ಆ್ಯಪ್ನಗರ

ಸರಕಾರದ ವಿರುದ್ಧ ‘ಪಂಚ ಪಾತಕ’ದ ಆರೋಪ ಮಾಡಿದ ಮೋದಿ

ಕಾಂಗ್ರೆಸ್‌ ಸರಕಾರದ ವಿರುದ್ಧ 'ಪಂಚ ಪಾತಕ'ದ ಆರೋಪ ಹೊರಿಸಿರುವ ಪ್ರಧಾನಿ ಮೋದಿ, ಸಿದ್ದರಾಮಯ್ಯ ಸರಕಾರದ 'ತ್ರಿವಳಿ ವ್ಯಕ್ತಿ'ಗಳಿಂದ ಬೆಂಗಳೂರು ತ್ರಾಹಿ ತ್ರಾಹಿ ಎಂದು ರೋಧಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 9 May 2018, 8:01 am
ಬೆಂಗಳೂರು: ಕಾಂಗ್ರೆಸ್‌ ಸರಕಾರದ ವಿರುದ್ಧ 'ಪಂಚ ಪಾತಕ'ದ ಆರೋಪ ಹೊರಿಸಿರುವ ಪ್ರಧಾನಿ ಮೋದಿ, ಸಿದ್ದರಾಮಯ್ಯ ಸರಕಾರದ 'ತ್ರಿವಳಿ ವ್ಯಕ್ತಿ'ಗಳಿಂದ ಬೆಂಗಳೂರು ತ್ರಾಹಿ ತ್ರಾಹಿ ಎಂದು ರೋದಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web 0805-2-2-309


ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ,''ಐದು ವರ್ಷಗಳಲ್ಲಿ ಈ ಸರಕಾರ ಪಂಚ ಪಾತಕಗಳನ್ನು ಎಸಗಿದೆ. ಹೊಸದಿಲ್ಲಿಯಿಂದ ಗಲ್ಲಿಯವರೆಗೆ ಒಂದು ಕುಟುಂಬವನ್ನು ದೇವರಂತೆ ಪೂಜಿಸಿದ್ದು, ಭ್ರಷ್ಟಾಚಾರ ಮತ್ತು ಅಪರಾಧ, ಅತ್ಯಾಚಾರ, ರೈತರು ಹಾಹಾಕಾರ ಪಡುವ ಸನ್ನಿವೇಶ ನಿರ್ಮಾಣದ ಜತೆಗೆ ದೇಶ, ಸಮಾಜ, ಜಾತಿಯನ್ನು ವಿಭಜಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ. ಸಿದ್ದರಾಮಯ್ಯ ಎಲ್ಲ ಆರೋಪಗಳಿಗೂ ಅವರೇ ಕ್ಲೀನ್‌ಚಿಟ್‌ ಕೊಟ್ಟುಕೊಳ್ಳುತ್ತಿದ್ದಾರೆ,'' ಎಂದು ವ್ಯಂಗ್ಯವಾಡಿದರು. ''ಸಿದ್ದರಾಮಯ್ಯ ಸರಕಾರದ 'ತ್ರಿವಳಿ'ಗಳಿಂದ ಬೆಂಗಳೂರು ನಗರ ಗೌರವ ಕುಂದಿದೆ. ಇವರು ಒಬ್ಬರಿಗೊಬ್ಬರು ಸಹಕಾರಿ ಮಾತ್ರವಲ್ಲ, ಭ್ರಷ್ಟಾಚಾರ ಹಾಗೂ ಅಕ್ರಮದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಇವರಿಂದಾಗಿ ಬೆಂಗಳೂರಿನಲ್ಲಿ ತ್ರಾಹಿ ಮಾಮ್‌ ತ್ರಾಹಿ ಮಾಮ್‌ ಎಂದು ಮೊರೆಯಿಡುವ ಸನ್ನಿವೇಶ ನಿರ್ಮಾಣವಾಗಿದೆ,'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃತಜ್ಞತೆ ಸಲ್ಲಿಸಿದ ಬೇಬಿ ಸಾರಾ:
ಉನ್ನತ ವ್ಯಾಸಂಗಕ್ಕೆ ಎಲ್ಲಿಂದಲೂ ನೆರವು ಸಿಗದೇ ಇದ್ದಾಗ ಸಹಾಯ ಹಸ್ತ ಚಾಚಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಡ್ಯದ ಮುಸ್ಲಿಂ ಯುವತಿ ವೇದಿಕೆಗೆ ಬಂದು ಕೃತಜ್ಞತೆ ಸಲ್ಲಿಸಿದ ಹೃದಯಸ್ಪರ್ಶಿ ಘಟನೆ ಈ ವೇದಿಕೆಯಲ್ಲಿ ನಡೆಯಿತು. ಮೈಶುಗರ್‌ ಫ್ಯಾಕ್ಟ್ರಿಯಲ್ಲಿ ಕೆಲಸ ಮಾಡುವ ಮಂಡ್ಯದ ಅಬ್ದುಲ್‌ ಇಲಿಯಾಸ್‌ ಎಂಬುವರ ಪುತ್ರಿ ಬೇಬಿ ಸಾರಾ ಕುಟುಂಬ ಸಮೇತ ವೇದಿಕೆಗೆ ಬಂದು ವ್ಯಾಸಂಗಕ್ಕೆ ಅನುಕೂಲವಾಗಲು ಕೆನರಾ ಬ್ಯಾಂಕ್‌ನಿಂದ ಸಾಲ ಕೊಡಿಸಿ, ಐಬಿಎಂ ಕಂಪನಿಯಲ್ಲಿ ಉದ್ಯೋಗ ಸಿಗುವಂತೆ ನೋಡಿಕೊಂಡ ಮೋದಿ ಅವರಿಗೆ ಪುಸ್ತಕದ ಗಿಫ್ಟ್‌ ಕೊಟ್ಟು ಆಶೀರ್ವಾದ ಪಡೆದಳು. ಈ ಕುಟುಂಬದ ಕೃತಜ್ಞತಾ ಭಾವ ಕಂಡು ಮೋದಿ ವೇದಿಕೆಯಲ್ಲಿ ಭಾವಪರವಶರಾದರು.

ಭಾಷಾಂತರಕ್ಕೆ ಸೂಚಿಸಿದ ಮೋದಿ:
ಭಾಷಣದ ಭಾಷಾಂತರ ಬೇಡ ಎಂದು ಸಾರ್ವಜನಿಕರು ಮನವಿ ಮಾಡಿದರೂ, ಮೋದಿ ಸಚಿವ ಅನಂತಕುಮಾರ್‌ ಅವರಿಗೆ ಸೂಚಿಸಿದರು. ನನ್ನ ಭಾಷಣವನ್ನು ಟಿವಿ ವಾಹಿನಿಯ ಮೂಲಕ ಹಳ್ಳಿಗಳಲ್ಲಿ ಸಹಸ್ರಾರು ಜನರು ನೋಡುತ್ತಾರೆ. ಆದರೆ ಅವರೆಲ್ಲರಿಗೂ ಹಿಂದಿ ಅರ್ಥವಾಗುವುದಿಲ್ಲ. ಹೀಗಾಗಿ ಭಾಷಾಂತರ ಅಗತ್ಯ ಎಂದು ಹೇಳಿದ ಬಳಿಕ ಭಾಷಾಂತರ ಬೇಡ ಎನ್ನುವವರು ಸುಮ್ಮನಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ