ಆ್ಯಪ್ನಗರ

Karnataka Election 2023: ಬೆಳಗಾವಿ ಲೋಕಸಭೆ ಕ್ಷೇತ್ರ: ಕಾಂಗ್ರೆಸ್‌, ಬಿಜೆಪಿ ಟಿಕೆಟ್‌ ಹಂಚಿಕೆ ಸವಾಲು, ಸಿಡಿ ಪ್ರಕರಣವೂ ಮುನ್ನೆಲೆಗೆ

Karnataka Election 2023: ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ಇನ್ನೊಂದೆಡೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕತ್ತಿ ಮಸೆಯುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಡ ಹೇರುತ್ತ ಸುದ್ದಿಯಲ್ಲಿದ್ದಾರೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 23 Feb 2023, 12:11 pm

ಹೈಲೈಟ್ಸ್‌:

  • ಬೆಳಗಾವಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವೈಯಕ್ತಿಕ ರಾಜಕಾರಣವೇ ಹೆಚ್ಚು ಪ್ರಭಾವ ಬೀರುತ್ತದೆ. ಕಾಂಗ್ರೆಸ್‌, ಬಿಜೆಪಿ ಪ್ರಾಬಲ್ಯದ ನಡುವೆ ಈ ಭಾಗದಲ್ಲಿಅಕೌಂಟ್‌ ತೆರೆಯಲು ಜೆಡಿಎಸ್‌ ಸಾಕಷ್ಟು ಕಸರತ್ತು ನಡೆಸುತ್ತಿದೆ.
  • ಕಾಂಗ್ರೆಸ್‌ನಿಂದ ಲಕ್ಷ್ಮಿ ಹೆಬ್ಬಾಳ್ಕರ್‌ ಪುನಃ ಸ್ಪರ್ಧಿಸುವುದು ನಿಶ್ಚಿತ. ಬಿಜೆಪಿಯಿಂದ ಸಂಜಯ್‌ ಪಾಟೀಲ್‌, ಧನಂಜಯ ಜಾಧವ್‌ ಮತ್ತು ರಮೇಶ್‌ ಜಾರಕಿಹೊಳಿ ಆಪ್ತರು ಪೈಪೋಟಿಗೆ ಬಿದ್ದಿದ್ದಾರೆ.
  • ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ವಿರುದ್ಧ ಕತ್ತಿ ಮಸೆಯುತ್ತಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸುದ್ದಿಯಲ್ಲಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web hebbalkar, ramesh jarkiholi
ಲಕ್ಷ್ಮಿ ಹೆಬ್ಬಾಳ್ಕರ್‌, ರಮೇಶ್‌ ಜಾರಕಿಹೊಳಿ
ಮಹೇಶ್‌ ವಿಜಾಪುರ
ಬೆಳಗಾವಿ: ಬೆಳಗಾವಿ ಚುನಾವಣಾ ಅಖಾಡ ರಂಗೇರುತ್ತಿದ್ದು, ಟಿಕೆಟ್‌ ಪೈಪೋಟಿ ಭಾರಿ ಸದ್ದು ಮಾಡಿದೆ. ಸ್ವಪಕ್ಷೀಯರಲ್ಲೇ ಟಿಕೆಟ್‌ ಸ್ಪರ್ಧೆ ಬಿರುಸುಗೊಂಡಿರುವುದು ಬಿಜೆಪಿ, ಕಾಂಗ್ರೆಸ್‌ಗೆ ಸವಾಲಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವೈಯಕ್ತಿಕ ರಾಜಕಾರಣವೇ ಹೆಚ್ಚು ಪ್ರಭಾವ ಬೀರುತ್ತದೆ. ಕಾಂಗ್ರೆಸ್‌, ಬಿಜೆಪಿ ಪ್ರಾಬಲ್ಯದ ನಡುವೆ ಈ ಭಾಗದಲ್ಲಿಅಕೌಂಟ್‌ ತೆರೆಯಲು ಜೆಡಿಎಸ್‌ ಸಾಕಷ್ಟು ಕಸರತ್ತು ನಡೆಸುತ್ತಿದೆ.

ಬೆಳಗಾವಿ ದಕ್ಷಿಣ:

ಬಿಜೆಪಿಯಿಂದ ಹಾಲಿ ಶಾಸಕ ಅಭಯ್‌ ಪಾಟೀಲ್‌ ಮರು ಸ್ಪರ್ಧೆ ಬಹುತೇಕ ಖಚಿತ. ಕಾಂಗ್ರೆಸ್‌ನಿಂದ ರಮೇಶ್‌ ಕುಡಚಿ ಸೇರಿ 6ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.
ಬೆಳಗಾವಿ ಉತ್ತರ:
ಹಾಲಿ ಶಾಸಕ ಅನಿಲ್‌ ಬೆನಕೆ ಅವರನ್ನು ಓವರ್‌ಟೇಕ್‌ ಮಾಡಲು ಬಿಜೆಪಿಯಲ್ಲೇ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ್‌, ಮಾಜಿ ಶಾಸಕ ಫಿರೋಜ್‌ ಸೇರಿ ಹಲವು ಆಕಾಂಕ್ಷಿಗಳಿದ್ದಾರೆ.

BK Hariprasad: ಅಮಿತ್ ಶಾ ಸಿಡಿ ಎಕ್ಸ್‌ಪರ್ಟ್‌, ಅದಕ್ಕೆ ರಮೇಶ್‌ ಜಾರಕಿಹೊಳಿ ಅಲ್ಲಿಗೆ ಹೋಗಿದ್ದಾರೆ: ಬಿಕೆ ಹರಿಪ್ರಸಾದ್

ಬೆಳಗಾವಿ ಗ್ರಾಮೀಣ
:
ಕಾಂಗ್ರೆಸ್‌ನಿಂದ ಲಕ್ಷ್ಮಿ ಹೆಬ್ಬಾಳ್ಕರ್‌ ಪುನಃ ಸ್ಪರ್ಧಿಸುವುದು ನಿಶ್ಚಿತ. ಬಿಜೆಪಿಯಿಂದ ಸಂಜಯ್‌ ಪಾಟೀಲ್‌, ಧನಂಜಯ ಜಾಧವ್‌ ಮತ್ತು ರಮೇಶ್‌ ಜಾರಕಿಹೊಳಿ ಆಪ್ತರು ಪೈಪೋಟಿಗೆ ಬಿದ್ದಿದ್ದಾರೆ.

ಬೈಲಹೊಂಗಲ:
ಕಾಂಗ್ರೆಸ್‌ನಿಂದ ಹಾಲಿ ಶಾಸಕ ಮಹಾಂತೇಶ್‌ ಕೌಜಲಗಿ ಪುನಃ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಬಿಜೆಪಿಯಿಂದ ಡಾ.ವಿ.ಐ.ಪಾಟೀಲ್‌ ಮತ್ತು ಜಗದೀಶ್‌ ಮೆಟಗುಡ್‌ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.

ಖಾನಾಪುರ:
ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಲು ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ತಯಾರಾಗಿದ್ದಾರೆ. ಬಿಜೆಪಿಯಿಂದ ಅರವಿಂದ ಪಾಟೀಲ್‌, ಧನಶ್ರೀ ಸರ್‌ದೇಸಾಯಿ, ಡಾ.ಸೋನಾಲಿ ಸರ್ನೋಬತ್‌, ಉದ್ಯಮಿ ವಿಠ್ಠಲ ಹಲಗೇಕರ್‌ ನಡುವೆ ತೀವ್ರ ಪೈಪೋಟಿಯಿದೆ.

ಗೋಕಾಕ್‌:
ಬಿಜೆಪಿಯಿಂದ ರಮೇಶ್‌ ಜಾರಕಿಹೊಳಿ ಸ್ಪರ್ಧೆಗೆ ಮುಕ್ತ ಆಯ್ಕೆಯಿದೆ. ಕಾಂಗ್ರೆಸ್‌ನಿಂದ ಅಶೋಕ್‌ ಪೂಜಾರಿ ಸೇರಿದಂತೆ ಚಂದ್ರಶೇಖರ ಕೊಣ್ಣೂರ, ಪ್ರಕಾಶ ಬಾಗೋಜಿ ಆಕಾಂಕ್ಷಿಗಳು.

ಅರಭಾವಿ:

ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಮರು ಸ್ಪರ್ಧೆ ಖಚಿತ. ಕಾಂಗ್ರೆಸ್‌ನಿಂದ ಭೀಮಪ್ಪ ಗಡಾದ, ಅರವಿಂದ ದಳವಾಯಿ, ಬಿ.ಬಿ.ಹಂದಿಗುಂದ, ರಮೇಶ್‌ ಉಟಗಿ, ಮಲ್ಲಿಕಾರ್ಜುನ ಕಬ್ಬೂರ, ಲಖನ್‌ ಸವಸುದ್ದಿ ರೇಸ್‌ನಲ್ಲಿದ್ದಾರೆ.

ಚನ್ನಮ್ಮನ ಕಿತ್ತೂರು:
ಬಿಜೆಪಿಯ ಹಾಲಿ ಶಾಸಕ ಮಹಾಂತೇಶ್‌ ದೊಡ್ಡಗೌಡರ್‌ ಮರು ಸ್ಪರ್ಧೆಗೆ ಉಮೇದಿನಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಹಳೆ ಹುಲಿ ಡಿ.ಬಿ.ಇನಾಮದಾರ್‌ ಮತ್ತು ಬಾಬಾಸಾಹೇಬ್‌ ಪಾಟೀಲ್‌ ನಡುವೆ ಪೈಪೋಟಿಯಿದೆ.

ರಾಮದುರ್ಗ:

ಬಿಜೆಪಿಯಿಂದ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಜತೆಗೆ ಅವರ ಸಹೋದರ ಮಲ್ಲಣ್ಣ ಯಾದವಾಡ ಮತ್ತು ಪಿ.ಎಫ್‌.ಪಾಟೀಲ್‌ ಆಕಾಂಕ್ಷಿಗಳು. ಕಾಂಗ್ರೆಸ್‌ನಿಂದ ಅಶೋಕ್‌ ಪಟ್ಟಣ ಸೇರಿದಂತೆ 5ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.

ಸವದತ್ತಿ ಯಲ್ಲಮ್ಮ:
ಕ್ಷೇತ್ರದ ಶಾಸಕರಾಗಿದ್ದ ಆನಂದ ಮಾಮನಿ ನಿಧನದ ಹಿನ್ನೆಲೆಯಲ್ಲಿಅವರ ಪತ್ನಿ ರತ್ನಾ ಮಾಮನಿ ಅವರಿಗೆ ಅವಕಾಶ ನೀಡುವ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್‌ನಲ್ಲಿ ಪಂಚನಗೌಡ ದ್ಯಾಮನಗೌಡರ, ವಿಶ್ವಾಸ್‌ ವೈದ್ಯ, ಸೌರವ್‌ ಛೋಪ್ರಾ ಸೇರಿದಂತೆ ಸ್ಪರ್ಧಾಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ.

Congress On ramesh jarkiholi : ರಮೇಶ್ ಜಾರಕಿಹೊಳಿ ಡಿಕೆಶಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವೈಯಕ್ತಿಕ ದ್ವೇಷ ತೋರಿಸಿದ್ದಾರೆ: ರಮೇಶ್ ಬಾಬು ಆರೋಪ
ಪಕ್ಷವಾರು ಹಾಲಿ ಬಲ
ಬಿಜೆಪಿ -07
ಕಾಂಗ್ರೆಸ್‌- 03
ಜೆಡಿಎಸ್‌ -00

ಟ್ರೆಂಡ್:
ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ವಿರುದ್ಧ ಕತ್ತಿ ಮಸೆಯುತ್ತಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸುದ್ದಿಯಲ್ಲಿದ್ದಾರೆ. ಪಂಚಮಸಾಲಿ ಹೋರಾಟದಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಕೂಡ ಉತ್ಸಾಹದಲ್ಲಿದ್ದಾರೆ. ರಮೇಶ್‌ ಜಾರಕಿಹೊಳಿ ತಾವು ಗೆಲ್ಲುವುದರ ಜತೆಗೆ ಬೆಂಬಲಿಗರನ್ನೂ ಗೆಲ್ಲಿಸಿ ತರುವುದಕ್ಕಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಬೆಳಗಾವಿ ಗ್ರಾಮೀಣ ಬಿಟ್ಟು ಗೋಕಾಕ್‌ನಲ್ಲಿ ಸ್ಪರ್ಧಿಸಿದರೆ ಅದೃಷ್ಟ ಕೈಹಿಡಿಯಬಹುದಾ ಎಂಬ ಚರ್ಚೆ ಜೋರಾಗಿದೆ.

ಹೊಸ ಅಲೆ

2023ರ ಚುನಾವಣೆಯಲ್ಲಿ ಹೊಸ ಮುಖಗಳನ್ನು ನೋಡಬೇಕು. ಅದರಲ್ಲೂ ಯಂಗಸ್ಟರ್‌ ಗೆದ್ದು ಬರಬೇಕು ಎನ್ನುವ ಹೊಸ ಅಲೆ ಕೂಡ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಈಗಾಗಲೆ ಹ್ಯಾಟ್ರಿಕ್‌, ಸಿಕ್ಸರ್‌ಗಳನ್ನು ಬಾರಿಸಿದವರು ಹೆಚ್ಚಿರುವ ಕಣದಲ್ಲಿ ಪ್ರಾಮಾಣಿಕ ಮತ್ತು ಹೊಸ ಅಭ್ಯರ್ಥಿಗಳತ್ತ ಯುವ ಜನಾಂಗದ ದೃಷ್ಟಿ ಹರಿಯುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಗುದ್ದಾಟದ ನಡುವೆ ಜೆಡಿಎಸ್‌ ಅಸ್ತಿತ್ವಕ್ಕಾಗಿ ಹೊಸ ಮುಖಗಳನ್ನು ಪರಿಚಿಸುತ್ತಿದ್ದರೆ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪೈಪೋಟಿ ನೀಡಿದ ಆಮ್‌ ಆದ್ಮಿ ಪಾರ್ಟಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ