ಆ್ಯಪ್ನಗರ

ಸುವರ್ಣ ಸೌಧ ಮುಂದೆ ಕುರಿ ಮಂದೆಯೊಂದಿಗೆ ಪ್ರತಿಭಟನೆ

ಬೆಳಗಾವಿ ಸುವರ್ಣ ಸೌಧ ಬಳಿಯ ಹೆದ್ದಾರಿಯಲ್ಲಿ ಸಾವಿರಾರು ಕುರಿಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.

Vijaya Karnataka Web 15 Nov 2017, 5:37 pm
ಬೆಳಗಾವಿ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಸುವರ್ಣ ವಿಧಾನಸೌಧಕ್ಕೆ ಕುರಿಗಳನ್ನು ನುಗ್ಗಿಸಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
Vijaya Karnataka Web belagavi hundreds of sheeps in highway
ಸುವರ್ಣ ಸೌಧ ಮುಂದೆ ಕುರಿ ಮಂದೆಯೊಂದಿಗೆ ಪ್ರತಿಭಟನೆ


ಬುಧವಾರ ಮಧ್ಯಾಹ್ನ ಕುರಿ ಸಾಗಿಸುವ ನೆಪದಲ್ಲಿ ರಾಷ್ಟ್ರಿಯ ಹೆದ್ದಾರಿ ಪ್ರವೇಶಿಸಿದ ಪ್ರತಿಭಟನಾಕಾರರು ಸುವರ್ಣಸೌಧದ ದ್ವಾರದ ಬಳಿ ಕುರಿ ನುಗ್ಗಿಸಲು ಯತ್ನಿಸಿದರು.

ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಅವರನ್ನು ತಡೆದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಪರಿಸ್ಥಿತಿ ಮಿತಿಮೀರಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಬಳಿಕ 25 ಪ್ರತಿಭಟನಾಕಾರರನ್ನು ಬಂಧಿಸಿದರು.
ಆದರೆ, ಹೆದ್ದಾರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಕುರಿಗಳನ್ನು ಹೊರಹಾಕಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಲಾಠಿ ಬೀಸಿದರೂ ಕುರಿಗಳು ರಸ್ತೆ ಬಿಡಲಿಲ್ಲ. ಕೊನೆಗೆ ಸಮಾಧಾನದಿಂದ ಕುರಿಗಳನ್ನು ಹೆದ್ದಾರಿಯಿಂದ ಹೊರಹಾಕಿದರು. ಈ ವೇಳೆ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಪ್ರತಿಭಟನಾಕಾರರು ಬಳಿಕ ಸುವರ್ಣ ಗಾರ್ಡನ್ ನಲ್ಲಿ ಪ್ರತಿಭಟನೆ ಮುಂದುವರಿಸಿದರು. ಪೊಲೀಸರ ಬಂಧನದಿಂದ ಕೆಲಹೊತ್ತಿನ ಬಳಿಕ ಬಿಡುಗಡೆಗೊಂಡ ಪ್ರತಿಭಟನಾಕಾರರು ಕೂಡ ಗುಂಪು ಸೇರಿಕೊಂಡರು.

Belagavi: Hundreds of Sheeps in Highway

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ