ಆ್ಯಪ್ನಗರ

ಉಗ್ರರ ಗುಂಡಿಗೆ ಹುತಾತ್ಮರಾದ ಬೆಳಗಾವಿ ಯೋಧ: ರಾಹುಲ್ ಸರ್ವೋಚ್ಛ ತ್ಯಾಗಕ್ಕೆ ಸೇನೆ ಸಲಾಂ

'ರಾಹುಲ್ ಓರ್ವ ಧೈರ್ಯವಂತ, ಸಾಹಸಿ, ಸ್ಫೂರ್ತಿದಾಯಕ ಹಾಗೂ ಪ್ರಾಮಾಣಿಕ ಯೋಧ. ಅವರ ಸರ್ವೋಚ್ಛ ತ್ಯಾಗ ಹಾಗೂ ಬಲಿದಾನವನ್ನು ದೇಶ ಸದಾ ಸ್ಮರಿಸುತ್ತೆ' - ಭಾರತೀಯ ಸೇನಾ ಪ್ರಕಟಣೆಯಲ್ಲಿ ಹುತಾತ್ಮ ಯೋಧನ ಗುಣಗಾನ

Vijaya Karnataka Web 8 Nov 2019, 8:19 pm
ಜಮ್ಮು -ಕಾಶ್ಮೀರ: ಕಣಿವೆ ರಾಜ್ಯದ ಕೃಷ್ಣಾ ಘಾಟಿ ವಲಯದಲ್ಲಿ ಪಾಕ್‌ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಬೆಳಗಾವಿ ಯೋಧ ಹುತಾತ್ಮನಾಗಿದ್ದಾನೆ. 21 ವರ್ಷ ವಯಸ್ಸಿನ ರಾಹುಲ್ ಭೈರು ಸುಲಗೇಕರ್‌ ಹುತಾತ್ಮ ಯೋಧ. ಬೆಳಗಾವಿ ತಾಲ್ಲೂಕಿನ ಉಚ್ಚಗಾಂವ್, ರಾಹುಲ್‌ ಹುಟ್ಟೂರು. ಮಗ ಹುತಾತ್ಮನಾದ ಸುದ್ದಿ ಕೇಳಿದ ತಾಯಿ ಗೀತಾ ಶೋಕ ಸಾಗರದಲ್ಲಿ ಮುಳುಗಿದ್ದಾರೆ.
Vijaya Karnataka Web belagavi soldier martyred in the line of duty
ಉಗ್ರರ ಗುಂಡಿಗೆ ಹುತಾತ್ಮರಾದ ಬೆಳಗಾವಿ ಯೋಧ: ರಾಹುಲ್ ಸರ್ವೋಚ್ಛ ತ್ಯಾಗಕ್ಕೆ ಸೇನೆ ಸಲಾಂ


ಪುಲ್ವಾಮಾ ಹುತಾತ್ಮ ಯೋಧರ ಮಕ್ಕಳಿಗೆ ಸೆಹ್ವಾಗ್ ಶಾಲೆಯಲ್ಲಿ ಆಟ-ಪಾಠ!

ಗುರುವಾರ ಪೂಂಚ್‌ ಜಿಲ್ಲೆಯ ಕೃಷ್ಣಘಾಟಿ ವಲಯದಲ್ಲಿ ಪಾಕ್ ಸೇನೆಯ ಸಂಶಯಾಸ್ಪದ ಚಲನವಲನ ಕಂಡು ಬಂತು. ಪಾಕ್ ಸೇನೆ ಕದನ ವಿರಾಮವನ್ನೂ ಉಲ್ಲಂಘಸಿತ್ತು. ಹೀಗಾಗಿ, ಪಾಕ್ ಪ್ರೇರಿತ ಉಗ್ರರು ಹಾಗೂ ಪಾಕ್ ಸೇನೆಯ ಜೊತೆ ಭಾರತೀಯ ಸೇನಾಪಡೆಯ ಕಾಳಗ ಶುರುವಾಯ್ತು. ಈ ವೇಳೆ, ಯೋಧ ರಾಹುಲ್ ಭೈರು ಸುಲಗೇಕರ್ ಅವರಿಗೆ ಗುಂಡು ತಗುಲಿತು. ಕೂಡಲೇ ಸಮೀಪದ ವೈದ್ಯಕೀಯ ಶಿಬಿರಕ್ಕೆ ರಾಹುಲ್‌ರನ್ನು ಕರೆತರಲಾಯ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾಹುಲ್ ಹುತಾತ್ಮರಾದರು.

ಹುತಾತ್ಮ ಯೋಧರು, ಪೊಲೀಸರಿಗೆ ಗೌರವ ಸಲ್ಲಿಕೆ

ರಾಹುಲ್ ಭೈರು ಸುಲಗೇಕರ್ ಓರ್ವ ಧೈರ್ಯವಂತ, ಸಾಹಸಿ, ಸ್ಫೂರ್ತಿದಾಯಕ ಹಾಗೂ ಪ್ರಾಮಾಣಿಕ ಯೋಧ ಎಂದು ಭಾರತೀಯ ಸೇನೆ ತನ್ನ ಪ್ರಕಟಣೆಯಲ್ಲಿ ಹೊಗಳಿದೆ. ರಾಹುಲ್ ಅವರ ಸರ್ವೋಚ್ಛ ತ್ಯಾಗ ಹಾಗೂ ಬಲಿದಾನವನ್ನು ದೇಶ ಸದಾ ಸ್ಮರಿಸುತ್ತೆ ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹುತಾತ್ಮರು ನಮಗೆಲ್ಲಮಾದರಿ ಆಗಬೇಕು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ