಾರಣ ನೇರವಾಗಿ ಹಾರ ಹಾಕಲು ಸಾಧ್ಯವಾಗದ ಕಾರಣ ಕೊಂಚ ಸಮಯ ತೆಗೆದುಕೊಂಡು ಪ್ರತಿಮೆಗೆ ಹಾರವನ್ನು ಎಸೆದರು.

ಆದರೆ ಹಾರ ತಲೆ ಭಾಗಕ್ಕೆ ತಲುಪಿ ಕೆಳಗೆ ಬಿತ್ತು. ಯಡಿಯೂರಪ್ಪ ಹಾಕಿದ ಹಾರ ಬಸವೇಶ್ವರರ ಕೊರಳಿಗೆ ಬಿತ್ತು. ಹಾರ ಸರಿಯಾಗಿ ಬೀಳುತ್ತಿದ್ದಂತೆ ಯಡಿಯೂರಪ್ಪ ಮುಗುಳ್ನಕ್ಕರು ಇದನ್ನು ನೋಡಿದ ಅಮಿತ್‌ ಶಾ ಕೂಡ ನಸು ನಗುತ್ತಲೇ ಕ್ರೇನ್‌ ನಿಂದ ಕೆಳಗಿಳಿದರು. ಬಳಿಕ ಬಿಜೆಪಿ ನಾಯಕರು ಅಮಿತ್‌ ಶಾ ಅವರಿಗೆ ಬಸವಣ್ಣನವರ ವಚನಗಳ ಪುಸ್ತಕವನ್ನು ನೀಡಿದರು.

ಮುಖಂಡರ ಬಂಧನ


ಇದಕ್ಕೂ ಮುನ್ನ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಕರ್ತರು ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಅಮಿತ್‌ ಶಾ ನಿಲುವು ಸ್ಪಷ್ಟಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತ್ಯೇಕ ಧರ್ಮ ಘೋಷಣೆ ಮಾಡಿ ಇಲ್ಲವೇ ದಾರಿ ಬಿಡಿ ಎನ್ನುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲು ಸಿದ್ದರಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಮಿತ್‌ ಶಾ ಆಗಮನಕ್ಕೂ ಮುನ್ನವೇ ಮಹಾಸಭಾ ಮುಖಂಡರನ್ನು ಬಂಧಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ