ಆ್ಯಪ್ನಗರ

ಇಂದಿರಾ ಕ್ಯಾಂಟೀನ್‌ಗೆ ಭೇಷ್ ಎಂದ ಬಿಬಿಸಿ ನ್ಯೂಸ್

ಕರ್ನಾಟಕದ ಸರಕಾರದ ಇಂದಿರಾ ಕ್ಯಾಂಟೀನ್ ಯೋಜನೆಗೆ ಬಿಬಿಸಿ ನ್ಯೂಸ್ ಬೇಷ್ ಎಂದಿದ್ದು, ಈ ಸುದ್ದಿಯನ್ನು ಕರ್ನಾಟಕ ಸರಕಾರದ ಟ್ವೀಟರ್ ಖಾತೆ ರೀ ಟ್ವೀಟ್ ಮಾಡಿದೆ.

Vijaya Karnataka Web 20 Nov 2017, 11:28 am
ಬೆಂಗಳೂರು: ನಗರದ ಹಲವೆಡೆ ಇಂದಿರಾ ಕ್ಯಾಂಟೀನ್ ಆರಂಭವಾಗಿದ್ದು, ಬಡವರಿಗೆ ಹಸಿವು ನೀಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಕರ್ನಾಟಕದ ಸರಕಾರದ ಈ ಕಾರ್ಯಕ್ಕೆ ಬಿಬಿಸಿ ನ್ಯೂಸ್ ಬೇಷ್ ಎಂದಿದ್ದು, ಈ ಸುದ್ದಿಯನ್ನು ಕರ್ನಾಟಕ ಸರಕಾರದ ಟ್ವೀಟರ್ ಖಾತೆ ರೀ ಟ್ವೀಟ್ ಮಾಡಿದೆ.
Vijaya Karnataka Web bbc news lauds indira canteen of karnataka
ಇಂದಿರಾ ಕ್ಯಾಂಟೀನ್‌ಗೆ ಭೇಷ್ ಎಂದ ಬಿಬಿಸಿ ನ್ಯೂಸ್


ತಾಜಾವಾಗಿರುವ, ಬಿಸಿ, ಬಿಸಿ ಆಹಾರವನ್ನು ಜನರು ಅತ್ಯಂತ ಕಡಿಮೆ ದರದಲ್ಲಿ ಕೊಳ್ಳುತ್ತಿದ್ದು, ಈ ಯೋಜನೆ ಹೆಚ್ಚು ಜನಪ್ರಯವಾಗಿದೆ, ಎಂದು ನ್ಯೂಸ್ ಹೇಳಿದೆ.

ತಮಿಳುನಾಡಿನಲ್ಲಿ ಆರಂಭವಾದ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಆಗಸ್ಟ್ 16ರಂದು ಆರಂಭವಾದ ಈ ಕ್ಯಾಂಟೀನ್‌ನಲ್ಲಿ ತಿಂಡಿ, ಊಟ ಖರೀದಿಸಲು ಜನರು ಮುಗಿ ಬೀಳುತ್ತಿದ್ದು, ತೂಕ ಮಾಡಿ ಆಹಾರ ನೀಡಲಾಗುತ್ತದೆ. ದಿನಗೂಲಿ ಕಾರ್ಮಿಕರು, ಚಾಲಕರು, ಭದ್ರತಾ ಸಿಬ್ಬಂದಿ, ಭಿಕ್ಷುಕರು ಸೇರಿ ಬಡವರು ಆಹಾರ ಕೊಳ್ಳುತ್ತಿದ್ದು, ಇಂಥವರ ಹಸಿವು ನೀಗಿಸುವಲ್ಲಿ, ಸರಕಾರ ತೆಗೆದುಕೊಂಡಿರುವ ಕ್ರಮಕ್ಕೆ ಬಿಬಿಸಿ ಶಹಬ್ಬಾಸ್ ಎಂದು ಹೇಳಿದೆ.


ಕೇವಲ ಐದು ರೂ.ಗೆ ತಿಂಡಿ ಸಿಗಲಿದ್ದು, ಈ ಮುಂಚೆ 30 ರೂ. ಖಾಲಿ ಮಾಡುತ್ತಿದ್ದವರು ದಿನಕ್ಕೆ 25 ರೂ. ಉಳಿಸುವಂತಾಗಿದೆ. ಮೂರು ಹೊತ್ತಿನ ಊಟಕ್ಕೆ ಸುಮಾರು 140 ರೂ. ಖಾಲಿ ಮಾಡುತ್ತಿದ್ದವರು ಇದೀಗ ಕೇವಲ 40 ರೂ.ಖಾಲಿ ಮಾಡುತ್ತಿದ್ದು, ದಿನಕ್ಕೇ 100 ರೂ.ನಷ್ಟು ಉಳಿತಾಯ ಮಾಡುತ್ತಿದ್ದಾರೆ. ಇದರಿಂದ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬುವುದು ಬಿಬಿಸಿ ಅಭಿಪ್ರಾಯ.

ನಗರದಲ್ಲಿ ಒಟ್ಟು 152 ಕ್ಯಾಂಟೀನ್‌ಗಳಿದ್ದು, ದಿನಕ್ಕೆ 2 ಲಕ್ಷ ಮಂದಿಗೆ ಆಹಾರ ಮಾರಲಾಗುತ್ತಿದೆ. ಇದನ್ನು ಇನ್ನು 198ಕ್ಕೆ ಹೆಚ್ಚಿಸುವ ಯೋಜನೆಯಿದ್ದು, ಆಗ ದಿನಕ್ಕೆ 3 ಲಕ್ಷ ಮಂದಿಗೆ ಆಹಾರ ಪೂರೈಸುವ ಸಾಮಾರ್ಥ್ಯ ಹೊಂದಲಿದೆ. ಜನವರಿಯೊಳಗೆ 300ರಷ್ಟು ಕ್ಯಾಂಟೀನ್ ಸ್ಥಾಪಿಸಲಾಗುವುದೆಂದು ಸರಕಾರ ಹೇಳಿದೆ.

ಅಮ್ಮಾ ಕ್ಯಾಂಟೀನ್ ಜನಪ್ರಿಯವಾಗಿದ್ದರಿಂದಲೇ ತಮಿಳುನಾಡಿನಲ್ಲಿ ಜಯಲಲಿತಾ ಅಧಿಕಾರಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿಯೇ ಸರಕಾರ ಅದೇ ಮಾದರಿಯಲ್ಲಿ ಕ್ಯಾಂಟೀನ್ ಆರಂಭಿಸಿದೆ. ಆದರೆ, ಇದೆಷ್ಟು ಮತವಾಗಿ ಪರಿವರ್ತನೆಯಾಗುತ್ತದೆ ಎಂಬುದನ್ನು ಮಾತ್ರ ಕಾದು ನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ