ಬೆಂಗಳೂರು: ಕಡಿಮೆ ಮೊತ್ತಕ್ಕೆ ನಿವೇಶನ ಕೊಡುವುದಾಗಿ ಸಾರ್ವಜನಿಕರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಬೃಂದಾವನ ಪ್ರಾಪರ್ಟೀಸ್ ಹಾಗೂ ಅದರ ಮಾಲೀಕ ದಿನೇಶ್ಗೌಡನ ವಿರುದ್ಧ ಇದುವರೆಗೂ 1200ಕ್ಕೂ ಅಧಿಕ ದೂರುಗಳು ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿತ್ಯ 300ಕ್ಕೂ ಅಧಿಕ ದೂರುಗಳು ಬರುತ್ತಿವೆ. ದೂರು ಸ್ವೀಕಾರಕ್ಕಾಗಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾದ ಕೌಂಟರ್ ತೆರೆಯಲಾಗಿದೆ. ಈ ದೂರುಗಳನ್ವಯ ಇದುವರೆಗೂ 17 ಕೋಟಿ ರೂ.ಗೂ ಅಧಿಕ ವಂಚನೆಯಾಗಿರುವ ಮಾಹಿತಿ ಸಿಕ್ಕಿದೆ. ಆರೋಪಿ ಬಂಧನಕ್ಕೆ ಉತ್ತರ ವಿಭಾಗದ ಮೂರು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾರಿಗೂ ಮೋಸ ಮಾಡಲ್ಲ: ದಿನೇಶ್ಗೌಡ
ಈ ನಡುವೆ ರಹಸ್ಯ ಸ್ಥಳದಲ್ಲಿ ಕುಳಿತು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿರುವ ದಿನೇಶ್ಗೌಡ, ''ನನ್ನ ಸಂಸ್ಥೆಯ ಬಗ್ಗೆ ಆರೋಪಗಳು ಕೇಳಿ ಬಂದಿವೆ. ದುಡ್ಡು, ನಿವೇಶನ ಜತೆ ದಿನೇಶ್ಗೌಡ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ನಾನು ಎಲ್ಲಿಯೂ ಪರಾರಿಯಾಗಿಲ್ಲ. ಗೊಂದಲದಿಂದ ನಿಮ್ಮೊಂದಿಗೆ ಇರಲು ಸಾಧ್ಯವಾಗಿಲ್ಲ. ಜತೆಗೆ ಎಲ್ಲಿಗೊಂದಲ ಆಯ್ತು ಎಂಬುದು ನನಗೂ ತಿಳಿದಿಲ್ಲ. ನೀವು ಕಷ್ಟಪಟ್ಟು ದುಡಿದು ನನ್ನ ಸಂಸ್ಥೆಗೆ ಕಟ್ಟಿರುವ ಹಣಕ್ಕೆ ಯಾವುದೇ ಮೋಸ ಆಗಲ್ಲ. ಅದಕ್ಕೆ ನಾನೇ ಗ್ಯಾರೆಂಟಿ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಜನರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸ್ ಮುಖ್ಯ ಪೇದೆಯ ಕೈ ಕಚ್ಚಿದ ಮಹಿಳೆಯ ಬಂಧನ!
ಯಾರಿಗೂ ಮೋಸ ಮಾಡಲ್ಲ: ದಿನೇಶ್ಗೌಡ
ಈ ನಡುವೆ ರಹಸ್ಯ ಸ್ಥಳದಲ್ಲಿ ಕುಳಿತು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿರುವ ದಿನೇಶ್ಗೌಡ, ''ನನ್ನ ಸಂಸ್ಥೆಯ ಬಗ್ಗೆ ಆರೋಪಗಳು ಕೇಳಿ ಬಂದಿವೆ. ದುಡ್ಡು, ನಿವೇಶನ ಜತೆ ದಿನೇಶ್ಗೌಡ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ನಾನು ಎಲ್ಲಿಯೂ ಪರಾರಿಯಾಗಿಲ್ಲ. ಗೊಂದಲದಿಂದ ನಿಮ್ಮೊಂದಿಗೆ ಇರಲು ಸಾಧ್ಯವಾಗಿಲ್ಲ. ಜತೆಗೆ ಎಲ್ಲಿಗೊಂದಲ ಆಯ್ತು ಎಂಬುದು ನನಗೂ ತಿಳಿದಿಲ್ಲ. ನೀವು ಕಷ್ಟಪಟ್ಟು ದುಡಿದು ನನ್ನ ಸಂಸ್ಥೆಗೆ ಕಟ್ಟಿರುವ ಹಣಕ್ಕೆ ಯಾವುದೇ ಮೋಸ ಆಗಲ್ಲ. ಅದಕ್ಕೆ ನಾನೇ ಗ್ಯಾರೆಂಟಿ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಜನರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸ್ ಮುಖ್ಯ ಪೇದೆಯ ಕೈ ಕಚ್ಚಿದ ಮಹಿಳೆಯ ಬಂಧನ!