ಆ್ಯಪ್ನಗರ

ಸರಕಾರಿ ಬಂಗಲೆ ಖಾಲಿ ಮಾಡುವಂತೆ ಮಾಜಿ ಡಿಸಿಎಂ ಪರಮೇಶ್ವರ್‌ಗೆ ಬಿಡಿಎ ನೋಟಿಸ್

ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರು ಒಂದು ವಾರದ ಒಳಗಾಗಿ ತಾವು ವಾಸವಾಗಿದ್ದ ಸರಕಾರಿ ಬಂಗಲೆಯನ್ನು ಹಿಂತಿರುಗಿಸುವಂತೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ನೊಟೀಸ್ ಜಾರಿಗೊಳಿಸಿದೆ.

Vijaya Karnataka Web 9 Sep 2019, 10:02 pm
ಬೆಂಗಳೂರು: ಸದಾಶಿವನಗರದಲ್ಲಿರುವ ಸರಕಾರಿ ಬಂಗಲೆಯನ್ನು ಒಂದು ವಾರದೊಳಗಾಗಿ ಖಾಲಿ ಮಾಡುವಂತೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ) ನೊಟೀಸ್ ಜಾರಿಗೊಳಿಸಿದೆ.
Vijaya Karnataka Web parameshawar


ಸದಾಶಿವನಗರದ ಎರಡನೇ ಹಂತದಲ್ಲಿರುವ ಈ ಸರಕಾರಿ ನಿವಾಸವನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿತ್ತು. ಪರಮೇಶ್ವರ್ ಅಧಿಕಾರದಲ್ಲಿದ್ದಾಗ ಈ ನಿವಾಸದಲ್ಲಿ ವಾಸವಾಗಿದ್ದರು. ಅಧಿಕಾರದಿಂದ ಇಳಿದ ಬಳಿಕವೂ ಪರಮೇಶ್ವರ್ ಬಂಗಲೆಯನ್ನು ಬಿಡಿಎಗೆ ಹಿಂತಿರುಗಿಸಿರಲಿಲ್ಲ.

ಈ ಬಂಗಲೆ ಪ್ರಸ್ತುತ ನೂತನ ಗೃಹ ಸಚಿವರ ಕಚೇರಿ ಉಪಯೋಗಕ್ಕೆ ಹಂಚಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಬಂಗಲೆಯನ್ನು ಒಂದು ವಾರದ ಒಳಗಾಗಿ ಹಿಂತಿರುಗಿಸುವಂತೆ ಬಿಡಿಎ ಸೂಚಿಸಿದೆ.

ಜೊತೆಗೆ ವಿದ್ಯುಚ್ಛತ್ತಿ ವೆಚ್ಚ ಹಾಗೂ ನೀರಿನ ವೆಚ್ಚವನ್ನು ಸಂಬಂಧಿಸಿದ ಇಲಾಖೆಗೆ ಪಾವತಿಸಿದ ಬಿಲ್ಲುಗಳ ಜೊತೆಗೆ ಪ್ರಾಧಿಕಾರದ ಸುಪರ್ದಿಗೆ ವಹಿಸುವಂತೆ ನೊಟೀಸಿನಲ್ಲಿ ಉಲ್ಲೇಖ ಮಾಡಲಾಗಿದೆ. ಸದ್ಯ ಪರಮೇಶ್ವರ್ ಖಾಸಗಿ ನಿವಾಸದಲ್ಲಿ ವಾಸವಾಗಿದ್ದರೂ ಸರಕಾರಿ ಬಂಗಲೆಯನ್ನು ಹಿಂತಿರುಗಿಸಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ