ಆ್ಯಪ್ನಗರ

ಬಂಗ್ಲೆ ಖಾಲಿ ಮಾಡಿ: ಮಾಜಿ ಡಿಸಿಎಂ ಪರಮೇಶ್ವರ್‌ಗೆ ನೋಟಿಸ್‌

ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ ಅವರಿಗೆ ಮಂಜೂರು ಮಾಡಿದ್ದ ಸರಕಾರಿ ಬಂಗ್ಲೆಯನ್ನು ತೆರವುಗೊಳಿಸುವಂತೆ ಬಿಡಿಎ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

Vijaya Karnataka 10 Sep 2019, 5:00 am
ಬೆಂಗಳೂರು : ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ ಅವರಿಗೆ ಮಂಜೂರು ಮಾಡಿದ್ದ ಸರಕಾರಿ ಬಂಗ್ಲೆಯನ್ನು ತೆರವುಗೊಳಿಸುವಂತೆ ಬಿಡಿಎ ಸೋಮವಾರ ನೋಟಿಸ್‌ ಜಾರಿ ಮಾಡಿದೆ.
Vijaya Karnataka Web bda give notice to g parameshwar
ಬಂಗ್ಲೆ ಖಾಲಿ ಮಾಡಿ: ಮಾಜಿ ಡಿಸಿಎಂ ಪರಮೇಶ್ವರ್‌ಗೆ ನೋಟಿಸ್‌


ಸದರಿ ಸರಕಾರಿ ಬಂಗ್ಲೆಯನ್ನು ಬಿಡಿಎ ನಿರ್ಮಿಸಿದೆ. ಡಿಸಿಎಂ ಆಗಿದ್ದ ವೇಳೆ ಡಾ.ಪರಮೇಶ್ವರ್‌ಗೆ ಮಾಸಿಕ ಬಾಡಿಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿತ್ತು. ಈಗ ಈ ಬಂಗ್ಲೆಯನ್ನು ನೂತನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹಂಚಿಕೆ ಮಾಡಿದ್ದು, ಸರಕಾರಿ ವಸತಿಗೃಹವನ್ನು ಪ್ರಾಧಿಕಾರದ ಸುಪರ್ದಿಗೆ ವಹಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಬಂಗ್ಲೆ ತೆರವು ವೇಳೆ ಈವರೆಗಿನ ಅವಧಿಯಲ್ಲಿ ಉಪಯೋಗಿಸಿರುವ ವಿದ್ಯುಚ್ಛಕ್ತಿ ವೆಚ್ಚ ಹಾಗೂ ನೀರಿನ ವೆಚ್ಚದ ಬಿಲ್‌ಗಳ ಮಾಹಿತಿಯನ್ನು ನೀಡಿ ಒಂದು ವಾರದೊಳಗೆ ಬಂಗ್ಲೆಯನ್ನು ಸುಪರ್ದಿಗೆ ವಹಿಸುವಂತೆ ಮಾಜಿ ಡಿಸಿಎಂ ಸೂಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ